ಉಪ್ಪಿನಂಗಡಿ : ಹನಿ ಟ್ರ್ಯಾಪ್ ದಂಧೆ ;ಆರೋಪಿಗಳ ಬಂಧನ -Vishwanews24

ಉಪ್ಪಿನಂಗಡಿ: ರೆಸಾರ್ಟ್ ಒಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದು ಇತರ ಮೂವರು ಪರಾರಿಯಾಗಿದ್ದಾರೆ.

ಕುಶಾಲನಗರದ ಲೋಹಿತ್ ಮತ್ತು ವಿಟ್ಟಲದ ಶರೀಫ್ ಬಂಧಿತರಾಗಿದ್ದು ಪ್ರಕರಣದ ಪ್ರಮುಖ ಆರೋಪಿ ವಿಟ್ಲದ ಜಮಾಲು, ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ 07.01.2020 ರಂದು ಪೆರುಬುಲ್ಲಿ ಕೆರಿ ಕುಟ್ಯಾಟೂರ್ ತಳಿಪರಂಬ ತಾಲೂಕು ಕಣ್ಣೂರು ಜಿಲ್ಲೆ ಕೇರಳ ನಿವಾಸಿ ದಿಲೀಪ್ ಟಿ ಎಂಬವರ ಮೋಬೈಲ್ ಗೆ ಹುಡುಗಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆಗೆ ಕೆಲಸಕ್ಕೆ ಜನ ಬೇಕಿದ್ದರೆ ಕಾಸರಗೋಡಿಗೆ ಬನ್ನಿ ಎಂದು ತಿಳಿಸಿದಂತೆ ಪಿರ್ಯಾದಿ ಹಾಗೂ ಸ್ನೇಹಿತರಾದ ಜನಾರ್ಧನನ್,  ಪ್ರಶಾಂತ್, ಪ್ರವೀಣ್  ಎಂಬವರೊಂದಿಗೆ ಕೆ ಎಲ್ 59 ಇ 2625 ನೇ ಇನ್ನೋವಾ ಕಾರಿನಲ್ಲಿ  ಕಣ್ಣೂರಿನಿಂದ ಸದರಿ ಹುಡುಗಿಗೆ ಮೋಬೈಲ್ ಕರೆ ಮಾಡಿ ದಾರಿ ಕೇಳುತ್ತಾ ಬಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿ ರಾತ್ರಿ 12:00 ಗಂಟೆಗೆ ಸದರಿ ಹುಡುಗಿ ಭೇಟಿಯಾಗಿ ಆಕೆಯೊಂದಿಗೆ ಕಾರಿನಲ್ಲಿ ಸುಮಾರು ಅರ್ಧ ಕೀ ಮೀ ಒಂದು ಮನೆಗೆ ರಾತ್ರಿ ಸುಮಾರು 12:30 ಗಂಟೆಗೆ ಬಂದಿರುತ್ತಾರೆ. ಆ ಮನೆಯಲ್ಲಿ ಮತ್ತೋಬ್ಬಳು  ಹುಡುಗಿಯಿದ್ದು ಆ ಸಮಯ ಇಬ್ಬರು  ಗಂಡಸರು ಬಂದು ಏಕಾಏಕಿ ಪಿರ್ಯಾದಿ ಹಾಗೂ ಇತರರಿಗೆ ಹಲ್ಲೆ ನಡೆಸಿದ್ದು ಆ ಬಳಿಕ ರೂಮಿನಲ್ಲಿ  ಅಕ್ರಮ ಬಂಧನಲ್ಲಿ ಕೂಡಿಟ್ಟು  ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೋಲಿಸರಿಗೆ ಹಾಗೂ ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ.

ಈ ವೇಳೆ ಪೊಲೀಸರು ಎಂಬುವುದಾಗಿ ಹೇಳಿಕೊಂಡು ಬಂದ 3 ಜನ ಹೊಡೆದು 10 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟು,  ಇಲ್ಲವಾದಲ್ಲಿ ಚಾನೆಲ್ ಗೆ ಕೊಡುವುದಾಗಿ ಬೆದರಿಸಿದ್ದು ಈ ಸಮಯ ಪಿರ್ಯಾದಿದಾರರು ಹಾಗೂ ಇತರರು ಅಷ್ಟು ಹಣ ಇಲ್ಲವೆಂದು ತಿಳಿಸಿದಾಗ  ಪಿರ್ಯಾದಿದಾರರು ಹಾಗೂ ಇತರರ ಮೋಬೈಲ್ಗಳನ್ನು , ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತು ಯಾವುದೋ ದಾಖಲಾತಿಗೆ ಸಹಿ ಮತ್ತು  ಬೆರಳಚ್ಚು ತೆಗೆದು ಮನೆಯಲ್ಲಿ ಕೂಡಿ ಹಾಕಿ ಮರುದಿನ ದಿನಾಂಕ 08.01.2020 ರಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಪೊಲೀಸ್ ಎಂದು ಹೇಳಿಕೊಂಡಿದ್ದಾತ  ಬಂದು ಪಿರ್ಯಾದಿಯನ್ನು ಹಾಗೂ ಇತರರನ್ನು ಪೊಲೀಸ್ ಠಾಣೆಗೆಂದು ಹೇಳಿ ಪಿರ್ಯಾದಿಯ ಇನ್ನೋವ ಕಾರಿನಲ್ಲಿ ಸುಮಾರು 15 ಕೀ ಮೀ ದೂರ ಒಂದು ರೆಸಾರ್ಟ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿರುತ್ತಾನೆ. ಈ ಸಮಯ ಪೊಲೀಸರು ರೆಸಾರ್ಟ್ ಗೆ ಧಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿರುವುದಾಗಿದ್ದು , ಈ ಬಗ್ಗೆ ದಿಲೀಪ್ ಟಿರವರು ನೀಡಿದ ದೂರಿನಂತೆ ದಿನಾಂಕ 08.01.2020 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:365,323,384,419,342, ಜೊತೆಗೆ 149 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿದ್ದು,ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ,

Vishwa News 24

Recent Posts

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

46 minutes ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

55 minutes ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 hour ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

1 hour ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

1 hour ago

ಹಿಜಾಬ್‌ಗೆ ಅನುಮತಿ : ಸಾಮಾಜಿಕ ಸಾಮರಸ್ಯವನ್ನು ಕದಡುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ : ಸುನಿಲ್ ಕುಮಾರ್ ಆಕ್ರೋಶ – vishwanews24

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ: ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ : ಸುನಿಲ್ ಕುಮಾರ್ ಕಾರ್ಕಳ:…

1 hour ago