ಉಡುಪಿ

ಕಾಪುವಿನಲ್ಲಿ ಜೆಡಿಎಸ್ ಖಾತೆ ತೆರೆಯುವುದು ಶತಸಿದ್ದ : ಮನ್ಸೂರ್ ಇಬ್ರಾಹಿಮ್

 

ಕಾಪು : ಹೌದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಜೆಡಿಎಸ್ ಹೊಸ ಇತಿಹಾಸವನ್ನೆ ಬರೆಯಲು ಹೊರಟಂತಿದೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ತನ್ನ ಚುನಾವಣಾ ಕಾರ್ಯವ್ಯಾಪ್ತಿಯನ್ನ ಮುಂದುವರೆಸಿ ಕ್ಷೇತ್ರದೆಲ್ಲೆಡೆ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್ ರ ಮಿಂಚಿನ ಸಂಚಾರ ಚುನಾವಣಾ ಮತ ಬೇಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ, ಕೇವಲ ಹತ್ತು ದಿನಗಳ ಅವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಹೊಸ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಅವರೆಲ್ಲರೂ ಪೀಲ್ಡ್ ಗೆ ಇಳಿದಿರುವುದು ಮತ್ತೊಂದು ವಿಶೇಷ.ಮತ್ತು ಕಾಪುವಿನ‌ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳ ,ಜಾತಿ ಧರ್ಮದ ಗೊಜಲಿನಲ್ಲಿ‌ ಜನರನ್ನ‌ ದಿಕ್ಕು ತಪ್ಪಿಸುತ್ತಿರುವುದರಿಂದ ಈ ಭಾರಿ ಹೊಸ ಶಾಸಕರನ್ನ ಕಾಣುವಲ್ಲಿ ಕ್ಷೇತ್ರದ ಜನ ಬಹುಪರಾಕ್ ಎನ್ನುತ್ತಿರುವುದು ಜೆಡಿಎಸ್ ಗೆ ವರದಾನವಾಗಿದೆ.

ಕಾಪುವಿನ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕಾಪುವನ್ನ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಿ ನೂತನ ತಾಲೂಕಿಗೆ ಹೊಸ ಆಯಾಮ‌ ದೊರಕಿಸುವ ನಿಟ್ಟಿನಲ್ಲಿ ಜನ ಜೆಡಿಎಸ್ ಬೆಂಬಲಿಸಬೇಕಾಗಿದೆ ಎಂಬುದು ಇಬ್ರಾಹಿಮ್ ಅಭಿಲಾಷೆ.ಇದುವರೆಗೆ ಆಡಳಿತ ನಡೆಸಿದ ಶಾಸಕರಿಗಿಂತ ವಿಭಿನ್ನ ರೀತಿಯಲ್ಲಿ ಆಡಳಿತ ನಡೆಸಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಯೋಜನೆಲ್ಲಿದ್ದಾರೆ ಈ ಭಾರಿಯ ಜೆಡಿಎಸ್ ಅಭ್ಯರ್ಥಿ ಮನ್ಸೂರ್ ಇಬ್ರಾಹಿಮ್.

ಸರ್ವಧರ್ಮ ಸಮನ್ವಯತೆ ಕಾಯ್ದ ಇಬ್ರಾಹಿಮ್.

ಚುನಾವಣೆ ನಿಲ್ಲುವ ಹಿಂದಿನಿಂದಲೂ ಇಬ್ರಾಹಿಮ್ ಸರ್ವಧರ್ಮ ಸಮನ್ವಯತೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ, ಎಲ್ಲರನ್ನು ಒಂದೆ ತಕ್ಕಡಿಯಲ್ಲಿ ತೂಗಿ ಸರ್ವರಿಗೂ ಗೌರವ ತೋರಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಎಲ್ಲರೂ ಒಂದಾಗಿ ಸಾಗಿ ದೇಶಕಟ್ಟಬೇಕು, ಬಡವರ ದೀನದಲಿತರ ಬಗ್ಗೆ ವಿಶೇಷ ಕಾಲಜಿ ವಹಿಸುತ್ತಿರುವ ಇಬ್ರಾಹಿಮ್ ಈ ಭಾರಿ ಗದ್ದುಗೆ ಏರಿದರೆ ಜನರ ಸಂಕಷ್ಟಗಳಿಗೆ ಮನೆ ಬಾಗಿಲಿಗೆ ಬಂದು ಪರಿಹಾರ ಒದಗಿಸುವಲ್ಲಿಯೂ ನಾವು ಶತಸಿದ್ಧ ಅನ್ನುವುದರಲ್ಲಿ ಅನುಮಾನವಿಲ್ಲ, ಚರ್ಚ್, ಮಸೀದಿ ದೇವಸ್ಥಾನವೆನ್ನದೆ ಎಲ್ಲರೊಂದಿಗು ಬೆರೆಯುತ್ತಿದ್ದು ಜನರ ಸಂಕಷ್ಟಗಳಿಗೆ ನೇರವಾಗಿ ಬಂದು ಪರಿಹಾರ ಒದಗಿಸಿದ ಉದಾಹರಣೆಗಳು ಅದೆಷ್ಟು ಲೆಕ್ಕಕ್ಕೆ ಸಿಗದಷ್ಟು ಅನ್ನುತ್ತಾರೆ ಇಬ್ರಾಹಿಮ್ ಆಪ್ತರು.

ಇಬ್ರಾಹಿಮ್ ಕೈ ಹಿಡಿಯುವರೇ ಮುಸ್ಲಿಂ ಭಾಂಧವರು

ಕಾಪು ಕ್ಷೇತ್ರದಲ್ಲಿ ಇದುವರೆಗೆ ಮುಸ್ಲಿಂ ಧರ್ಮದ ನಾಯಕ‌ ಶಾಸಕನಾದ ಇತಿಹಾಸವಿಲ್ಲ . ಎರಡೂ ರಾಷ್ಟ್ರೀಯ ಪಕ್ಷಗಳು ಬಹುಸಂಖ್ಯಾತ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ , ಆದರೇ ಜೆಡಿಎಸ್ ಈ ಭಾರಿ ಮುಸ್ಲಿಂ ಸಮಾಜದ ನಾಯಕನಿಗೆ ಮಣೆ ಹಾಕಿ ಅಲ್ಪಸಂಖ್ಯಾತರಿಗೂ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಈ ಭಾರಿ ಚುನಾವಣಾ ರಂಗ ಮತ್ತಷ್ಟು ಕಾವು ಪಡೆದುಕೊಂಡಿದೆ.

“ನನಗೆ ಜಾತಿ ಮತ ಭೇದವಿಲ್ಲ, ಸರ್ವರೂ ಒಂದೆ ಸೂರಿನಡಿಯಲ್ಲಿ ಬಾಳಬೇಕು ಅದು ಸಂವಿಧಾನ,ಶಾಸಕನಾದವರು ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುವುದು ಅವರ ಕರ್ತವ್ಯ ‌ಮತ್ತು ಧರ್ಮ ಹೊರತು ಪ್ರಚಾರವಲ್ಲ.ಜನರನ್ನು ಜಾತಿ ಧರ್ಮದಿಂದ ಒಡೆದು ಇಭ್ಭಾಗ ಮಾಡುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡುತ್ತಿದೆ ಇದರಿಂದ ಜನ ಬೇಸತ್ತು ಹೋಗಿದ್ದಾರೆ ಹಾಗಾಗಿ ಈ ಸಲ‌ ಒಂದು ಬಾರಿ ಜೆಡಿಎಸ್ ಗೆ ಅವಕಾಶ ನೀಡುತ್ತಾರೆಂಬ ಭರವಸೆ ಇದೆ. ಜನರ ಮನೆಬಾಗಿಲಿಗೆ ಸೌಕರ್ಯ ಮುಟ್ಟಿಸುವ ಪ್ರಯತ್ನ ಮಾಡಬೇಕಿದೆಂಬುದು ನನ್ನ‌ ಆಶಯ ಮತ್ತು ಜನ ಈ ಭಾರಿ ಜೆಡಿಎಸ್ ಗೆ ಬಹುಪರಾಕ್ ಎನ್ನುತ್ತಿರುವುದರಿಂದ ಕಾಪುವಿನಲ್ಲಿ ಖಾತೆ ತೆರೆಯುವುದು ಶತ ಸಿದ್ಧ “.

                      ಮನ್ಸೂರ್ ಇಬ್ರಾಹಿಮ್ 

                  ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

(ಕಟಪಾಡಿ ಚುನಾವಣಾ ಪ್ರಚಾರ ಸಮಯದಲ್ಲಿ ನೀಡಿದ ಹೇಳಿಕೆ)

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

6 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

6 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

6 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

6 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

6 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

7 hours ago