ದುಬೈ: ಅಸಾಂಪ್ರಾದಾಯಿಕ ಹೊಡೆತಗಳ ಬ್ಯಾಟಿಂಗ್ ಶೈಲಿಯ ಮೂಲಕ ರಂಜಿಸಿದ ಅಫ್ಗಾನಿಸ್ತಾನದ ಮೊಹಮ್ಮದ್ ಶೆಹಜಾದ್ ಅವರು ಮಂಗಳವಾರ ಭಾರತದ ಬೌಲರ್ಗಳ ಬೆವರಿಳಿಸಿದರು.
ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಶೆಹಜಾದ್ (124; 116ಎ, 11ಬೌಂಡರಿ, 7ಸಿಕ್ಸರ್) ಅಮೋಘ ಶತಕದ ಬಲದಿಂದ ಅಫ್ಗಾನಿಸ್ತಾನ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 252 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತವೂ ಇಷ್ಟೇ ರನ್ಗಳಿಸಿ ಆಲೌಟ್ ಆಯಿತು.
ಭಾರತ ಈಗಾಗಲೇ ಫೈನಲ್ ಪ್ರವೇಶಿಸಿದ್ದು, ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಮಹೇಂದ್ರಸಿಂಗ್ ಧೋನಿ ತಂಡದ ಸಾರಥ್ಯ ವಹಿಸಿದ್ದರು.
ಭಾರತ ಪರ ಇನಿಂಗ್ಸ್ ಆರಂಭಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್(60) ಮತ್ತು ಅಂಬಟಿ ರಾಯುಡು(57) ಶತಕದ ಜೊತೆಯಾಟವಾಡಿದರು. ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ತಂಡದ ಗೆಲುವಿಗೆ ಕೊನೆಯ ಓವರ್ನಲ್ಲಿ ಏಳು ರನ್ ಅಗತ್ಯವಿತ್ತು. ರವೀಂದ್ರ ಜಡೇಜಾ ಹಾಗೂ ಖಲೀಲ್ ಅಹಮದ್ ಕ್ರೀಸ್ನಲ್ಲಿದ್ದರು.
ಅಫ್ಘಾನಿಸ್ತಾನ ಪರ ಕೊನೆಯ ಓವರ್ ಎಸೆದ ರಶೀದ್ ಖಾನ್, ಅಂತಿಮ ವಿಕೆಟ್ ರೂಪದಲ್ಲಿ ಜಡೇಜಾಗೆ ಪೆವಿಲಿಯನ್ ಹಾದಿ ತೋರಿದರು. ಎರಡು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸ ಬೇಕಿದ್ದ ವೇಳೆ ಗೊಂದಲಕ್ಕೊಳಗಾದ ಜಡೇಜಾ, ನಜೀಬುಲ್ಲಾಗೆ ಕ್ಯಾಚ್ ನೀಡಿ ನಿರ್ಗಮಸಿದರು. ಇದರೊಂದಿಗೆ ಪಂದ್ಯ ರೋಚಕ ‘ಟೈ’ನೊಂದಿಗೆ ಮುಕ್ತಾಯವಾಯಿತು.
ಪಂದ್ಯವಾಳಿಯುದ್ದಕ್ಕೂ ಉತ್ತಮವಾಗಿ ಆಡಿ ಅಭಿಮಾನಿಗಳ ಮನ ಗೆದ್ದಿರುವ ಅಫ್ಗಾನಿಸ್ತಾನ ತಂಡವು ಭಾರತ ತಂಡಕ್ಕೂ ದಿಟ್ಟ ಸವಾಲು ಒಡ್ಡಿತು.
‘ಕ್ರಾಸ್ ಬ್ಯಾಟ್’ ಮಿಂಚು
ಆರಂಭಿಕ ಬ್ಯಾಟ್ಸ್ಮನ್ ಶೆಹಜಾದ್ ತಮಗೆ ಲಭಿಸಿದ ಒಂದು ಜೀವದಾನದ ಲಾಭ ಪಡೆದರು. ‘ಕ್ರಾಸ್ ಬ್ಯಾಟ್’ ಹೊಡೆತಗಳ ಮೂಲಕ ಬೌಲರ್ಗಳ ಲಯ ತಪ್ಪಿಸಿದರು.
ಇನ್ನೊಂದು ಬದಿಯಲ್ಲಿ ವಿಕೆಟ್ಗಳು ಉದುರುತ್ತಿದ್ದರೂ ಶೆಹಜಾದ್ ಅಂಜದೆ, ಅಳುಕದೇ ಬ್ಯಾಟ್ ಬೀಸಿದರು. ಏಳು ಅಮೋಘ ಸಿಕ್ಸರ್ಗಳನ್ನು ಬಾರಿಸಿದರು.
ಅಂತಿಮ ಓವರ್ಗಳಲ್ಲಿ ಮೊಹಮ್ಮದ್ ನೈಬಿ ಕೂಡ ಮಿಂಚಿದರು. ಅವರು ಮಿಂಚಿನ ಅರ್ಧಶತಕ ಹೊಡೆದು ತಂಡವು ಹೋರಾಟದ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ರವೀಂದ್ರ ಜಡೇಜ ಮೂರು ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ಗಳನ್ನು ಕಬಳಿಸಿದರು. ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಒಂದು ವಿಕೆಟ್ ಗಳಿಸಿದರು.
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ .. ಜೈಲಿನಲ್ಲಿನ ಕೆಲವು ಅಧಿಕಾರಿಗಳು ತಮ್ಮ ಹಳೆಯ ಚಾಳಿ…
ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…
ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಹೊಂದಿರುವ…
ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…