ಉಡುಪಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಸುಂದರ ಮಾಸ್ಟರ್ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಆಪಾದನೆಗಳು ಪ್ರಕಟವಾಗುತ್ತಿದ್ದು ಸಚಿವ ಕೋಟ ಸಮಾಜ ಕಲ್ಯಾಣ ಸಚಿವರಾದ ನಂತರ ಇಲಾಖೆಯಲ್ಲಿ ಒಂದೊಂದು ರೂಪಾಯಿಯೂ ದಲಿತರ ಪರವಾಗಿ ಸದ್ವಿನಿಯೋಗವಾಗುತ್ತಿದೆ.
ಬಡವರ ಮಕ್ಕಳು ಕಲಿಯುವ ಹಾಸ್ಟೆಲ್ ಗಳಲ್ಲಿ ಪಾರದರ್ಶಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ರಸ್ತೆ, ಚರಂಡಿಗೆ ವಿನಿಯೋಗವಾಗು ತ್ತಿದ್ದ ಅನುದಾನಗಳು ದಲಿತರ ಮಕ್ಕಳು ಕಲಿಯುವ ಅಂಬೇಡ್ಕರ್ ವಸತಿ ನಿಲಯ ಮತ್ತು ಕ್ರೈಸ್ ಶಾಲೆಗೆ ಮಂಜೂರು ಮಾಡಲಾಗಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದೆಲ್ಲೆಡೆ ಅಂಬೇಡ್ಕರ್ ಭವನಗಳು ಸುಸಜ್ಜಿತಗೊಳ್ಳುತ್ತಿದ್ದು ಪ್ರಥಮ ಬಾರಿಗೆ ಬಡ ದಲಿತ ಕುಟುಂಬಗಳಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಜಾರಿಯಾಗಿದೆ. ಇದರಿಂದ ವಾರ್ಷಿಕ ಸುಮಾರು 800 ಕೋಟಿ ರೂಪಾಯಿ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ಚಾಗುತ್ತಿದೆ ಸ್ವಾತಂತ್ಯದಿಂದ ಇಂದಿನವರೆಗೂ ದಲಿತೋದ್ದಾರದ ಮಾತುಗಳು ಕೇಳಿಬರುತ್ತಿವೆ ಹೊರತು ದಲಿತರಿಗೆ ಉದ್ಯೋಗವೂ ಸೇರಿದಂತೆ ಒಟ್ಟಾರೆ ಮೀಸಲಾತಿಯ ಹೆಚ್ಚಳ ಮಾಡಿದ್ದು ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾದ ಮೇಲೆ ಎನ್ನುವುದು ಮರೆಯಲಾಗದು. ಖಾಸಗಿ ದೇವಸ್ಥಾನಗಳಿಗೆ ಹಣ ಕೊಟ್ಟಿದ್ದಾರೆ ಎಂದು ಆರೋಪಿಸುವವರು ಅದನ್ನು ಪರಿಶಿಷ್ಟ ಜಾತಿಗೆ ಕರ್ಚು ಮಾಡಿದ್ದಾರೆ ಎನ್ನುವುದು ಮರೆಯಬಾರದು.
ಪರಿಶಿಷ್ಟ ಜಾತಿಯ ರಸ್ತೆಗಳೂ ಸೇರಿದಂತೆ ಇಲಾಖಾ ವಿಷಯದಲ್ಲಿ ಏನೇ ತಪ್ಪು ನಡೆದರೂ ಸಚಿವರೇ ನಿಂತು ದಲಿತರಿಗೆ ನ್ಯಾಯ ಒದ ಗಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಇಂದು ಭ್ರಷ್ಟಾಚಾರ ರಹಿಕ ಇಲಾಕೆಯೆಂದು ಗೌರವಕ್ಕೆ ಪಾತ್ರವಾಗಿದೆ. ಯಾವುದೇ ಸರ್ಕಾರ ಅಥವಾ ಮಂತ್ರಿಗಳು ಬಡವರ ಪರವಾಗಿ ಯಾವುದೇ ಘೋಷಣೆ ಮಾಡಿದರೂ ಸ್ವಲ್ಪ ವಿಳಂಬವಾದರೂ ಅನುಷ್ಠಾನವಾಗುವುದರಲ್ಲಿ ಎರಡು ಮಾತಿಲ್ಲ. ಅದನ್ನೆಲ್ಲ ಒಟ್ಟು ಸುಂದರ ಮಾಸ್ಟರ್ ನಂತಹ ಮುಖಂಡರು ಸಚಿವರ ಬಗ್ಗೆ ವ್ಯಕ್ತಿಗತವಾಗಿ ಟೀಕಿಸಿದ್ದು, ಟೀಕಿಸುವವರ ಗೌರವ ಹೆಚ್ಚುವುದಿಲ್ಲ. ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು,ಉಚಿತ ವಿದ್ಯುತ್ ನೀಡಿದ್ದು, ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿಮಾಡಿದ್ದು ಸೇರಿದಂತೆ ಅನೇಕ ದಲಿತಪರ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗ ಮೆಚ್ಚುವಂತಹದ್ದು.
ಈ ಹಿನ್ನಲೆಯಲ್ಲಿ ವಿನಃಕಾರಣ ಸಚಿವರನ್ನು ಟೀಕಿಸುವುದು ಸರಿಯಲ್ಲ ಇಲಾಖೆಯ ಕಾರ್ಯಕ್ರಮಗಳನ್ನು ಅತ್ಯಂತ ಅಭಿಮಾನದಿಂದ ಸಮರ್ತನೆ ಮಾಡಬೇಕಾದ ಅವಶ್ಯಕತೆ ಇದೆ ಯೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜ್ಯ SC ಮೋರ್ಚಾ ಪ್ರಧಾನ ಕಾರ್ಯದರ್ಶಿ ದಲಿತ ಮುಖಂಡ ದಿನಕರ ಬಾಬು ತಿಳಿಸಿದ್ದಾರೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…