ಉಡುಪಿ

ಕಟಪಾಡಿಯಲ್ಲಿ ನಡೆಯಿತು ಮತ್ತೊಂದು ಪವಾಡ, ಭಾವಚಿತ್ರವಿರುವ ಸಾಯಿಬಾಬಾರ ಪಾದದಲ್ಲಿ ಹರಿಯುತ್ತಿದೆ ತುಪ್ಪ, ನೋಡಲು ಹರಿದು ಬರುತ್ತಿದೆ ಭಕ್ತರ ದಂಡು

ಕಟಪಾಡಿ: ಯಾರು ನಂಬಲಾಗದ ಅಚ್ಚರಿಯೊಂದು ಇಲ್ಲಿ ನಡೆಯುತ್ತಿದೆ, ದಿನಾ ಬೆಳಿಗ್ಗೆ ಪೂಜೆ ಸಮಯಕ್ಕೆಂದು ಸಾಯಿಬಾಬಾರ ಭಾವಚಿತ್ರದ ಮುಂದೆ ಬಂದು ನಿಂತರೆ ಅದೇನೂ ತುಪ್ಪದಂತೆ ದ್ರವರೂಪದ ವಸ್ತು ಕಾಣ ಸಿಗುತ್ತೆ ಅರೇ ಇದು ಎಲ್ಲಿಂದ ಬರುತ್ತಿದೆ ನೋಡಿದ್ರೆ ಅಲ್ಲಿಯವರಿಗೂ ಅಚ್ಚರಿ ಕಾದಿತ್ತು.ಹಾಗದರೇ ಅದು ಎಲ್ಲಿ ,ಏನೂ ಎಂಬೂದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ,

ಉಡುಪಿ ಜಿಲ್ಲೆ ಕಟಪಾಡಿಯಿಂದ ಮಂಗಳೂರು ಸಾಗುವ ರಾಷ್ಟ್ರೀಯ ಹೆದ್ದಾರಿ 66 ಎಡ ಭಾಗಕ್ಕೆ ತಿರುಗಿದರೆ ಕಾಣಸಿಗುವುದು ವಿಶ್ವಕ್ಕೆ ಪರಿಮಳ ಸೂಸಿದ ಶಂಕರಪುರ ಎಂಬ ಸಣ್ಣ ಊರು ಅಲ್ಲಿದೇ ಒಂದು ದ್ವಾರಕಮಯಿ ಶ್ರೀ ಸಾಯಿ ಸಾಂತ್ವನ ಮಂದಿರ. ಸುಮಾರು ವರ್ಷದಿಂದ ಗುರೂಜಿ ಸಾಯಿ ಈಶ್ವರ್ ಆರಾಧನೆ ಮಾಡಿಕೊಂಡಿರುವ ಸಾಯಿಬಾಬಾರ ಪ್ರತಿಷ್ಟಾ ಮೂರ್ತಿ ಮತ್ತು ಸಾಯಿಬಾಬಾರ ಭಾವಚಿತ್ರ ಪ್ರತೀ ಗುರುವಾರ ಪೂಜೆ ಪುರಸ್ಕಾರ ನಡೆಯುತ್ತದೆ ಆದ್ರೇ ಕಳೆದರಡು ವರ್ಷದಿಂದ ಇಲ್ಲಿ ಅಚ್ಚರಿಯ ಪ್ರಸಂಗ ನಡೆಯುತ್ತಿದೆ ಅದೇನೆಂದರೆ ಶಿರಡಿ ಸಾಯಿಬಾಬಾರ ಭಾವಚಿತ್ರದಲ್ಲಿ ಸಾಯಿಬಾಬಾರ ಪಾದದ ಭಾಗದಲ್ಲಿ ತುಪ್ಪದ ರೀತಿಯ ದ್ರವವೊಂದು ಹರಿದು ಬರುತ್ತಿದೆ.
ಅರೇ ಇದೇನಪ್ಪ ಅಂತಾ ಅಚ್ಚರಿ ಪಟ್ಟವರು ಖುದ್ದಾಗಿ ಬೇಟಿ ನೀಡಿದವರಿಗೆ ಕಾದಿತ್ತು ಶಾಕ್,ಮುಟ್ಟಿನೋಡಿದರೆ ಅದು ತುಪ್ಪದಂತೆ ಪರಿಮಳ ಬರುತ್ತಿದೆ ಆದ್ರೇ ಇದು ಈ ವರ್ಷ ಮಾತ್ರವಲ್ಲ ಕಳೆದೆರಡು ವರ್ಷದಿಂದ ಈ ರೀತಿಯಾಗಿ ಗೋಚರಿಸುತ್ತಿದೆ ಅಂತಾರೇ ಅಲ್ಲಿಯ ಭಕ್ತರು.ಹಾಗಾದರೇ ಈ ರೀತಿ ನಡೆಯಲು ಕಾರಣ ಏನೆಂದು ವಿಚಾರಿಸಿದಾಗ ಅಲ್ಲಿಯ ಮುಖ್ಯಸ್ಥರಾದ ಗುರೂಜಿ ಸಾಯಿ ಈಶ್ವರ್ ಹೀಗೆನ್ನುತ್ತಾರೆ” ಕಳೆದ ಎರಡು ವರ್ಷದಿಂದ ಇದೇ ರೀತಿ ತುಪ್ಪದ ದ್ರವ ಕಾಣುತ್ತಿತ್ತು ಆದ್ರೇ ಈ ವರ್ಷ ಮಾತ್ರ ಜಾಸ್ತಿಯಾಗಿಯೇ ಕಾಣ್ತ ಇದೆ,ಯಾರೂ ಕೂಡ ನಂಬುವ ವಿಚಾರ ಅಲ್ಲ. ನಾನು ಕೂಡು ನಂಬಿರಲಿಲ್ಲ ಆದ್ರೇ ಪದೇಪದೆ ಈ ರೀತಿಯಾಗಿ ಗೋಚರಿಸುವುದರಿಂದ ಸಾಯಿಬಾಬಾರ ನೂರನೇ ಸಮಾಧಿ ವರ್ಷ ಆಗಿರುವುದರಿಂದ ದೇಶದಲ್ಲಿ ವಿವಿಧ ರೀತಿಯ ಪವಾಡಗಳು ಆಗುತ್ತಿರುವುದು ಮತ್ತು ಇಲ್ಲಿಯೂ ನಡೆಯುತ್ತಿರುವುದು ಒಂದಕ್ಕೊಂದು ಕೊಂಡಿಯಂತೆ ಇದೆ ಅನ್ನುತ್ತಾರೆ.

ಆದರೇ ಏನೇ ಆಗಿರಲಿ ಕಲಿಯುಗದಲ್ಲಿಯೂ ಇಂಥಹ ಪ್ರಸಂಗಗಳು ನಡೆಯುತ್ತಿರುವುದು ಮಾತ್ರ ಅಚ್ಚರಿ ತಂದಿದೆ ಇದನ್ನ ನೋಡಲೆಂದೆ ದಿನಂಪ್ರತಿ ನೂರಾರು ಭಕ್ತರು ಕ್ಷೇತ್ರಕ್ಕೆ ಬಂದು ಹೋಗುತ್ತಿರುವುದು ಜನರ ಕುತೂಹಲ ಮತ್ತಷ್ಟು ಹೆಚ್ಚಿದೆ.

 

ಜಾಹಿರಾತು

 

Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

11 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

11 hours ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

11 hours ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

14 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

14 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

14 hours ago