ಕಟಪಾಡಿ: ರಾ. ಹೆ. 66ರ ಕಟಪಾಡಿ ಜಂಕ್ಷನ್ನಲ್ಲಿ ಅಂಡರ್ಪಾಸ್ ಮತ್ತು ವೆಹಿಕಲ್ ಓವರ್ಪಾಸ್ ನಿರ್ಮಾಣದಲ್ಲಿ ಪಶ್ಚಿಮಪಾರ್ಶ್ವ ಕಾಮಗಾರಿಯ ಶೇ. 80 ಭಾಗ ಪೂರ್ಣಗೊಂಡಿದ್ದು, ಅಂಡರ್ಪಾಸ್ ರಸ್ತೆ ವಾರದೊಳಗಾಗಿ ಮಂಗಳೂರಿನಿಂದ ಉಡುಪಿಗೆ ಆಗಮಿಸುವ ವಾಹನಗಳ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಅಂಡರ್ಪಾಸ್ ಕಾಮಗಾರಿ ನಡೆಯುತ್ತಿರುವ ಪಶ್ಚಿಮ ಪಾರ್ಶ್ವದಲ್ಲಿ ರಿಟೈನಿಂಗ್ ವಾಲ್, ಡ್ರೈನೇಜ್, ಫೌಂಡೇಶನ್ ರಾವ್, ಕ್ಯಾಶ್ ಗಾರ್ಡ್ ಬ್ಯಾರಿಯರ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಹೆದ್ದಾರಿ ನಿರ್ಮಾಣದ ಪ್ರದೇಶದಲ್ಲಿ ವೆಟ್ಮಿಕ್ಸ್ ಅಳವಡಿಕೆ ಪ್ರಗತಿಯಲ್ಲಿದೆ. ಡಾಮರು ಕಾಮಗಾರಿ ಬಳಿಕ 11 ಮೀ. ಅಗಲದ ಪಶ್ಚಿಮ ಪಾರ್ಶ್ವ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಬಳಿಕ ಪೂರ್ವ ಪಾರ್ಶ್ವದ ಅಂಡರ್ಾಸ್ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ವೆಹಿಕಲ್ ಓವರ್ಪಾಸ್ ಕೂಡಾ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ಎಂಜಿನಿ ಯರ್ ವಲಯದಲ್ಲಿ ವ್ಯಕ್ತವಾಗಿದೆ. ಮಂಗಳೂರಿನತ್ತ ತೆರಳುವ ವಾಹನ ಸಂಚಾರ ವ್ಯವಸ್ಥೆ ಈಗಿರುವ ಮಾದರಿಯಲ್ಲಿಯೇ ಮುಂದುವರಿಯಲಿದೆ.
ಇದನ್ನೂ ಓದಿ:
17 ಕೋಟಿ ರೂ. ವೆಚ್ಚದಲ್ಲಿ ರಾ. ಹೆ. ಅಂಡರ್ಪಾಸ್ ಮತ್ತು ವೆಹಿಕಲ್ ಓವರ್ಪಾಸ್ ನಿರ್ಮಾಣ ಕಾಮಗಾರಿ ಕಿನ್ನಿಮೂಲ್ಕಿ ಮಾದರಿಯಲ್ಲಿ ನಡೆಯುತ್ತಿದೆ. ಕಟಪಾಡಿ ಜಂಕ್ಷನ್ನಿಂದ ಮಂಗಳೂರು-ಉಡುಪಿ ಭಾಗದತ್ತ ಒಟ್ಟು 535 ಮೀ. ಉದ್ದದವರೆಗಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 5.5 ಮೀ. ಎತ್ತರ ಹೊಂದಿರುತ್ತದೆ. ನ್ಯಾಶನಲ್ ಇನ್ಫ್ರಾ ಪ್ರಾಜೆಕ್ಟ್ ಕಂಪೆನಿ ಕಾಮಗಾರಿ ನಿರ್ವಹಿಸುತ್ತಿದೆ. 2025ರ ನವೆಂಬರ್ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.
ರಾ. ಹೆ. 66ರ ಶಿರ್ವ ರಸ್ತೆಯ ಭಾಗದಿಂದ ಕಟಪಾಡಿ ಪೇಟೆಯೊಳಕ್ಕೆ (ಪೂರ್ವ, ಪಶ್ಚಿಮ ಭಾಗಕ್ಕೆ) ಬಂದು ಹೋಗುವ ಪಾದಚಾರಿಗಳ ಸುರಕ್ಷೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಕಷ್ಟು ಮಾರ್ಗಸೂಚಿ ಫಲಕಗಳು, ವಾಹನಗಳ ವೇಗ ನಿಯಂತ್ರಣ ಸಹಿತ ಹೈಮಾಸ್ಟ್ ಲೈಟ್ಗಳನ್ನು ಅಳವಡಿಸಿ ಸುರಕ್ಷ ಕ್ರಮ ಅನುಸರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಶೇ. 80 ಭಾಗ ಕಾಮಗಾರಿ ಪೂರ್ಣಗೊಂಡಿದೆ. ವೆಟ್ಮಿಕ್ಸ್ ಅಳವಡಿಸುವ ಕಾಮಗಾರಿ ಪ್ರಗತಿ ಯಲ್ಲಿದೆ. ಬಳಿಕ ಡಾಮರು ಕಾಮಗಾರಿ ನಡೆಸಲಾಗುತ್ತದೆ. ವಾರದೊಳಗಾಗಿ ಉಡುಪಿ ಭಾಗದತ್ತ ವಾಹನಗಳನ್ನು ಇದೇ ರಸ್ತೆಯಲ್ಲಿ ಸಂಚಾರಕ್ಕೆ ಬಿಡಲಾಗುತ್ತದೆ. ಮಂಗಳೂರು ಭಾಗದತ್ತ ತೆರಳುವ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
– ಮೊಹಿದ್ದೀನ್, ಸೈಟ್ ಎಂಜಿನಿಯರ್
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…