ಕಾಪು: ಕೇರಳ ಮೂಲದ ಬಡ ಕುಟುಂಬ ಹಿನ್ನಲೆಯುಳ್ಳ ದ್ವಿತೀಯ ಬಿ.ಇ ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್ ವರೆಗೆ ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧೇಯೊದ್ದೇಶದಿಂದ ಆರಂಭಿಸಿದ ಸೈಕಲ್ ಯಾತ್ರೆ ಶನಿವಾರ ಕಾಪು ತಲುಪಿದೆ.
ಆತನ ತಂದೆ ಶ್ರೀಕುಮಾರ್ ಅವರ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್ ಭಾಗಕ್ಕೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್ ಅವರು ಈಗಾಗಲೇ 850 ಕಿಲೋಮೀಟರ್ ಕ್ರಮಿಸಿ ಆದಿತ್ಯವಾರದ ಸಂಜೆಯ ಸುಮಾರಿನಲ್ಲಿ ಮೂಳೂರು ಭಾಗದಲ್ಲಿ ಸ್ಥಳೀಯರು ಮಾಹಿತಿ ತಿಳಿದು ಸಂಜಯ್ ಅವರನ್ನು ಸ್ವಾಗತಿಸಿದರು.
ಡಿಸೆಂಬರ್ ನಲ್ಲಿ ಆರಂಭವಾದ ಈ ಯಾತ್ರೆ ಫೆಬ್ರವರಿಯ ಸುಮಾರಿಗೆ ಲಡಾಕ್ ಮುಟ್ಟುವ ಗುರಿಯನ್ನು ಇಟ್ಟುಕೊಂಡಿದ್ದು ಸುಮಾರು 3805 ಕಿಲೋಮೀಟರ್ ಉದ್ದದ ಈ ಪಯಣ ಇರಲಿದೆ.
ಮಹಾಲಕ್ಷ್ಮಿ ಕೋ-ಓಪರೇಟಿವ್ ಬ್ಯಾಂಕ್ ನ ಉಚ್ಚಿಲ ಶಾಖೆ ಉದ್ಘಾಟನೆ.-vishwanews24
ಸೈಕಲ್ ಪಯಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ” ಬಡತನ ರೇಖೆಗಿಂತ ಕೆಲಗೆ ಇರುವ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಸಾಧನೆ ಮಾಡುವ ಛಲ ಹಾಗೂ ಈ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆಂಬಲಿಸುವ ಸಲುವಾಗಿ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಎಂಬ ಉದ್ದೇಶದಿಂದ ಕನ್ಯಾಕುಮಾರಿಯಿಂದ ಲಡಾಕ್ ಗೆ ಸೈಕಲ್ ಪಯಣ ಮಾಡುತ್ತಿದ್ದು ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಬೆಂಬಲ ಇದ್ದು ಫೆಬ್ರವರಿ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಇಟ್ಟುಕೊಂಡಿದ್ದೇನೆ ಎಂದರು”
ಸಂಜಯ್ ಅವರ ಸೈಕಲ್ ಪಯಣ ಸ್ವಾಗತಿಸುವಲ್ಲಿ ಆಸ್ಟೋನ್ ಬಂಗೇರ,ಇಬ್ರಾಹಿಂ,ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…
ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…