Featured

ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ಅವರಿಗೆ ರೈತಬಂಧು ಪ್ರಶಸ್ತಿ ಮತ್ತು ಅಭಿವಂದನೆ ಕಾರ್ಯಕ್ರಮ.

ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ಅವರಿಗೆ ರೈತಬಂಧು ಪ್ರಶಸ್ತಿ ಮತ್ತು ಅಭಿವಂದನೆ ಕಾರ್ಯಕ್ರಮ.

ಮಂಗಳೂರು: ಇಸ್ರೆಲ್ ರಾಷ್ಟ್ರಕ್ಕೆ ಮೊದಲ ಬಾರಿಗೆ ಅಧ್ಯಯನ ಪ್ರವಾಸ ಕೈಗೊಂಡ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರವಾಸದ ರೂವಾರಿಯಾದ ಸಹಕಾರಿ ರತ್ನ ಡಾ|| ಎಮ್ ಎನ್ ರಾಜೇಂದ್ರ ಕುಮಾರ್ ಅವರಿಗೆ “ರೈತ ಬಂಧು” ಪ್ರಶಸ್ತಿ ನೀಡುವ ಮೂಲಕ‌ ಗೌರವಿಸಿ ಅಭಿವಂದನೆ ಸಮರ್ಪಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ| ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಮಾತನಾಡಿ “ರಾಜೇಂದ್ರ ಕುಮಾರ್ ಅವರು ಎಲ್ಲಾ ಸಹಕಾರಿಗಳ ಮಿತ್ರ ಅವರೊಂದು ಮಹಾನ್ ಶಕ್ತಿ ವ್ಯಕ್ತಿ ಅಲ್ಲ ,ಇಸ್ರೆಲ್ ‌ಮಾಡಿಸುವುದೆಂದರೆ ಅದು ಸುಲಭವಲ್ಲ ಅದರ ಯಶಸ್ಸಿಗೆ ಪ್ರತಿಜ್ಞೆ ಮಾಡುವುದು ಅದೊಂದು ಮಹತ್ಕಾರ್ಯ.

ಎಲ್ಲಾ ಟೀಕೆಗಳಿಗೆ ಸಾಧನೆಗಳ‌ ಮೂಲಕ ಸಮರ್ಥವಾದ ಉತ್ತರ ನೀಡಿದ‌ ದೇಶದ ಏಕೈಕ ಸಹಕಾರಿ ಎಮ್.ಎನ್.ಆರ್. ಎಂದರು.

ಕೆ.ಎಮ್.ಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತಾಡಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯುತ್ತಿದೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದೇಶದಲ್ಲಿಯೇ ಅಗ್ರಗಣ್ಯ ಸ್ಥಾನದಲ್ಲಿದೆ ಅದಕ್ಕೆ‌ ಮೂಲ ಕಾರಣ ಎಮ್.ಎನ್.ಆರ್ ಅವರಿಂದ ಅವರ ತಂಡದಿಂದ ಈ‌ ಕಾರ್ಯ ಸಾಧ್ಯವಾಗಿದೆ ಎಂದರು.

ಅಭಿವಂದನೆ ಸ್ವೀಕರಿಸಿ‌ ಮಾತಾಡಿದ ಡಾ.ಎಮ್.ಎನ್ ರಾಜೇಂದ್ರ ಕುಮಾರ್ ” ನಮ್ಮ‌ ಬ್ಯಾಂಕ್ ಯಾವುದೇ ಸಾಧನೆ ಪ್ರಶಸ್ತಿ ಬಂದ್ರೆ ಅದಕ್ಕೆ ಮೂಲ ಕಾರಣ ಸಹಕಾರಿಗಳು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಭಾರಿ ಸಹಕಾರಿ ಅಧ್ಯಯನ ಪೀಠ ಸ್ಥಾಪನೆಗೆ ಇದೊಂದು ಸುವರ್ಣವಕಾಶ ಅದು ಸಾಕಾರಗೊಳ್ಳಲಿದೆ.
ಸಹಕಾರಿಗಳು ಸಲ್ಲಿಸಿರುವ ಅಭಿವಂದನೆ ಇಡೀ ಸಹಕಾರಿಗಳಿಗೆ ಸಲ್ಲಿಸಿದ ಗೌರವ‌ ಮತ್ತು ಪ್ರತಿಯೊಬ್ಬ ಸಹಕಾರಿ ಕೂಡ ರೈತರಿಗೆ ಪ್ರೋತ್ಸಾಹಿಸಬೇಕು.

ಮುಂದಿನ‌ ಭಾರಿ ಐದು ಮಂದಿ ಮಹಿಳೆಯರನ್ನು ಹೈನುಗಾರಿಕೆ ಅಧ್ಯಯನ ‌ಕುರಿತಾಗಿ ಪ್ರವಾಸ ಕಳುಹಿಸಿ ಕೊಡುವ ಪ್ರಯತ್ನ ಮಾಡಲಾಗುತ್ತದೆ.

ನೀರು ಹಾಳಾಗದಂತೆ ಸಣ್ಣ ಸಣ್ಣ ಅಣೆಕಟ್ಟುವಿನ ಮೂಲಕ ಕ್ರೋಡೀಕರಿಸುವ ಪ್ರಯತ್ನ ಮಾಡುವ ಸಂಸ್ಥೆಗಳು ಇದ್ದಲ್ಲಿ ಅವರಿಗೆ ಪೂರಕ‌ ಸಹಕಾರ ನೀಡುವಲ್ಲಿ ನಾನು ಬದ್ಧ ಎಂದರು.

ಕಾರ್ಯಕ್ರಮದಲ್ಲಿ ನೂರಾರು ಸಹಕಾರಿಗಳು, ನವೋದಯ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು

ಬ್ಯಾಂಕಿನ‌ನಿರ್ದೇಶ ಟಿ.ಜಿ‌ ರಾಜರಾಮ್ ಭಟ್ ಸ್ವಾಗತಿಸಿ,ಡಾ ದೇವಿ ಪ್ರಸಾದ್ ಶೆಟ್ಟಿ ಪ್ರಸ್ತಾವನೆ ಮಾತುಗಳನ್ನಾಡಿದರು.ಮನೋಹರ ಪ್ರಸಾದ್ ಕಾರ್ಯಕ್ರಮ‌ ನಿರೂಪಿಸಿದರು.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

14 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

14 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

15 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

18 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

18 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

18 hours ago