ಕಣ್ಣು ಹಾರುವುದು/ ಕುಣಿಯುವುದು ಇದರ ಅರ್ಥ ಏನು..?? ಇದು ನಂಬಿಕೆಯೋ..?? ಅಪನಂಬಿಕೆಯೋ..?? Vishwanews24

ಸೃಷ್ಟಿಯೇ ಹಾಗೇ ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಆ ಸೃಷ್ಟಿಯಲ್ಲಿ ಒಂದಾದ ನಾವು ದೇವರ ಇರುವಿಕೆ ಹಾಗೂ ಕೆಲವು ಧಾರ್ಮಿಕ ನಂಬಿಕೆಗಳನ್ನು ಆಳವಾಗಿ ನಂಬುತ್ತೇವೆ. ನಮ್ಮ ಜೀವ ಹಾಗೂ ಜೀವನ ನಿಂತಿರುವುದೇ ಪ್ರಮುಖ ನಂಬಿಕೆಗಳ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ಪ್ರಾಣಿಗಳ ಜಗತ್ತಿನಲ್ಲಿ ಒಂದಾದ ಮನುಷ್ಯನು ಒಬಂತ್ತು ನವರಸಗಳನ್ನು ವ್ಯಕ್ತ ಪಡಿಸುತ್ತಾನೆ. ಅದು ಅವನ ಪ್ರಮುಖ ವಿಶೇಷತೆ ಎನ್ನಬಹುದು. ಇತರ ಪ್ರಾಣಿಗಳಿಗಿಂತ ಬುದ್ಧಿವಂತ ಜೀವಿಯಾದ ಮನುಷ್ಯನಿಗೆ ದೈವ ಶಕ್ತಿಯು ಕೆಲವು ವಿಶಿಷ್ಟ ಶಕ್ತಿಯನ್ನು ಸಹ ನೀಡಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವಿವಿಧ ರೂಪು-ರೇಷೆಗಳಿಂದ ಕೂಡಿರುವ ಮನುಷ್ಯನು ಕೆಲವು ಸಂಜ್ಞೆ ಹಾಗೂ ದೇಹದಲ್ಲಿ ಬದಲಾವಣೆಗಳನ್ನು ಅನಿರೀಕ್ಷಿತವಾಗಿ ಅನುಭವಿಸುತ್ತಾನೆ. ಅದು ಅವನ ಭವಿಷ್ಯದಲ್ಲಿ ಸಂಭವಿಸುವ ಸನ್ನಿವೇಶಗಳಿಗೆ ಕನ್ನಡಿ ಹಿಡಿಯುತ್ತವೆ ಎಂದು ಹೇಳಲಾಗುವುದು. ಅಂತಹ ಒಂದು ಅದ್ಭುತ ಶಕ್ತಿ ಅಥವಾ ಬದಲಾವಣೆ ಎಂದರೆ ಅದು ಕಣ್ಣು ಹಾರುವ ಪ್ರಕ್ರಿಯೆ. ಅನಿರೀಕ್ಷಿತವಾಗಿ ಉಂಟಾಗುವ ಈ ದೈಹಿಕ ಬದಲಾವಣೆಗೆ ಕಣ್ಣು ಕುಣಿತ, ಕಣ್ಣು ಹಾರುವುದು, ಕಣ್ಣು ಮಿಟುಕಿಸುವುದು ಎಂದು ಕರೆಯಲಾಗುವುದು. ಕಣ್ಣುಗಳು ಮನುಷ್ಯನ ವಿಶೇಷ ಅಂಗ. ಜಗತ್ತನ್ನು ನೋಡಲು ಅನುವುಮಾಡಿ ಕೊಡುವ ಈ ಅಂಗಕ್ಕೆ ರಕ್ಷಣೆಯಾಗಿ ರೆಪ್ಪೆಗಳು ಇರುತ್ತವೆ. ಈ ರೆಪ್ಪೆಗಳು ಧೂಳು, ಗಾಳಿ ಹಾಗೂ ಇನ್ನಿತರ ತೊಂದರೆಗಳು ಎದುರಾದಾಗ ಮುಚ್ಚುವುದರ ಮೂಲಕ ಕಣ್ಣಿನ ರಕ್ಷಣೆ ಮಾಡುತ್ತವೆ.

ಕಣ್ಣಿಗೆ ರಕ್ಷಣೆಯ ಅಗತ್ಯ ಇಲ್ಲದೆ ಇರುವಾಗ ಕಣ್ಣಿನ ರೆಪ್ಪೆಗಳು ಹರಿದರೆ ಅಥವಾ ಕುಣಿದರೆ ಅದು ನಮ್ಮ ಭವಿಷ್ಯದ ಮಾಹಿತಿಯನ್ನು ನೀಡುತ್ತಿದೆ ಎನ್ನಲಾಗುವುದು. ಎರಡು ಕಣ್ಣುಗಳಲ್ಲಿ ಉಂಟಾಗುವ ಅಥವಾ ಒಂದೇ ಕಣ್ಣಿನಲ್ಲಿ ಕಂಡುಬರುವ ಈ ಬದಲಾವಣೆ ಅಥವಾ ಹಾರುವಿಕೆಗೆ ಧಾರ್ಮಿಕ ಸಂಗತಿಯಲ್ಲಿ ವಿಶೇಷ ಸೂಚನೆ ಹಾಗೂ ಸ್ಥಾನವನ್ನು ನೀಡಲಾಗಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಎನ್ನುವ ಎರಡು ಭಾಗಗಳನ್ನು ಮಾಡಿ, ಅವರಿಗೆ ಉಂಟಾಗುವ ಹಾರುವಿಕೆಯಿಂದ ಭವಿಷ್ಯದ ಸೂಚನೆಯನ್ನು ಪಡೆಯಬಹುದು ಎನ್ನುವುದು. ಪುರುಷರಿಗೆ ಹಾಗೂ ಮಹಿಳೆಯರಿಗೆ ಈ ಸಂದೇಶಗಳು ವಿಭಿನ್ನ ರೀತಿಯಲ್ಲಿ ಇರುವುದು ವಿಶೇಷ.

ಕಣ್ಣು ಹಾರುವಿಕೆ ಅಥವಾ ಕುಣಿಯುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅದೊಂದು ಆರೋಗ್ಯ ದೌರ್ಬಲ್ಯ ಎಂದು ಹೇಳಲಾಗುವುದು. ಆದರೆ ಧಾರ್ಮಿಕ ನಂಬಿಕೆ ಮತ್ತು ದೃಷ್ಟಿಕೋನದಿಂದ ಅನಿರೀಕ್ಷಿತವಾಗಿ ಉಂಟಾಗುವ ಹಾಗೂ ಅಲ್ಪ ಕಾಲ ಮಾತ್ರ ಉಳಿದುಕೊಳ್ಳುವ ಕಣ್ಣಿನ ಹಾರುವಿಕೆಯು ಭವಿಷ್ಯದ ನುಡಿ ಎಂದು ನಂಬಲಾಗಿದೆ. ನೀವು ನಿಮ್ಮ ಕಣ್ಣುಗಳ ಹಾರುವಿಕೆಗೆ ಆಗಾಗ ಒಳಗಾಗುತ್ತಿದ್ದೀರಿ ಅಥವಾ ನಿಮ್ಮವರಿಗೆ ಉಂಟಾಗುತ್ತಿದೆ ಎಂದರೆ ಕೆಲವು ಭವಿಷ್ಯದ ಸಂಗತಿಯನ್ನು ಊಹಿಸಬಹುದು. ಹಾಗಾದರೆ ಆ ಸಂಗತಿಗಳು ಯಾವವು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮಹಿಳೆಯರ ಕಣ್ಣು ಹಾರುವುದು/ ಕುಣಿಯುವುದು
ಮಹಿಳೆಯರು ತಮ್ಮ ಎಡಗಣ್ಣಿನ ರೆಪ್ಪೆಗಳು ಹಾರುತ್ತಿರುವ ಸಂವೇದನೆ ಅಥವಾ ಸಂಜ್ಞೆಯನ್ನು ಅನುಭವಿಸುತ್ತಿದ್ದರೆ ಅದು ನಿಮಗೆ ಶುಭ ಶಕುನ ಎಂದು ಹೇಳಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ ಮಹಿಳೆಯರ ಎಡಗಣ್ಣು ಹಾರಿದರೆ ಅವರ ಜೀವನದಲ್ಲಿ ಆರ್ಥಿಕ ಸ್ಥಿತಿ, ಉದ್ಯೋಗ, ಶಿಕ್ಷಣ, ಕಲೆ, ಸಂಬಂಧ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಒಳ್ಳೆಯ ಸುದ್ದಿ ಅಥವಾ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎನ್ನಲಾಗುವುದು.

ಮಹಿಳೆಯರ ಬಲಗಣ್ಣು ಹಾರಿದರೆ ಅದು ಅಷ್ಟು ಶುಭವಲ್ಲ. ಅದನ್ನು ಕೆಟ್ಟ ಅದೃಷ್ಟದ ಸೂಚನೆ ಎಂದು ಪರಿಗಣಿಸಲಾಗುವುದು. ಜೀವನದಲ್ಲಿ ಕೈಗೆತ್ತಿಕೊಳ್ಳುವ ಎಲ್ಲಾ ವಿಷಯದಲ್ಲೂ ತೊಂದರೆ, ಅಡೆತಡೆ, ಸೋಲು ಅಥವಾ ನಷ್ಟವನ್ನು ಎದುರಿಸಬೇಕಾಗುವುದು ಎನ್ನುವುದನ್ನು ತಿಳಿಸುತ್ತದೆ.

ಪುರುಷರ ಕಣ್ಣು ಹಾರುವುದು/ ಕುಣಿಯುವುದು
ಪುರುಷರು ತಮ್ಮ ಎಡಗಣ್ಣು ಹಾರುವ ಪ್ರಕ್ರಿಯೆ ಅಥವಾ ಸಂಜ್ಞೆಯನ್ನು ಎದುರಿಸುತ್ತಿದ್ದರೆ ಅದು ಅವರಿಗೆ ಅಶುಭದ ಸಂಕೇತ. ಅವರು ಕೈಗೊಳ್ಳುವ ಕೆಲಸ ಅಥವಾ ಸಂದರ್ಭಗಳು ಕಠಿಣ ಪರಿಶ್ರಮದಿಂದ ಕೂಡಿರುತ್ತದೆ. ಅಲ್ಲದೆ ಎಲ್ಲಾ ಸಂಗತಿಯಲ್ಲೂ ನೋವು ಹಾಗೂ ಸೋಲು ಎದುರು ನಿಂತಿರುತ್ತವೆ. ಈ ಬದಲಾವಣೆಯು ಭವಿಷ್ಯದಲ್ಲಿ ನಕಾರಾತ್ಮಕ ಸಂಗತಿಯಿಂದ ಕೂಡಿರುವುದನ್ನು ಸ್ಪಷ್ಟಪಡಿಸುವುದು.

ಪುರುಷರಿಗೆ ಬಲಗಣ್ಣು ಹಾರಿದರೆ ಅದು ಶುಭ ಸಂಗತಿ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಉತ್ತಮ ಪ್ರಚಾರ ಪಡೆದುಕೊಳ್ಳುವರು. ಭವಿಷ್ಯದಲ್ಲಿ ಎದುರಾಗುವ ಪ್ರತಿಯೊಂದು ವಿಷಯದಲ್ಲೂ ಒಳ್ಳೆಯ ಹಾಗೂ ಅದೃಷ್ಟದ ಫಲ ದೊರೆಯುವುದು ಎನ್ನುವ ಧಾರ್ಮಿಕ ನಂಬಿಕೆಯನ್ನು ಪಡೆದುಕೊಂಡಿದೆ.


ಜ್ಯೋತಿಷ್ಯದಲ್ಲಿ,
ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಮೂಢ ನಂಬಿಕೆಗಳಿವೆ. ಅವುಗಳಲ್ಲಿ ಕಣ್ಣು ಕುಣಿಯುವುದು ಅಥವಾ ಕಣ್ಣು ಹಾರುವ ಸಂಗತಿಯೂ ಒಂದು. ಇದು ಮನುಷ್ಯನು ತನ್ನ ದೇಹದಿಂದಲೇ ಭವಿಷ್ಯದ ಸಂಗತಿಯನ್ನು ತಿಳಿದುಕೊಳ್ಳುವ ಒಂದು ಪರಿ ಎಂದು ಹೇಳುತ್ತದೆ. ಈ ಪ್ರಕ್ರಿಯೆಯಿಂದ ಮನುಷ್ಯನು ಸುಲಭವಾಗಿ ಭವಿಷ್ಯವನ್ನು ಅಂದಾಜಿಸಿ, ಕ್ರಮವನ್ನು ಕೈಗೊಳ್ಳಲು ಸಹಾಯ ಮಾಡುವ ಒಂದು ಪರಿ. ಇದೊಂದು ಮನುಷ್ಯನಿಗೆ ಸಿಕ್ಕ ವರ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಮನದಿಂಗಿತ ಈಡೇರುವುದು
ಪುರುಷರಿಗೆ ಬಲಗಣ್ಣು ಹಾರಿದರೆ ಅದೃಷ್ಟದ ಸಂಗತಿ. ಬಲ ಗಣ್ಣಿನ ಮೇಲ್ಭಾಗದ ರೆಪ್ಪೆ ಕುಣಿದರೆ ಹೃದಯದಲ್ಲಿ ಬಚ್ಚಿಟ್ಟುಕೊಂಡ ಆಸೆಗಳೆಲ್ಲವೂ ಸುಲಭವಾಗಿ ನೆರವೇರುವುದು ಎಂದು ಸೂಚಿಸುತ್ತದೆ. ಅದೇ ಬಲಗಣ್ಣಿನ ಕೆಳ ಭಾಗದಲ್ಲಿ ಸೆಳೆತ ಅಥವಾ ಕುಣಿತವನ್ನು ಅನುಭವಿಸಿದರೆ ಅದು ಅಶುಭ ಎಂದು ನಂಬಲಾಗುತ್ತದೆ. ಬಲಗಣ್ಣಿನ ಕೆಳ ಭಾಗದಲ್ಲಿನ ರೆಪ್ಪೆ ಸಾಮಾನ್ಯವಾಗಿ ಸ್ಥಿರತೆಯನ್ನು ಹೊಂದಿರುತ್ತದೆ. ಅದು ಅನಿರೀಕ್ಷಿತವಾಗಿ ಕುಣಿತ ಅಥವಾ ಹಾರುವಿಕೆಗೆ ಒಳಗಾದರೆ ಆಗ ಭವಿಷ್ಯದಲ್ಲಿ ಯಾವುದೋ ಬಿಕ್ಕಟ್ಟು ಎದುರಾಗುವುದು ಎಂದು ತಿಳಿಯಬಹುದು.

ಅಪ ಪ್ರಚಾರ ಉಂಟಾಗುವುದು
ಮಹಿಳೆಯರಿಗೆ ಎಡಗಣ್ಣು ಹಾರಿದರೆ ಶುಭ ಸೂಚಕ. ಆದರೆ ಎಡ ಗಣ್ಣಿನ ರೆಪ್ಪೆಯ ಸಂಪೂರ್ಣ ಮೇಲ್ಭಾಗದಲ್ಲಿ ಹಾರುವಿಕೆ ಉಂಟಾದರೆ ಅದು ಅಶುಭ ಸಂಕೇತ. ಅದು ಯಾರಿಂದಲೋ ದ್ವೇಷವನ್ನು ಅನುಭವಿಸುವಿರಿ ಎನ್ನುವುದನ್ನು ತಿಳಿಸುತ್ತದೆ. ದ್ವೇಷವನ್ನು ಹೆಚ್ಚಿಸುವುದರ ಜೊತೆಗೆ ಸಮಸ್ಯೆಗಳು ಸಹ ದ್ವಿಗುಣವಾಗುತ್ತದೆ ಎನ್ನುವುದನ್ನು ಸೂಚಿಸುವುದು. ಎಡ ಗಣ್ಣಿನ ಕೆಳ ಭಾಗದಲ್ಲಿ ಹಾರುವಿಕೆ ಅಥವಾ ಸೆಳೆತವನ್ನು ಅನುಭವಿಸಿದರೆ ಅದು ನಿಮ್ಮ ಬಗ್ಗೆ ಗಾಸಿಪ್ ಅಥವಾ ಅಪಪ್ರಚಾರ ಉ0ಟಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ. ನಿಮ್ಮವರೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು ಎನ್ನುವ ಸಂದೇಶವನ್ನು ನೀಡುವುದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವೈಜ್ಞಾನಿಕ ಸಂಗತಿ
ಕಣ್ಣು ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದು. ಪರಿಸರದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಬದಲಾವಣೆಯು ಕಣ್ಣುಗಳ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ನಮ್ಮ ದೇಹ ಹಾಗೂ ಆರೋಗ್ಯದಲ್ಲಿ ಉಂಟಾಗುವ ತೊಂದರೆ ಅಥವಾ ನ್ಯೂನತೆಗಳಿಂದ ಅಂಗಗಳಲ್ಲಿ ಅನಾರೋಗ್ಯ ಮತ್ತು ಅಪಸಾಮ್ಯತೆಯನ್ನು ಕಾಣಿಸಕೊಳ್ಳುತ್ತದೆ. ಅಂತಹ ಒಂದು ಬದಲಾವಣೆಗಳಲ್ಲಿ ಕಣ್ಣು ಹಾರುವಿಕೆಯೂ ಒಂದು. ಕಣ್ಣಿಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಕಣ್ಣು ಕೆಂಪಾಗುವುದು, ನಿದ್ರೆ ಬಾರದೆ ಇರುವುದು, ಕಣ್ಣುಗಳ ಸುತ್ತ ಉಬ್ಬಿಕೊಳ್ಳುವುದು, ದೀರ್ಘ ಸಮಯಗಳ ಕಾಲ ಕಣ್ಣನ್ನು ತೆರೆದುಕೊಳ್ಳಲು ಕಷ್ಟವಾಗುವುದು, ಕಣ್ಣುಗಳ ಸೋಂಕು, ಅತಿಯಾದ ಮದ್ಯಪಾನ, ವಿಟಮಿನ್ ಕೊರತೆ, ದುಶ್ಚಟಗಳು, ನರ ದೌರ್ಬಲ್ಯ, ಭಾವನಾತ್ಮಕ ಅಸಮತೋಲನ ಸೇರಿದಂತೆ ಅನೇಕ ಸಮಸ್ಯೆಗಳು ಕಣ್ಣಿನ ಮೇಲೆ ಗಂಭೀರ ಫ್ರಭಾವವನ್ನು ಉಂಟುಮಾಡುತ್ತವೆ. ಅವು ಕಣ್ಣುಗಳ ಆರೋಗ್ಯ ಹಾಳುಮಾಡುವುದು. ಜೊತೆಗೆ ಆಗಾಗ ಅಪಸಾಮಾನ್ಯತೆ ಹಾಗೂ ಹಾರುವಿಕೆಗೆ ಉತ್ತೇಜನ ನೀಡುವುದು ಎನ್ನಲಾಗುತ್ತದೆ.

Vishwa News 24

Recent Posts

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ : ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ – vishwanews24

ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…

6 hours ago

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು – vishwanews24

ಭಟ್ಕಳ: ಬೈಕಿಗೆ  ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…

6 hours ago

ರಾಮಮಂದಿರದ ಹುಂಡಿ ಕಳವು ಪ್ರಕರಣ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಬೇಕು : ಸೊರಕೆ ಆಗ್ರಹ – vishwanews24

ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…

7 hours ago

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ – vishwanews24

ಉಡುಪಿ :  ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…

7 hours ago

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ – vishwanews24

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…

7 hours ago

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ – vishwanews24

ನವಿ ಮುಂಬೈ ವಿಮಾನ ನಿಲ್ದಾಣದ ಹೊಸ ಅಧ್ಯಾಯ :  ಮೊದಲ ಅಂತಾರಾಷ್ಟ್ರೀಯ ಸೇವೆಗೆ ಚಾಲನೆ ಮುಂಬೈ: ನವಿ ಮುಂಬೈ ಅಂತರರಾಷ್ಟ್ರೀಯ…

7 hours ago