ಬೆಂಗಳೂರು: ನಾವು ಎಲ್ಲಾ ಸಿನಿಮಾ ಮಂದಿಗೂ ಮನವಿ ಮಾಡುತ್ತೇವೆ. ಆದಷ್ಟೂ ಟ್ಯಾಕ್ಸ್ ಫೈಲ್ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಚ್ ಅಪರೇಷನ್ ಮುಂದುವರೆಯುತ್ತೆ ಅಂತಾ ಆದಾಯ ತೆರಿಗೆ ಇಲಾಖೆ ಡಿಜಿ ಬಿ.ಆರ್ ಬಾಲಕೃಷ್ಣನ್ ಹೇಳಿದ್ದಾರೆ.
ಸಿನಿಮಾ ನಿರ್ಮಾಪಕರು ಮತ್ತು ನಟರ ಮೇಲಿನ ದಾಳಿ ವಿಚಾರವಾಗಿ ಐಟಿ ಇಲಾಖೆಯ ಅನ್ವೇಷಣಾ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಚಿತ್ರವೂ ಶೇ.30% ರಿಂದ ಶೇ. 40% ರಷ್ಟು ನಗದಿನಲ್ಲಿ ವ್ಯವಹಾರವಾಗಿವೆ. ಫಿಲ್ಮ್ ಪ್ರೋಡಕ್ಷನ್ ಸಂಪೂರ್ಣ ನಗದಿನಲ್ಲಿ ನಡೆದಿದೆ. ಚಿತ್ರೀಕರಣ ಕೂಡಾ ನಗದು ವ್ಯವಹಾರದಲ್ಲೇ ನಡೆದಿದೆ. ಇನ್ನೂ ಥೀಯೆಟರ್ನಲ್ಲಿ ಕಲೆಕ್ಟ್ ಆದ ಹಣವೂ ನಿರ್ಮಾಪಕರಿಗೆ ನಗದು ಮೂಲಕವೇ ಹೋಗಿದೆ. ಇನ್ನೂ ನಟರು ಕೂಡಾ ಸಂಭಾವನೆಯನ್ನು ನಗದು ರೂಪದಲ್ಲೇ ಪಡಯುತ್ತಾರೆ. ಅಲ್ಲದೇ ಓವರ್ ಸೇಸ್ ರೈಟ್ಸ್, ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಆಡಿಯೋ ರೈಟ್ಸ್ ಯಾವುದಕ್ಕೂ ನಿರ್ಮಾಪಕರು ಲೆಕ್ಕ ತೋರಿಸಿಲ್ಲ ಅಂತಾ ಹೇಳಿದರು. ಇದೇ ವೇಳೆ, ಸಿನಿಮಾ ಸಿಬ್ಬಂದಿ ಯಾರೂ ಸಹ ಆದಾಯ ತೋರಿಸುತ್ತಿಲ್ಲ. ಟ್ಯಾಕ್ಸ್ ಕಟ್ಟುವ ಬಗ್ಗೆ ಗಮನ ನೀಡಿಲ್ಲ. ಆಡಿಯೋ ಸೆಕ್ಷನ್, ಸಣ್ಣ ಕಲಾವಿದರು, ಪ್ರೋಡಕ್ಷನ್ ಟೀಂನವರು ಕೂಡಾ ಆದಾಯ ತೋರಿಸಿಲ್ಲ. ಅದಕ್ಕಾಗಿ ಫಿಲ್ಮ್ ಇಂಡಸ್ಟ್ರಿಯವರನ್ನು ಕರೆಯಿಸಿ ತಿಳುವಳಿಕೆ ನೀಡಿದ್ದೇವೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.
ಸಚಿವ ಡಿಕೆ ಶಿವಕುಮಾರ್ ಮೇಲೆನ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾವುದೇ ಕೇಸ್ನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಆ ಪ್ರಕರಣದ ಎಲ್ಲಾ ಕೇಸ್ಗಳು ಪ್ರಾಸಿಕ್ಯೂಷನ್ ನಡೆಯುತ್ತಿವೆ. ಮುಂಬರುವ ಲೋಕಸಭಾ ಎಲೆಕ್ಷನ್ ಸಮಯದಲ್ಲಿಯೂ ಐಟಿ ಗುಪ್ತಚರ ಇಲಾಖೆ ಕೆಲಸ ಮಾಡಲಿದೆ ಅಂತಾ ಡಿಜಿಐಟಿ ಬಾಲಕೃಷ್ಣ ಹೇಳಿದರು.
ಮೂರನೇ ಸ್ಥಾನದಲ್ಲಿ ಕರ್ನಾಟಕ ಮತ್ತು ಗೋವಾ ವಿಂಗ್:
ಟ್ಯಾಕ್ಸ್ ಕಲೆಕ್ಟ್ ಮಾಡುವಲ್ಲಿ ದೇಶದಲ್ಲಿ ನಮ್ಮ ವಿಂಗ್ (ಕರ್ನಾಟಕ ಮತ್ತು ಗೋವಾ) ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಮುಂಬೈ ಹಾಗೂ ನವದೆಹಲಿ ಎರಡನೇ ಸ್ಥಾನದಲ್ಲಿದೆ. ಸಾಫ್ಟ್ ವೇರ್, ಆಟೋ ಮೊಬೈಲ್ಸ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ತೆರಿಗೆ ಸಂಗ್ರಹ ಮಾಡಲಾಗಿದೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…