ಉಡುಪಿ: ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ನಡೆಯಲಿದೆ. ಗ್ರಹಣ ದಿನ ಕೃಷ್ಣಮಠದಲ್ಲಿ ಏನೇನು ಆಚರಣೆ ಇರುತ್ತದೆ ಎಂಬ ಬಗ್ಗೆ ದಿವಾಣರಾದ ಡಾ. ಉದಯ ಸರಳತ್ತಾಯರು ಮಾಹಿತಿ ನೀಡಿದ್ದಾರೆ.
ಮಾ. 3 ರಂದ ಮಂಗಳವಾರ ಗ್ರಸ್ತೋದಯ ಚಂದ್ರಗ್ರಹಣ ನಡೆಯುತ್ತದೆ. ನಮ್ಮ ಭಾಗದಲ್ಲಿ ಸೂರ್ಯಾಸ್ತ ಸಮಯ 6:19 – 6:47 ಈ ವೇಳೆಗೆ ಮಾತ್ರ ಗ್ರಹಣ ಗೋಚರ ಆಗಲಿದೆ. ಕೇವಲ ಎಂಟು ನಿಮಿಷ ಮಾತ್ರ ಗೋಚರವಾಗಲಿದೆ ಎಂದು ತಿಳಿಸಿದ್ದಾರೆ.
ಏಕಾದಶಿಯಂತೆ ಕೃಷ್ಣಮಠದಲ್ಲಿ ಆಹಾರ ಸ್ವೀಕಾರ ಇಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟ ಇರಲ್ಲ. ರಾತ್ರಿ 7 ಗಂಟಗೆ ಸ್ನಾನ ಪೂರೈಸಿ ರಾತ್ರಿ ಪೂಜೆ ನಡೆಯುತ್ತೆ. ಗ್ರಹಣ ಕಾಲದಲ್ಲೂ ಕೃಷ್ಣಮಠ ತೆರೆದಿರುತ್ತೆ. ಗ್ರಹಣದ ದಿನವೇ ಹೋಳಿ ಹುಣ್ಣಿಮೆ. ಸಾಯಂಕಾಲ ಹೋಳಿ ಪ್ರಯುಕ್ತ ಮೆರವಣಿಗೆ ಇರುತ್ತದೆ ಎಂದು ವಿವರಿಸಿದ್ದಾರೆ.
ಕಡಿಯಾಳಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಮರುದಿನ ಎಂದಿನಂತೆ ಮಧ್ಯಾಹ್ನ ಮಹಾಪೂಜೆ ಅನ್ನದಾನ ಇರುತ್ತದೆ. ಗ್ರಹಣ ಕಾಲದಲ್ಲಿ ಮಧ್ವ ಸರೋವರದಲ್ಲಿ ಅನುಷ್ಟಾನ ಇರುತ್ತದೆ ಎಂದು ಹೇಳಿದ್ದಾರೆ.
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…
ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…
ಮದರಂಗಡಿ : ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ ; ಇಬ್ಬರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಉಡುಪಿ:ಮುದರಂಗಡಿ…
ಟೈಮಿಂಗ್ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್ಪ್ರೆಸ್ ಬಸ್ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ ಕಾಪು: ರಾಷ್ಟ್ರೀಯ…
ಉಡುಪಿ: 'ಭಗವತಿ ಟೂರಿಸ್ಟ್' ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ…
ಉಳ್ಳಾಲ: ತಲವಾರು ಹಿಡಿದು ದಾಂಧಲೆ ನಡೆಸಿದ ರೌಡಿ ಶೀಟರ್ ಸಹಿತ ಇಬ್ಬರ ಬಂಧನ ಮಂಗಳೂರು: ಇಲ್ಲಿನ ಬಾರ್ ಒಂದರಲ್ಲಿ ತಲವಾರು…