ಪಡುಬಿದ್ರಿ: ಎಲ್ಲೂರು ಗ್ರಾಮದ ಕೊಳಚೂರು ಬರ್ಪಣಿ ದಿ. ಪದ್ಮನಾಭಯ್ಯ ಅವರ ಮಕ್ಕಳು ಹಾಗೂ ಕುಟುಂಬಿಕರು ಶ್ರೀ ಪಲಿಮಾರು ಮಠಕ್ಕೆ ದಾನವಾಗಿ ನೀಡಿದ ಸುಮಾರು 2.5 ಎಕರೆ ಜಮೀನಿನಲ್ಲಿ ಗೋವುಗಳ ರಕ್ಷಣೆ ನೆಲೆಯಲ್ಲಿ ಗೋಶಾಲೆ ಸ್ಥಾಪಿಸುವುದಾಗಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಕೊಳಚೂರು ಬರ್ಪಣಿ ಮನೆಯಲ್ಲಿ ಕೊಳಚೂರು ಕುಟುಂಬಿಕರ ವಿಜ್ಞಾಪನೆಯಂತೆ ಶನಿವಾರ ಆಗಮಿಸಿ, ಮಠದ ಪಟ್ಟದ ದೇವರ ಪೂಜೆ ನೆರವೇರಿಸಿ ದಾನಿಗಳನ್ನು ಆಶೀರ್ವದಿಸಿ ಮಾತನಾಡಿದರು.
ದಾನ ನೀಡುವಾಗ ಜ್ಞಾನಿಗಳಿಗೆ ನೀಡಬೇಕೆಂಬ ಮಹಾಭಾರತದಲ್ಲಿನ ಭೀಷ್ಮಾಚಾರ್ಯರ ನುಡಿಯಂತೆ ಭೂದಾನವನ್ನು ಇಂದು ಕೊಳಚೂರು ಕುಟುಂಬಿಕರು ಅರ್ಹವಾಗಿಯೇ ತಮ್ಮ ಗುರುಗಳ ಮೂಲಕ ಶ್ರೀರಾಮಚಂದ್ರ ದೇವರಿಗೆ ಸಮರ್ಪಿಸಿದ್ದಾರೆ ಎಂದು ಕಿರಿಯ ಶ್ರೀಪಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು.
ಮಠದ ಪ್ರಬಂಧಕ ಗಿರೀಶ್ ಆಚಾರ್ಯ, ಮಧ್ವರಾಯ ಭಟ್ ನಂದಿಕೂರು, ಕೃಷ್ಣಮೂರ್ತಿ ಭಟ್ ನಂದಿಕೂರು, ಶ್ರೀನಿವಾಸ ಉಡುಪ ಪಲಿಮಾರು, ಪ್ರಸನ್ನ ಆಚಾರ್ಯ ಕೆಮ್ಮಣ್ಣು, ಹರೀಶ್ ಜೋಯಿಸ ಪಾದೆಬೆಟ್ಟು, ಗುರುರಾಜ ಭಟ್ ಎರ್ಮಾಳು, ಕೊಳಚೂರು ಬರ್ಪಣಿ ವೇಣುಗೋಪಾಲ ರಾವ್, ಸರ್ವಜ್ಞ ರಾವ್, ಆದಿಶೇಷ ರಾವ್, ರಮೇಶ್ ರಾವ್, ಸುರೇಶ್ ರಾವ್, ಗಣೇಶ್ ರಾವ್, ವೆಂಕಟೇಶ ರಾವ್ ಮೊದಲಾದವರು ಉಪಸ್ಥಿತರಿದ್ದರು.
“ಪಂಚಭೌತಿಕವಾಗಿ ಶ್ರೀಮಂತವಾಗಿರುವ ಗೃಹದೊಂದಿಗೆ ಇಲ್ಲಿನ ಅವರ ಎಲ್ಲ ಭೂಮಿಯನ್ನು ಶ್ರೀ ಮಠದ ಸೀತಾರಾಮಚಂದ್ರ ದೇವರಿಗೆ ದಾನವಾಗಿ ಕೊಳಚೂರು ಬರ್ಪಣಿ ಕುಟುಂಬಿಕರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳ ಬೇಸಿಗೆ ಕಾಲದ ಧಾರ್ಮಿಕ ಶಿಬಿರ, ವಿದ್ಯಾಗುರುಕುಲಗಳನ್ನೂ ಇಲ್ಲಿ ನಡೆಸುವ ಚಿಂತನೆಯಿದೆ.”
ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಮಠ
ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…
ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…
ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…
ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…
ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…