ಉಪ್ಪಿನಂಗಡಿ: ರೆಸಾರ್ಟ್ ಒಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದು ಇತರ ಮೂವರು ಪರಾರಿಯಾಗಿದ್ದಾರೆ.
ಕುಶಾಲನಗರದ ಲೋಹಿತ್ ಮತ್ತು ವಿಟ್ಟಲದ ಶರೀಫ್ ಬಂಧಿತರಾಗಿದ್ದು ಪ್ರಕರಣದ ಪ್ರಮುಖ ಆರೋಪಿ ವಿಟ್ಲದ ಜಮಾಲು, ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿನಾಂಕ 07.01.2020 ರಂದು ಪೆರುಬುಲ್ಲಿ ಕೆರಿ ಕುಟ್ಯಾಟೂರ್ ತಳಿಪರಂಬ ತಾಲೂಕು ಕಣ್ಣೂರು ಜಿಲ್ಲೆ ಕೇರಳ ನಿವಾಸಿ ದಿಲೀಪ್ ಟಿ ಎಂಬವರ ಮೋಬೈಲ್ ಗೆ ಹುಡುಗಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆಗೆ ಕೆಲಸಕ್ಕೆ ಜನ ಬೇಕಿದ್ದರೆ ಕಾಸರಗೋಡಿಗೆ ಬನ್ನಿ ಎಂದು ತಿಳಿಸಿದಂತೆ ಪಿರ್ಯಾದಿ ಹಾಗೂ ಸ್ನೇಹಿತರಾದ ಜನಾರ್ಧನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಕೆ ಎಲ್ 59 ಇ 2625 ನೇ ಇನ್ನೋವಾ ಕಾರಿನಲ್ಲಿ ಕಣ್ಣೂರಿನಿಂದ ಸದರಿ ಹುಡುಗಿಗೆ ಮೋಬೈಲ್ ಕರೆ ಮಾಡಿ ದಾರಿ ಕೇಳುತ್ತಾ ಬಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿ ರಾತ್ರಿ 12:00 ಗಂಟೆಗೆ ಸದರಿ ಹುಡುಗಿ ಭೇಟಿಯಾಗಿ ಆಕೆಯೊಂದಿಗೆ ಕಾರಿನಲ್ಲಿ ಸುಮಾರು ಅರ್ಧ ಕೀ ಮೀ ಒಂದು ಮನೆಗೆ ರಾತ್ರಿ ಸುಮಾರು 12:30 ಗಂಟೆಗೆ ಬಂದಿರುತ್ತಾರೆ. ಆ ಮನೆಯಲ್ಲಿ ಮತ್ತೋಬ್ಬಳು ಹುಡುಗಿಯಿದ್ದು ಆ ಸಮಯ ಇಬ್ಬರು ಗಂಡಸರು ಬಂದು ಏಕಾಏಕಿ ಪಿರ್ಯಾದಿ ಹಾಗೂ ಇತರರಿಗೆ ಹಲ್ಲೆ ನಡೆಸಿದ್ದು ಆ ಬಳಿಕ ರೂಮಿನಲ್ಲಿ ಅಕ್ರಮ ಬಂಧನಲ್ಲಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೋಲಿಸರಿಗೆ ಹಾಗೂ ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ.
ಈ ವೇಳೆ ಪೊಲೀಸರು ಎಂಬುವುದಾಗಿ ಹೇಳಿಕೊಂಡು ಬಂದ 3 ಜನ ಹೊಡೆದು 10 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟು, ಇಲ್ಲವಾದಲ್ಲಿ ಚಾನೆಲ್ ಗೆ ಕೊಡುವುದಾಗಿ ಬೆದರಿಸಿದ್ದು ಈ ಸಮಯ ಪಿರ್ಯಾದಿದಾರರು ಹಾಗೂ ಇತರರು ಅಷ್ಟು ಹಣ ಇಲ್ಲವೆಂದು ತಿಳಿಸಿದಾಗ ಪಿರ್ಯಾದಿದಾರರು ಹಾಗೂ ಇತರರ ಮೋಬೈಲ್ಗಳನ್ನು , ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದು ಮನೆಯಲ್ಲಿ ಕೂಡಿ ಹಾಕಿ ಮರುದಿನ ದಿನಾಂಕ 08.01.2020 ರಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಪೊಲೀಸ್ ಎಂದು ಹೇಳಿಕೊಂಡಿದ್ದಾತ ಬಂದು ಪಿರ್ಯಾದಿಯನ್ನು ಹಾಗೂ ಇತರರನ್ನು ಪೊಲೀಸ್ ಠಾಣೆಗೆಂದು ಹೇಳಿ ಪಿರ್ಯಾದಿಯ ಇನ್ನೋವ ಕಾರಿನಲ್ಲಿ ಸುಮಾರು 15 ಕೀ ಮೀ ದೂರ ಒಂದು ರೆಸಾರ್ಟ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿರುತ್ತಾನೆ. ಈ ಸಮಯ ಪೊಲೀಸರು ರೆಸಾರ್ಟ್ ಗೆ ಧಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿರುವುದಾಗಿದ್ದು , ಈ ಬಗ್ಗೆ ದಿಲೀಪ್ ಟಿರವರು ನೀಡಿದ ದೂರಿನಂತೆ ದಿನಾಂಕ 08.01.2020 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:365,323,384,419,342, ಜೊತೆಗೆ 149 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿದ್ದು,ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ,
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…