Featured

ಎಂಟು ವರ್ಷಗಳ ಸಲಿಂಗ ಪ್ರೀತಿಗೆ ವಿವಾಹದ ಅಂಕಿತ : ಹೈದರಾಬಾದ್‌ನಲ್ಲೊಂದು ವಿಶೇಷ ಕಲ್ಯಾಣ – Vishwanews24

ಎಂಟು ವರ್ಷಗಳ ಸಲಿಂಗ ಪ್ರೀತಿಗೆ ವಿವಾಹದ ಅಂಕಿತ : ಹೈದರಾಬಾದ್‌ನಲ್ಲೊಂದು ವಿಶೇಷ ಕಲ್ಯಾಣ – Vishwanews24

ಹೈದರಾಬಾದ್‌ : ಹೈದರಾಬಾದ್‌ನ ಹೊರ ವಲಯದಲ್ಲಿರುವ ರೆಸಾರ್ಟ್‌ ಒಂದರಲ್ಲಿ, ಸ್ನೇಹಿತರ ಹಾಗೂ ಕುಟುಂಬದವರ ಸಮ್ಮುಖದಲ್ಲಿ ಜೋಡಿಗಳು ‘ಪತಿ-ಪತಿ’ಗಳಾಗಿದ್ದು, ಉಂಗುರ ಬದಲಾಯಿಸಿ ತಮ್ಮ ಸಂಬಂಧವನ್ನು ಅಧೀಕೃತಗೊಳಿಸಿದ್ದಾರೆ.

31 ವರ್ಷದ ಸುಪ್ರಿಯೋ ಚಕ್ರವರ್ತಿ ಹಾಗೂ 34 ವರ್ಷದ ಅಭಯ್‌ ದಂಗ್‌ ಅವರು ಉಂಗುರ ಬದಲಿಸಿಕೊಂಡು ಇದೀಗ ವಿವಾಹವಾಗಿದ್ದಾರೆ. ಕೋಲ್ಕತಾ ಮೂಲದ ಸುಪ್ರಿಯೋ ಚಕ್ರವರ್ತಿ, ಪ್ರತಿಷ್ಠಿತ ಹೋಟೆಲ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯೊಂದರಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ದೆಹಲಿಯವರಾಗಿರುವ ಅಭಯ್‌ ದಂಗ್‌ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮದುವೆ ಪಂಜಾಬಿ ಹಾಗೂ ಬೆಂಗಾಲಿ ಸಂಸ್ಕೃತಿಗಳ ಸಮ್ಮಿಳಿತವಾಗಿತ್ತು.

ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗಳ ವಿವಾಹವನ್ನು ಟ್ರಾನ್ಸ್‌ಸ್ಟ್ರೈಟ್‌ ( ತನ್ನ ವಿರುದ್ಧ ಲಿಂಗದವರ ಬಟ್ಟೆ ಧರಿಸುವ ವ್ಯಕ್ತಿ ) ಒಬ್ಬರು ನಡೆಸಿ ಕೊಟ್ಟಿದ್ದಾರೆ.

ಹೈದರಾಬಾದ್‌ ನಗರದಲ್ಲಿರುವ ರೆಸಾರ್ಟ್‌ ಒಂದರಲ್ಲಿ ಈ ಜೋಡಿಗಳ ಅದ್ಧೂರಿ ವಿವಾಹ ಮಹೋತ್ಸವ ನಡೆದಿದ್ದು, ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಈ ಅಪರೂಪದ ಮದುವೆಗೆ ಸಾಕ್ಷಿಯಾದರು. ವಿಶೇಷ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.

ಭಾರತದಲ್ಲಿ ಸಲಿಂಗ ಕಾಮಕ್ಕೆ ಮಾತ್ರ ಅನುಮತಿ ಇದ್ದು, ಸಲಿಂಗ ಮದುವೆಯನ್ನು ಮಾನ್ಯ ಮಾಡುವ ಯಾವುದೇ ಕಾನೂನು ಭಾರತದಲ್ಲಿ ಜಾರಿಯಲ್ಲಿಲ್ಲ. ಹೀಗಾಗಿ ಈ ಜೋಡಿಗಳ ಮದುವೆ ಕಾನೂನು ಬದ್ಧವೇ ಎನ್ನುವ ತರ್ಕ ಎದ್ದಿದೆ.

ಭಾರತೀಯ ಕಾನೂನುಗಳ ಪ್ರಕಾರ ‘ಜೈವಿಕ ಪುರುಷ’ ಮತ್ತು ‘ಜೈವಿಕ ಮಹಿಳೆ’ ನಡುವಿನ ವಿವಾಹ ಸಂಬಂಧಕ್ಕೆ ಮಾತ್ರ ಅನುಮತಿ ಇದ್ದು, ಉಳಿದ ನಂಟುಗಳೆಲ್ಲ ಅಕ್ರಮ ಎಂದು ಈ ಹಿಂದೆ ಕೇಂದ್ರ ಸರ್ಕಾರ ದಿಲ್ಲಿ ಹೈಕೋರ್ಟ್‌ಗೆ ಹೇಳಿತ್ತು.

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago