Featured

ಎಲ್ಲೂರು ಗ್ರಾಮದ ಕೊಳಚೂರುನಲ್ಲಿ 2.5 ಎಕರೆ ಜಮೀನಿನಲ್ಲಿ ಗೋಶಾಲೆ ಸ್ಥಾಪನೆ: ಪಲಿಮಾರು ಶ್ರೀ

ಪಡುಬಿದ್ರಿ: ಎಲ್ಲೂರು ಗ್ರಾಮದ ಕೊಳಚೂರು ಬರ್ಪಣಿ ದಿ. ಪದ್ಮನಾಭಯ್ಯ ಅವರ ಮಕ್ಕಳು ಹಾಗೂ ಕುಟುಂಬಿಕರು ಶ್ರೀ ಪಲಿಮಾರು ಮಠಕ್ಕೆ ದಾನವಾಗಿ ನೀಡಿದ ಸುಮಾರು 2.5 ಎಕರೆ ಜಮೀನಿನಲ್ಲಿ ಗೋವುಗಳ ರಕ್ಷಣೆ ನೆಲೆಯಲ್ಲಿ ಗೋಶಾಲೆ ಸ್ಥಾಪಿಸುವುದಾಗಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಕೊಳಚೂರು ಬರ್ಪಣಿ ಮನೆಯಲ್ಲಿ ಕೊಳಚೂರು ಕುಟುಂಬಿಕರ ವಿಜ್ಞಾಪನೆಯಂತೆ ಶನಿವಾರ ಆಗಮಿಸಿ, ಮಠದ ಪಟ್ಟದ ದೇವರ ಪೂಜೆ ನೆರವೇರಿಸಿ ದಾನಿಗಳನ್ನು ಆಶೀರ್ವದಿಸಿ ಮಾತನಾಡಿದರು.

ದಾನ ನೀಡುವಾಗ ಜ್ಞಾನಿಗಳಿಗೆ ನೀಡಬೇಕೆಂಬ ಮಹಾಭಾರತದಲ್ಲಿನ ಭೀಷ್ಮಾಚಾರ್ಯರ ನುಡಿಯಂತೆ ಭೂದಾನವನ್ನು ಇಂದು ಕೊಳಚೂರು ಕುಟುಂಬಿಕರು ಅರ್ಹವಾಗಿಯೇ ತಮ್ಮ ಗುರುಗಳ ಮೂಲಕ ಶ್ರೀರಾಮಚಂದ್ರ ದೇವರಿಗೆ ಸಮರ್ಪಿಸಿದ್ದಾರೆ ಎಂದು ಕಿರಿಯ ಶ್ರೀಪಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು.
ಮಠದ ಪ್ರಬಂಧಕ ಗಿರೀಶ್ ಆಚಾರ್ಯ, ಮಧ್ವರಾಯ ಭಟ್ ನಂದಿಕೂರು, ಕೃಷ್ಣಮೂರ್ತಿ ಭಟ್ ನಂದಿಕೂರು, ಶ್ರೀನಿವಾಸ ಉಡುಪ ಪಲಿಮಾರು, ಪ್ರಸನ್ನ ಆಚಾರ್ಯ ಕೆಮ್ಮಣ್ಣು, ಹರೀಶ್ ಜೋಯಿಸ ಪಾದೆಬೆಟ್ಟು, ಗುರುರಾಜ ಭಟ್ ಎರ್ಮಾಳು, ಕೊಳಚೂರು ಬರ್ಪಣಿ ವೇಣುಗೋಪಾಲ ರಾವ್, ಸರ್ವಜ್ಞ ರಾವ್, ಆದಿಶೇಷ ರಾವ್, ರಮೇಶ್ ರಾವ್, ಸುರೇಶ್ ರಾವ್, ಗಣೇಶ್ ರಾವ್, ವೆಂಕಟೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು.

“ಪಂಚಭೌತಿಕವಾಗಿ ಶ್ರೀಮಂತವಾಗಿರುವ ಗೃಹದೊಂದಿಗೆ ಇಲ್ಲಿನ ಅವರ ಎಲ್ಲ ಭೂಮಿಯನ್ನು ಶ್ರೀ ಮಠದ ಸೀತಾರಾಮಚಂದ್ರ ದೇವರಿಗೆ ದಾನವಾಗಿ ಕೊಳಚೂರು ಬರ್ಪಣಿ ಕುಟುಂಬಿಕರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಬೇಸಿಗೆ ಕಾಲದ ಧಾರ್ಮಿಕ ಶಿಬಿರ, ವಿದ್ಯಾಗುರುಕುಲಗಳನ್ನೂ ಇಲ್ಲಿ ನಡೆಸುವ ಚಿಂತನೆಯಿದೆ.”
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ

ಎಲ್ಲೂರು ಗ್ರಾಮದ ಕೊಳಚೂರುನಲ್ಲಿ 2.5 ಎಕರೆ ಜಮೀನಿನಲ್ಲಿ ಗೋಶಾಲೆ ಸ್ಥಾಪನೆ: ಪಲಿಮಾರು ಶ್ರೀ
Vishwa News 24

Recent Posts

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ – vishwanews24

ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…

20 minutes ago

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ – vishwanews24

ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್‌ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…

49 minutes ago

ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ – vishwanews24

ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್‌’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ ಬೆಂಗಳೂರು :ರಾಜ್ಯದಲ್ಲಿ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು…

58 minutes ago

ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ – vishwanews24

ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ…

1 hour ago

ಕಣ್ಣೂರು: ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ :  18 ತಿಂಗಳ ಮಗು ನಿಧನ  ; ವೈದ್ಯರ ವಿರುದ್ಧ ಪ್ರಕರಣ ದಾಖಲು – vishwanews24

ಕಣ್ಣೂರು: ಅನಸ್ತೇಶಿಯಾ ನೀಡಿ ಶಸ್ತ್ರಚಿಕಿತ್ಸೆ :  18 ತಿಂಗಳ ಮಗು ನಿಧನ  ; ವೈದ್ಯರ ವಿರುದ್ಧ ಪ್ರಕರಣ ದಾಖಲು ತಿರುವನಂತಪುರಂ:…

1 hour ago

ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ – vishwanews24

ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಳಿಯನ್ ನಿಧನ ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್,…

3 hours ago