ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ಅವರಿಗೆ ರೈತಬಂಧು ಪ್ರಶಸ್ತಿ ಮತ್ತು ಅಭಿವಂದನೆ ಕಾರ್ಯಕ್ರಮ.
ಮಂಗಳೂರು: ಇಸ್ರೆಲ್ ರಾಷ್ಟ್ರಕ್ಕೆ ಮೊದಲ ಬಾರಿಗೆ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರವಾಸದ ರೂವಾರಿಯಾದ ಸಹಕಾರಿ ರತ್ನ ಡಾ|| ಎಮ್ ಎನ್ ರಾಜೇಂದ್ರ ಕುಮಾರ್ ಅವರಿಗೆ “ರೈತ ಬಂಧು” ಪ್ರಶಸ್ತಿ ನೀಡುವ ಮೂಲಕ ಗೌರವಿಸಿ ಅಭಿವಂದನೆ ಸಮರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಮಾತನಾಡಿ “ರಾಜೇಂದ್ರ ಕುಮಾರ್ ಅವರು ಎಲ್ಲಾ ಸಹಕಾರಿಗಳ ಮಿತ್ರ ಅವರೊಂದು ಮಹಾನ್ ಶಕ್ತಿ ವ್ಯಕ್ತಿ ಅಲ್ಲ ,ಇಸ್ರೆಲ್ ಮಾಡಿಸುವುದೆಂದರೆ ಅದು ಸುಲಭವಲ್ಲ ಅದರ ಯಶಸ್ಸಿಗೆ ಪ್ರತಿಜ್ಞೆ ಮಾಡುವುದು ಅದೊಂದು ಮಹತ್ಕಾರ್ಯ.
ಎಲ್ಲಾ ಟೀಕೆಗಳಿಗೆ ಸಾಧನೆಗಳ ಮೂಲಕ ಸಮರ್ಥವಾದ ಉತ್ತರ ನೀಡಿದ ದೇಶದ ಏಕೈಕ ಸಹಕಾರಿ ಎಮ್.ಎನ್.ಆರ್. ಎಂದರು.
ಕೆ.ಎಮ್.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತಾಡಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯುತ್ತಿದೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿದೆ ಅದಕ್ಕೆ ಮೂಲ ಕಾರಣ ಎಮ್.ಎನ್.ಆರ್ ಅವರಿಂದ ಅವರ ತಂಡದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದರು.
ಅಭಿವಂದನೆ ಸ್ವೀಕರಿಸಿ ಮಾತಾಡಿದ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ” ನಮ್ಮ ಬ್ಯಾಂಕ್ ಯಾವುದೇ ಸಾಧನೆ ಪ್ರಶಸ್ತಿ ಬಂದ್ರೆ ಅದಕ್ಕೆ ಮೂಲ ಕಾರಣ ಸಹಕಾರಿಗಳು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಭಾರಿ ಸಹಕಾರಿ ಅಧ್ಯಯನ ಪೀಠ ಸ್ಥಾಪನೆಗೆ ಇದೊಂದು ಸುವರ್ಣವಕಾಶ ಅದು ಸಾಕಾರಗೊಳ್ಳಲಿದೆ.
ಸಹಕಾರಿಗಳು ಸಲ್ಲಿಸಿರುವ ಅಭಿವಂದನೆ ಇಡೀ ಸಹಕಾರಿಗಳಿಗೆ ಸಲ್ಲಿಸಿದ ಗೌರವ ಮತ್ತು ಪ್ರತಿಯೊಬ್ಬ ಸಹಕಾರಿ ಕೂಡ ರೈತರಿಗೆ ಪ್ರೋತ್ಸಾಹಿಸಬೇಕು.
ಮುಂದಿನ ಭಾರಿ ಐದು ಮಂದಿ ಮಹಿಳೆಯರನ್ನು ಹೈನುಗಾರಿಕೆ ಅಧ್ಯಯನ ಕುರಿತಾಗಿ ಪ್ರವಾಸ ಕಳುಹಿಸಿ ಕೊಡುವ ಪ್ರಯತ್ನ ಮಾಡಲಾಗುತ್ತದೆ.
ನೀರು ಹಾಳಾಗದಂತೆ ಸಣ್ಣ ಸಣ್ಣ ಅಣೆಕಟ್ಟುವಿನ ಮೂಲಕ ಕ್ರೋಡೀಕರಿಸುವ ಪ್ರಯತ್ನ ಮಾಡುವ ಸಂಸ್ಥೆಗಳು ಇದ್ದಲ್ಲಿ ಅವರಿಗೆ ಪೂರಕ ಸಹಕಾರ ನೀಡುವಲ್ಲಿ ನಾನು ಬದ್ಧ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಸಹಕಾರಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು
ಬ್ಯಾಂಕಿನನಿರ್ದೇಶ ಟಿ.ಜಿ ರಾಜರಾಮ್ ಭಟ್ ಸ್ವಾಗತಿಸಿ,ಡಾ ದೇವಿ ಪ್ರಸಾದ್ ಶೆಟ್ಟಿ ಪ್ರಸ್ತಾವನೆ ಮಾತುಗಳನ್ನಾಡಿದರು.ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…