Featured

ಕಣ್ಣಿಲ್ಲದಾತನಿಗೆ ಕೈಗೋಲಿನ ಆಸರೆಯಂತೆ ಸಹಕರಿಸುತ್ತಿರುವ ಬಡವರ ಪಾಲಿನ ಆಶಾಕಿರಣ ಸೈಲೆಂಟ್ ಸಮಾಜಸೇವಕ ದಯಾನಂದ್ ಹೆಜಮಾಡಿ ಈ ಸಮಾಜಕ್ಕೊಂದು ಆದರ್ಶ

ಕಣ್ಣಿಲ್ಲದಾತನಿಗೆ ಕೈಗೋಲಿನ ಆಸರೆಯಂತೆ ಸಹಕರಿಸುತ್ತಿರುವ ಬಡವರ ಪಾಲಿನ ಆಶಾಕಿರಣ ಸೈಲೆಂಟ್ ಸಮಾಜಸೇವಕ ದಯಾನಂದ್ ಹೆಜಮಾಡಿ.

ಮಂಗಳೂರು: ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ಭುಜಂಗ ಪೂಜಾರಿಯ ಸುಪುತ್ರ ಬಾಲ್ಯದಿಂದಲೂ ಬಡತನದ ಬೇಗೆಯನ್ನ ಖುದ್ದಾಗಿ ಅನುಭವಿಸಿ ಪ್ರಸ್ತುತ ಉದ್ಯಮಿಯಾಗಿ ಸಾವಿರಾರು ಜನರಿಗೆ ಆಶಾಕಿರಣವಾಗಿ ಸಮಾಜ ಸೇವೆಗೂ ತನ್ನ ಅಭೂತಪೂರ್ವ ಸೇವೆಸಲ್ಲಿಸುತ್ತೀರುವ ಸೈಲೆಂಟ್ ಸಮಾಜಸೇವಕ ಶ್ರೀ ದಯಾನಂದ್ ಹೆಜಮಾಡಿ ಕುರಿತಾದ ಸಣ್ಣ ಲೇಖನ ಇಲ್ಲಿದೆ ಓದಿ.

ಕಾಲೇಜು ಜೀವನದಲ್ಲಿಯೇ ನಾಯಕತ್ವದ ಗುಣವನ್ನ ಮೈಗೂಡಿಸಿಕೊಂಡು 1992-93 ರ ಸಾಲಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಸರ್ವ ಕಾಲೇಜು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ದಯಾನಂದ್ ಹೆಜಮಾಡಿ ಇದೀಗ ಉದ್ಯಮಿ ಕಂ ಸುದ್ದಿಯಾಗಲು ಬಯಸದ ಸಮಾಜ ಸೇವಕ.

ನೂರಾರು ಕುಟುಂಬಗಳಿಗೆ ಆರ್ಥಿಕ ನೆರವು. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಧನಸಹಾಯ,ಸೂರಿಲ್ಲ ಅದೇಷ್ಟೋ ಕುಟುಂಬಗಳಿಗೆ ಆಸರೆಯಾಗಿ,ಮೂಕ ಪ್ರಾಣಿಗಳ ಜೀವಕ್ಕೂ ಬೆಲೆ ಇದೆ ಎಂದು ನಂಬಿಕೊಂಡು ಪ್ರಾಣಿ ಪಕ್ಷಿಗಳ ಕ್ಷೇಮಪಾಲನೆಗೆ ಅಂಬ್ಯೂಲೆನ್ಸ್ ಕೊಡುಗೆ, ವಿದ್ಯುತ್ ದೀಪದ ಬೆಳಕನ್ನೆ ಕಾಣದ ಅನಾನುಕೂಲ ಕುಟುಂಬಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿದ, ದೀನದಲಿತರ ಕಷ್ಟಗಳಿಗೆ ಸ್ಪಂದಿಸಿ, ಬುದ್ದಿಮಾಂದ್ಯ ಮಕ್ಕಳಿಗೆ ಜೀವನಾವಶ್ಯಕ ವಸ್ತುಗಳನ್ನ ನೀಡಿ ಅವರಿಗಾಗಿ ಒಂದಿಷ್ಟು ಸಮಯ ನೀಡಿ, ಉಚಿತ ಸಾಮೂಹಿಕ ವಿವಾಹವನ್ನ ಆಯೋಜಿಸಿ ಬಡ ವಧುವರರಿಗೆ ಮಾಂಗಲ್ಯ ಭಾಗ್ಯ ಕಲ್ಪಿಸಿದ ಸಮಾಜಸೇವಕ ದಯಾನಂದ್ ಹೆಜಮಾಡಿ.
ಕುಡಿತದ ಚಟದಿಂದ ಕುಟುಂಬಗಳು ಬಳಲುತ್ತೀರುವುದನ್ನ ಮನಗಂಡು ಮದ್ಯವ್ಯರ್ಜನ ಶಿಬಿರ ನಡೆಸಿ ನೂರಾರು ಮದ್ಯವ್ಯಸನಿಗಳ ಮನವರ್ತಿಸಿದ ಕೀರ್ತಿ ದಯಾನಂದ್ ಅವರಿಗೆ ಸಲ್ಲಬೇಕಾಗಿದೆ.

ಪ್ರತಿದಿನ ರಸ್ತೆಯಲ್ಲಿ ತಿರುಗಾಡುವ ಅನಾಥ ನಿರ್ಗತಿಕರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸಾಯಿಬಾಬ ಮಂದಿರದ ಸಾಯಿತುತ್ತು ಕಾರ್ಯಕ್ರಮದಡಿಯಲ್ಲಿ ಕೈಜೋಡಿಸಿ ನಿತ್ಯ ಅನ್ನಸಾಸೋಹ ಮಾಡುತ್ತೀರುವ ಅನ್ನದಾತ.

ಸಾಮಾಜಿಕವಾಗಿ ಮಾತ್ರವಲ್ಲದೇ ಅದೇಷ್ಟೊ ಸಾಂಸ್ಕøತಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೆ ಕೊಡುಗೆ ನೀಡುತ್ತ ಬಂದಿರುವ ಇವರು ಮಹಾಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾನು ಮಾಡುವ ಕಾರ್ಯ ದೇವರಿಗೆ ಸಮರ್ಪಣೆಯೆಂಬ ದೃಷ್ಟಿಯಿಂದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದೇ ಎಲ್ಲಾವೂ ದೈವ ಇಚ್ಛೆ ಅನ್ನುವ ರೀತಿಯ ಸರಳ ಜೀವನದ ವ್ಯಕ್ತಿ.

 

ದಯಾನಂದ್ ಹೆಜಮಾಡಿ ಅವರಿಗೆ ಬಯಸದೆ ಬಂದ ಪ್ರಶಸ್ತಿಗಳು ನೂರಾರು ವಿಶೇಷವಾಗಿ 2017 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಶ್ರೀ ರಕ್ಷೇ ಪ್ರಶಸ್ತಿ,ಶ್ರೀ ಸಾಯಿ ಸೇವಾ ಪ್ರಶಸ್ತಿ,ಕರ್ನಾಟಕ ಸೇವಾರತ್ನ ಪ್ರಶಸ್ತಿ,ಸಮಾಜ ಸೇವಾ ರತ್ನ ಪ್ರಶಸ್ತಿ,ಕರಾವಳಿ ರತ್ನ ಪ್ರಶಸ್ತಿ, ವಿವೇಕಾನಂದ ಕೇಸರಿ ಪ್ರಶಸ್ತಿ,ಹೀಗೆ ನೂರಾರು ಸನ್ಮಾನಗಳನ್ನ ಪಡೆದುಕೊಂಡರು ಪ್ರಚಾರ ಬಯಸದಿರುವ ಸೈಲೆಂಟ್ ಸಮಾಜ ಸೇವಕ ಈ ಸಮಾಜಕ್ಕೊಂದು ಕೀರ್ತಿ.

ಪ್ರಸ್ತುತ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೆಸರರಾಗಿ ಅದರ ಜತೆಗೆ ಹತ್ತಾರು ಸಂಘಸಂಸ್ಥೆಗಳಲ್ಲಿ ಉನ್ನತ ಅಧಿಕಾರದಲ್ಲಿದ್ದರೂ ಸದಾ ಹಸನ್ಮುಖಿ ದಯಾನಂದ್ ಹೆಜಮಾಡಿ,ಪ್ರಸ್ತುತ ಕಾಲಘಟ್ಟದಲ್ಲಿ ತಾವೂ ಏನೂ ಮಾಡಿದರು ಪ್ರಚಾರಬಯಸುವ ಒಂದಿಷ್ಟು ಜನರ ಮಧ್ಯೆ ಜಾತಿ ಮತ ಪಂಥಗಳ ಬೇಧವಿಲ್ಲದೆ ತಾನು ಮಾಡುವ ಕೆಲಸ ,ಜನತಾ ಸೇವೆ ಜನಾರ್ಧನ ಸೇವೆ ಎಂಬಂತೆ ಬದುಕುತ್ತಿರುವ ದಯಾನಂದ್ ಹೆಜಮಾಡಿ ಈ ಸಮಾಜಕ್ಕೊಂದು ಆದರ್ಶ.

ಬ್ಯೂರೋ ರಿಪೋರ್ಟ್
ವಿಶ್ವನ್ಯೂಸ್24

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

8 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

8 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

9 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

9 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

10 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

10 hours ago