Featured

ಕನ್ನಡ ಚಿತ್ರರಂಗ ಐಟಿ ದಾಳಿ, ತೆರಿಗೆ ಇಲಾಖೆ ಡಿಜಿ ಹೀಗೆ ಅಂದರು…?

ಬೆಂಗಳೂರು: ನಾವು ಎಲ್ಲಾ ಸಿನಿಮಾ ಮಂದಿಗೂ ಮನವಿ ಮಾಡುತ್ತೇವೆ. ಆದಷ್ಟೂ ಟ್ಯಾಕ್ಸ್ ಫೈಲ್ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಚ್ ಅಪರೇಷನ್ ಮುಂದುವರೆಯುತ್ತೆ ಅಂತಾ ಆದಾಯ ತೆರಿಗೆ ಇಲಾಖೆ ಡಿಜಿ ಬಿ.ಆರ್ ಬಾಲಕೃಷ್ಣನ್ ಹೇಳಿದ್ದಾರೆ.

ಸಿನಿಮಾ ನಿರ್ಮಾಪಕರು ಮತ್ತು ನಟರ ಮೇಲಿನ ದಾಳಿ ವಿಚಾರವಾಗಿ ಐಟಿ ಇಲಾಖೆಯ ಅನ್ವೇಷಣಾ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಚಿತ್ರವೂ ಶೇ.30% ರಿಂದ ಶೇ. 40% ರಷ್ಟು ನಗದಿನಲ್ಲಿ ವ್ಯವಹಾರವಾಗಿವೆ. ಫಿಲ್ಮ್ ಪ್ರೋಡಕ್ಷನ್ ಸಂಪೂರ್ಣ ನಗದಿನಲ್ಲಿ ನಡೆದಿದೆ. ಚಿತ್ರೀಕರಣ ಕೂಡಾ ನಗದು ವ್ಯವಹಾರದಲ್ಲೇ ನಡೆದಿದೆ. ಇನ್ನೂ ಥೀಯೆಟರ್​ನಲ್ಲಿ ಕಲೆಕ್ಟ್ ಆದ ಹಣವೂ ನಿರ್ಮಾಪಕರಿಗೆ ನಗದು ಮೂಲಕವೇ ಹೋಗಿದೆ. ಇನ್ನೂ ನಟರು ಕೂಡಾ ಸಂಭಾವನೆಯನ್ನು ನಗದು ರೂಪದಲ್ಲೇ ಪಡಯುತ್ತಾರೆ. ಅಲ್ಲದೇ ಓವರ್ ಸೇಸ್ ರೈಟ್ಸ್, ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಆಡಿಯೋ ರೈಟ್ಸ್ ಯಾವುದಕ್ಕೂ ನಿರ್ಮಾಪಕರು ಲೆಕ್ಕ ತೋರಿಸಿಲ್ಲ ಅಂತಾ ಹೇಳಿದರು. ಇದೇ ವೇಳೆ, ಸಿನಿಮಾ ಸಿಬ್ಬಂದಿ ಯಾರೂ ಸಹ ಆದಾಯ ತೋರಿಸುತ್ತಿಲ್ಲ. ಟ್ಯಾಕ್ಸ್ ಕಟ್ಟುವ ಬಗ್ಗೆ ಗಮನ ನೀಡಿಲ್ಲ. ಆಡಿಯೋ ಸೆಕ್ಷನ್, ಸಣ್ಣ ಕಲಾವಿದರು, ಪ್ರೋಡಕ್ಷನ್ ಟೀಂನವರು ಕೂಡಾ ಆದಾಯ ತೋರಿಸಿಲ್ಲ. ಅದಕ್ಕಾಗಿ ಫಿಲ್ಮ್ ಇಂಡಸ್ಟ್ರಿಯವರನ್ನು ಕರೆಯಿಸಿ ತಿಳುವಳಿಕೆ ನೀಡಿದ್ದೇವೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.

ಸಚಿವ ಡಿಕೆ ಶಿವಕುಮಾರ್ ಮೇಲೆನ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾವುದೇ ಕೇಸ್​ನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಆ ಪ್ರಕರಣದ ಎಲ್ಲಾ ಕೇಸ್​ಗಳು ಪ್ರಾಸಿಕ್ಯೂಷನ್ ನಡೆಯುತ್ತಿವೆ. ಮುಂಬರುವ ಲೋಕಸಭಾ ಎಲೆಕ್ಷನ್ ಸಮಯದಲ್ಲಿಯೂ ಐಟಿ ಗುಪ್ತಚರ ಇಲಾಖೆ ಕೆಲಸ ಮಾಡಲಿದೆ ಅಂತಾ ಡಿಜಿಐಟಿ ಬಾಲಕೃಷ್ಣ ಹೇಳಿದರು.

ಮೂರನೇ ಸ್ಥಾನದಲ್ಲಿ ಕರ್ನಾಟಕ ಮತ್ತು ಗೋವಾ ವಿಂಗ್​:
ಟ್ಯಾಕ್ಸ್ ಕಲೆಕ್ಟ್ ಮಾಡುವಲ್ಲಿ ದೇಶದಲ್ಲಿ ನಮ್ಮ ವಿಂಗ್ (ಕರ್ನಾಟಕ ಮತ್ತು ಗೋವಾ) ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಮುಂಬೈ ಹಾಗೂ ನವದೆಹಲಿ ಎರಡನೇ ಸ್ಥಾನದಲ್ಲಿದೆ. ಸಾಫ್ಟ್ ವೇರ್, ಆಟೋ ಮೊಬೈಲ್ಸ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ತೆರಿಗೆ ಸಂಗ್ರಹ ಮಾಡಲಾಗಿದೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.

Vishwa News 24

Recent Posts

ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ: ಮಂಜುನಾಥ್ ಭಂಡಾರಿ- vishwanews24

ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ : ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ: ಮಂಜುನಾಥ್ ಭಂಡಾರಿ ಉಡುಪಿ: ಪ್ರಶ್ನೆಪತ್ರಿಕೆ…

1 hour ago

ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ – vishwanews24

ಉಡುಪಿ: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ ಉಡುಪಿ: ಆದಿಉಡುಪಿಯ ಮಧ್ವನಗರದ ರಿಕ್ಷಾ ಚಾಲಕ ತನ್ನ ಮನೆಯಲ್ಲಿ ನೇಣು ಬಿಗಿದು…

2 hours ago

ಕೊಂಕಣ ರೈಲ್ವೆಯಲ್ಲಿ ಕಳ್ಳರ ಜಾಲ : ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣ  – vishwanews24

ಕೊಂಕಣ ರೈಲ್ವೆಯಲ್ಲಿ ಕಳ್ಳರ ಜಾಲ : ಮತ್ಸ್ಯಗಂಧ, ಮಂಗಳೂರು ಎಕ್ಸ್‌ಪ್ರೆಸ್‌ನಲ್ಲಿ ಸರಣಿ ಕಳ್ಳತನ ಹಾಗೂ ದರೋಡೆ ಪ್ರಕರಣ  ಉಡುಪಿ: ಮಂಗಳೂರಿನಿಂದ…

2 hours ago

ಆಳ್ವಾಸ್ ಪ್ರಗತಿ – 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ – vishwanews24

ಆಳ್ವಾಸ್ ಪ್ರಗತಿ - 2026 : ಆ.7 ಮತ್ತು 8ರಂದು ಬೃಹತ್ ಉದ್ಯೋಗ ಮೇಳ ಉಡುಪಿ: ದೇಶದ ಯುವಜನರ ಉದ್ಯೋಗ…

3 hours ago

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ – vishwanews24

ಯುವಕರ ಭವಿಷ್ಯಕ್ಕೆ ಅತಿ ಹೆಚ್ಚು ಹಾನಿ ಮಾಡಿರುವುದು ಪ್ರಧಾನಿ ಮೋದಿ : ರಾಹುಲ್‌ ಗಾಂಧಿ ಆರೋಪ ಹೊಸದಿಲ್ಲಿ: ಪ್ರಶ್ನೆಪತ್ರಿಕೆ ಸೋರಿಕೆ…

3 hours ago

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ – vishwanews24

ಪಡುಬಿದ್ರಿ: ಪಾನ್ ಸ್ಟಾಲ್‌ನಲ್ಲಿ ಗಾಂಜಾ ಮಾರಾಟ : ಆರೋಪಿ ಅರೆಸ್ಟ್ ಪಡುಬಿದ್ರಿ: ಪಾನ್ ಸ್ಟಾಲ್ ಅಂಗಡಿಯಲ್ಲೇ ಅಕ್ರಮವಾಗಿ ಗಾಂಜಾ ಮಾರಾಟ…

3 hours ago