ಉಡುಪಿ: ಸ್ಕಾರ್ಫ್ ಧರಿಸಿ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಬೇಕು ಎಂದು ಸರಕಾರದ ಬಳಿ ಬೇಡಿಕೆ ಇಟ್ಟು ಶಾಸಕರಿಗೆ ಮಂತ್ರಿಗಳಿಗೆ ಒತ್ತಡ ಹಾಕುವುದು ಸೂಕ್ತ ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದು ಒಳಿತು ಎಂಬ ಅಭಿಪ್ರಾಯವನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ಸಹಬಾಳ್ವೆ ತಂಡದ ಅಧ್ಯಕ್ಷನ ನೆಲೆಯಲ್ಲಿ ನೀಡಿದ್ದೇನೆ ಎಂದು ಸಹಬಾಳ್ವೆ ಉಡುಪಿ ತಂಡದ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
ಉಡುಪಿ ಶಾಸಕ ರಘುಪತಿ ಭಟ್ ರಿಗೂ ಭೇಟಿ ಆಗಿ ಈ ಮನವಿ ಮಾಡಿದ್ದೇವೆ ,ಅವರು ಸರಕಾರಕ್ಕೆ ಬರೆಯತ್ತೇನೆ ಹಾಗೂ ಸಂಬಂಧ ಪಟ್ಟ ಸಚಿವರ ಅಭಿಪ್ರಾಯ ಪಡೆಯುತ್ತೇನೆ ಸದ್ಯಕ್ಕೆ ಇದನ್ನು ಒಪ್ಪಿದರೆ ,ಅನ್ಯ ಸಂಘಟನೆಗಳು ಹೊಸ ಹೊಸಬೇಡಿಕೆಯೊಂದಿಗೆ ಬಂದು ಘರ್ಷಣೆಯ ವಾತಾವರಣ ಉಂಟಾದರೆ ಉಡುಪಿಯ ಶಾಂತಿ ಕದಡುವುದು ಎಂಬ ಭಯವನ್ನೂ ವ್ಯಕ್ತ ಪಡಿಸಿದ್ದಾರೆ.
ಈ ವಿದ್ಯಾರ್ಥಿನಿಯರ ಅಕೆಡೆಮಿಕ್ ಕರಿಯರ್ ಹಾಳಾಗಬಾರದು, ಈ ವಿಚಾರದ ಬೇಡಿಕೆ ಯನ್ನು ದೊಡ್ಡ ಮಟ್ಟದಲ್ಲಿ ಸಂಬಂಧ ಪಟ್ಟವರ ಬಳಿ ಸಂಬಂಧಪಟ್ಟವರ ಮುಖೇನ ಇಟ್ಟು ಮನವರಿಕೆ ಮಾಡಬೇಕು ವಿನಹ ,ಈ ರೀತಿ ತರಗತಿ ಬಹಿಷ್ಕಾರ ಮಾಡಿದರೆ ಇದು ಒಂದು ಐಸೋಲೇಟೆಡ್ ಮ್ಯಾಟರ್ ಆಗಿಬಿಡುತ್ತದೆ ಎಂದು ಮನವರಿಕೆ ಮಾಡಿದಾಗ ಕೊನೆಗೆ ವಿದ್ಯಾರ್ಥಿನಿಯರು ಸಮವಸ್ತ್ರದ ಭಾಗವಾದ ಶಾಲನ್ನೇ ಇತರ ಹುಡುಗಿಯರು ಹೆಗಲಿಗೆ ಹಾಕಿದರೆ ನಾವು ತಲೆಗೆ ಮಾತ್ರ ಹಾಕುತ್ತೇವೆ ,ಮುಖ ತೋರಿಸುತ್ತೇವೆ ಪರವಾಗಿಲ್ಲ ನಮ್ಮ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ ಎಂಬ ಬೇಡಿಕೆ ಯನ್ನು ಇಟ್ಟಿದ್ದು ಅದನ್ನೂ ಸರಕಾರಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮುಖೇನ ನೀಡಲಾಗಿದೆ ,ಅದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ , ವಿದ್ಯಾರ್ಥಿನಿಯರು ಹಟ ಹಿಡಿದು ತರಗತಿ ಬಹಿಷ್ಕಾರ ಮಾಡಿ ತಿಂಗಳಾಗುತ್ತಾ ಬಂತು, ಉಡುಪಿಯಲ್ಲಿ ಇದೊಂದು ಅನಪೇಕ್ಷಿತ ವಿವಾದ , ಈಗಾಗಲೇ ರಾಜ್ಯ ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟ ಆಗುತ್ತಿರುವ ಈ ಸುಧ್ದಿ ಬಗ್ಗೆ ಒಂದಿಷ್ಟು ತನಗೆ ತಿಳಿದ ಸತ್ಯಾಂಶ ತಮಗೆಲ್ಲರಿಗೂ ತಿಳಿಯಲಿ ಎಂದು ಅಮೃತ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…