ಪಡುಬಿದ್ರಿ: ಕಂಬಳ ಒಂದು ಅಪರೂಪದ ಜಾನಪದ ಕ್ರೀಡೆ. ಕೋಣಗಳಿಗೆ ಅದ್ಭುತ ಶಕ್ತಿ ಇದೆ. ಇದರ ಹಿಂದೆ ಕೋಣ ಓಡಿಸುವವರ ಕೈ ಚಳಕ. ವೇಗದ ಓಟ, ಕೋಣ ಸಾಕುವವರ ಕ್ರಮ, ಎಲ್ಲಕ್ಕಿಂತ ಮುಖ್ಯವಾಗಿ ಕಂಬಳ ನಡೆಸುವ ವ್ಯವಸ್ಥಾಪಕರ ಪರಿಶ್ರಮ ಬಹಳಷ್ಟಿದೆ. ಹೀಗಾಗಿ ಕಂಬಳವು ಅಂತಾರಾಷ್ಟ್ರೀಯ ಮನ್ನಣೆಯ ಕ್ರೀಡೆಯಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಕಾಸರಗೋಡು, ದ. ಕ., ಉಡುಪಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
ಪಡುಬಿದ್ರಿಯಲ್ಲಿ ಪತ್ರಕರ್ತ ರೊಂದಿಗೆ ಅವರು ಮಾತನಾಡಿ, ಕಂಬಳಾಭಿಮಾನಿ ಸಿಎಂ ಸಿದ್ದರಾಮಯ್ಯ ಅವರ ಆಸೆಯಂತೆ ಬೆಂಗಳೂರಿನಲ್ಲಿ ಕಂಬಳ ನಡೆಸುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ರಾಜಧಾನಿಯಲ್ಲಿ ಕಂಬಳ ನಡೆಯುತ್ತಿ ರುವುದು ಹೆಮ್ಮೆಯ ವಿಚಾರವಾಗಿದ್ದು ಕಂಬಳದ ಯಶಸ್ಸಿಗೆ ಎಲ್ಲರ ಸಹಕಾರವೂ ಅತ್ಯಗತ್ಯ ಎಂದರು.
ಕಂಬಳ ಭವನ ನಿರ್ಮಾಣದ ಆಶಯ
ಸುಮಾರು 1ಎಕ್ರೆ ಜಾಗದಲ್ಲಿ “ಕಂಬಳ ಭವನ’ ನಿರ್ಮಾಣದ ಯೋಜನೆಯಿದೆ. ಕಂಬಳದ ಕ್ರೀಡೆ ಯನ್ನು ಶಿಸ್ತು ಹಾಗೂ ಸಮಯ ಪಾಲನೆಯೊಂದಿಗೆ 24 ಗಂಟೆಗೊಳಗೆ ಮುಕ್ತಾಯಗೊಳಿಸುವುದು, ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಲಾ ಗುವುದು. ಕಳೆದ ವರ್ಷ 18 ಕಂಬಳ ಜರಗಿತ್ತು. ಈ ಬಾರಿ 24 ಜೋಡುಕೆರೆ ಕಂಬಳಗಳ ಅರ್ಜಿ ಬಂದಿವೆ. ವೇಳಾಪಟ್ಟಿ ಸಿದ್ದಮಾಡುವುದೇ ಸಮಿತಿಯ ಮುಂದಿರುವ ದೊಡ್ಡ ಸವಾಲು. ಇದೀಗ 224 ಜೋಡಿ ಕೋಣಗಳು ಕಂಬಳ ಕೂಟದಲ್ಲಿ ಭಾಗವಹಿಸುತ್ತಿರುವುದು ಇತಿಹಾಸ. ಯುವಕರು, ಮಹಿಳೆಯರಲ್ಲದೇ ವಿದೇಶಿಗರೂ ಈ ಕ್ರೀಡೆಯತ್ತ ಆಕರ್ಷಿತರಾಗಿದ್ದಾರೆ ಎಂದು ಅವರು ವಿವರಿಸಿದರು
ಭಕ್ತರು ಗೋಕರ್ಣದ ಗಣೇಶನ ವಿಗ್ರಹ ಸ್ಪರ್ಶಿಸಿ ಪೂಜೆ ಮಾಡುವಂತಿಲ್ಲ ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು…
ಕೊಲಂಬೊ : ಅಕ್ರಮ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಕೊಲಂಬೊ :…
ಸುಳ್ಯ: ಬೈಕ್-ಕಾರು ಅಪಘಾತ; ದ್ವಿತೀಯ ಪಿಯು ವಿದ್ಯಾರ್ಥಿ ಸಾವು ಅರಂತೋಡು: ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ…
ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ ಮಂಗಳೂರು: ನೀಟ್ ಪರೀಕ್ಷೆಯಲ್ಲಿನ…
ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿವಕುಮಾರ್ ಆಗ್ರಹ ಬೆಂಗಳೂರು: ಪ್ರಶ್ನೆ ಪತ್ರಿಕೆ…
ವಿದ್ಯಾರ್ಥಿಗಳ ಹಿತಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು:…