ಉಡುಪಿ

ಕಟಪಾಡಿ ಪೇಟೆಬೆಟ್ಟುವಿನಲ್ಲಿ ನಿಲ್ಲದ ಕೊರಗಜ್ಜನ ಪವಾಡ, ಜೂನ್ ೧೫ನೇ ತಾರೀಕಿಗೆ ನಡೆಯುತ್ತೆ ವಿಶೇಷ ದರ್ಶನ ಸೇವೆ ಯಾಕೆ ಗೊತ್ತಾ…? ಓದಿ ವಿಶೇಷ ವರದಿ” ಕೊರಗಜ್ಜನ ಪವಾಡ”

ಕಾಪು: ಉಡುಪಿ ತಾಲ್ಲೂಕಿನ ಕಟಪಾಡಿ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಈಚೆಗೆ ಮುಸ್ಲಿಂ ಕುಟುಂಬ ಬಬ್ಬುಸ್ವಾಮಿ ಕೊರಗಜ್ಜ ದೈವಕ್ಕೆ ದರ್ಶನ ಸೇವೆ ಮಾಡಿಸಿದ್ದು, ವ್ಯಾಪಕ ಸುದ್ದಿ ಆಗಿತ್ತು. ಈಗ ಈ ದೈವಸ್ಥಾನದ ಕಾರಣಿಕ ಕಂಡು ರಾಜ್ಯದ ನಾನಾ ಕಡೆಗಳಿಂದ ಎಲ್ಲ ಧರ್ಮದ ಭಕ್ತರು ದರ್ಶನಕ್ಕೆ ಬರಲಾರಂಭಿಸಿದ್ದಾರೆ. ಇದೇ 15ರಂದು ಮಿಥುನ ಸಂಕ್ರಮಣದಂದು ಮತ್ತೊಮ್ಮೆ ವಿಶೇಷ ದೈವದರ್ಶನ ಸೇವೆ ಸಂಪನ್ನವಾಗಲಿದೆ.

ಕಟಪಾಡಿ ಮೂಲದ ಮುಸ್ಲಿಂ ಯುವಕ ಕೆಲವರೊಂದಿಗೆ ಸೇರಿ ಕೊರಗಜ್ಜ ದೈವಕ್ಕೆ ಅಪಚಾರ ಎಸಗಿಗಿದ್ದ. ಪರಿಣಾಮ ಕುಟುಂಬಕ್ಕೆ  ಆರೋಗ್ಯ ಸಮಸ್ಯೆ ಕಾಣಿಸಿತ್ತು. ಹಲವರ ಎದುರು ದೈವದರ್ಶನ ನಡೆಸಲಾಗಿತ್ತು. ಈ ಪವಾಡವು ತಿಳಿಯುತ್ತಿದ್ದಂತೆ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಪರಿಸರದಲ್ಲಿ ಭಕ್ತರ ದಂಡು ಕಾಣುವಂತಾಯಿತು. ಪ್ರತೀ ತಿಂಗಳ ಸಂಕ್ರಮಣದ ಹೊರತು ಬೇರೆ ದಿವಸದಲ್ಲಿ ಈ ದೈವಸ್ಥಾನದ ಬಾಗಿಲು ತೆರೆಯದೆ ಇರುವುದರಿಂದ ಭಕ್ತರು ನಮಸ್ಕರಿಸಿ ಹೋಗುತ್ತಾರೆ. ದೈವದ ಅಭಯಕ್ಕಾಗಿ ಬರುವ ಸಂಕ್ರಮಣದವರೆಗೆ ಭಕ್ತರು ಕಾಯಬೇಕು.

ಪೇಟೆಬೆಟ್ಟು ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಈ ಕಾರಣಿಕ ನಡೆದ ಬಳಿಕ ಭಕ್ತರು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವದ ಕ್ಷೇತ್ರಕ್ಕೆ ಬರುತ್ತಿರುವುದು ಈ ಕ್ಷೇತ್ರದ ವಿಶೇಷತೆ ಹೆಚ್ಚಿಸಿದೆ. ಬೆಂಗಳೂರು, ಶಿವಮೊಗ್ಗ, ಎನ್ ಆರ್. ಪುರ , ಬಾಗಲಕೋಟೆ, ಮಂಗಳೂರು, ಕುಂದಾಪುರ ಸೇರಿದಂತೆ ವಿವಿಧ ಕಡೆಗಳ ಭಕ್ತರು ಸಮಸ್ಯೆಗಳ ಪರಿಹಾರಕ್ಕಾಗಿ ಜೂ.15 ರಂದು ಮತ್ತೊಮ್ಮೆ ವಿಶೇಷ ದರ್ಶನ ಸೇವೆ ನಡೆಸಲು ದೈವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ದೈವದರ್ಶನ ಸೇವೆ ಮುಸ್ಲಿಂರಿಗೆ ಮಾತ್ರವಲ್ಲದೇ ಎಲ್ಲ ಸಮೂಹದ ಭಕ್ತರಿಗೂ ಇದೆ. ಭಕ್ತರು ಕಷ್ಟ ಪರಿಹಾರಕಕ್ಕಾಗಿ ವಿಶೇಷ ದರ್ಶನ ಸೇವೆಯನ್ನು ಸಂಕ್ರಮಣದಂದು ಬೆಳಿಗ್ಗೆ 10 ಗಂಟೆಯಿಂದ ದೈವಸ್ಥಾನದಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಹಲವಾರು ಮಂದಿ ದರ್ಶನ ಸೇವೆಯಲ್ಲಿ ಪ್ರಶ್ನೆ ಕೇಳಲು ಹೆಸರು ದಾಖಲು ಮಾಡಿದ್ದಾರೆ. ಸಾವಿರಾರು ಸಂಖ್ಯೆ ಭಕ್ತರು ಸೇರುವ ನಿರೀಕ್ಷೆ ಇದೆ. ದೈವಸ್ಥಾನದಲ್ಲಿ ಭಕ್ತರಿಗೆ ಸೇರಲು ಮತ್ತು ವಾಹನ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ದೈಸ್ಥಾನದ ಕಾಣಿಕೆ ಡಬ್ಬಿಕಳವು ಮಾಡಿದ್ದ ಯುವಕ ಕೊರಗಜ್ಜನ ಅಭಯವಾಕ್ಯದಿಂದ ಗುಣಮುಖವಾಗಿ ನಿತ್ಯವೂ ಬಬ್ಬುಸ್ವಾಮಿ, ಕೊರಗಜ್ಜ ದೈವಸ್ಥಾನಕ್ಕೆ ಬಂದು ದೇವರ ಗಂಧ ಪ್ರಸಾದ ಪಡೆದುಕೊಳ್ಳುತ್ತಿರುವ ವೈರಲ್ ಆಗಿತ್ತು. ಈಗ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಬಬ್ಬುಸ್ವಾಮಿ ಕೊರಗಜ್ಜನ ದರ್ಶನ ಪಡೆಯುತ್ತಿದ್ದಾರೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತುಕಾರಾಮ ತಿಳಿಸಿದ್ದಾರೆ.

ಇದೇ ಮೊದಲ ಸಲ ದೈವದರ್ಶನಕ್ಕೆ ಟೋಕನ್!

ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ದೈವದರ್ಶನ ಸೇವೆ ನಡೆಯುವ ದಿನ ಭಕ್ತರನ್ನು ನಿಯಂತ್ರಿಸಿ, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ. ಭಾನುವಾರ ತನಕ ರಾಜ್ಯದ ವಿವಿದೆಢೆಗಳಿಂದ ಹಲವಾರು ಮಂದಿ ಟೋಕನ್ ಪಡೆದು ದರ್ಶನದಲ್ಲಿ ಪ್ರಶ್ನೆ ಕೇಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಕಡೆಗಳಿಂದ ದೈವಸ್ಥಾನಕ್ಕೆ ಕರೆಗಳು ಬರುತ್ತಿದ್ದು, ಇನ್ನೂ ಸುಮಾರು ಟೋಕನ್ ವಿತರಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಟೋಕನ್ ವ್ಯವಸ್ಥೆಯನ್ನು ಇತಿಹಾಸದಲ್ಲೇ ಪ್ರಥಮವಾಗಿ ಆರಂಭಿಸಲಾಗಿದೆ. ಇದು ನಾವು ನಂಬಿರುವ ಬಬ್ಬುಸ್ವಾಮಿ ಕೊರಗಜ್ಜ ದೈವದ ಮಹಿಮೆಯಾಗಿದೆ ಅನ್ನುತ್ತಾರೆ ಹಿರಿಯರು.

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

19 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

19 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

20 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

21 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

22 hours ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

22 hours ago