Featured

ಕಾಪುವಿನ ಕಡಲ ಕಿನಾರೆ-ಶ್ರೀ ರವಿಶಂಕರ ಗುರೂಜಿಯ ಆನಂದ ಲಹರಿಯಲ್ಲಿ ತೇಲಿದ ಭಕ್ತಜನಸಾಗರ : vishwanews24

ಕಾಪುವಿನ ಕಡಲ ಕಿನಾರೆ-ಶ್ರೀ ರವಿಶಂಕರ ಗುರೂಜಿಯ ಆನಂದ ಲಹರಿಯಲ್ಲಿ ತೇಲಿದ ಭಕ್ತಜನಸಾಗರ …

ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಿ …

ಕಾಪು: ಇಲ್ಲಿನ ಕಡಲ‌ಕಿನಾರೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹೋದರರು ಹಾಗೂ ಆರ್ಟ್ ಆಫ್ ಲೀವಿಂಗ್ ಬಳಗದ ವತಿಯಿಂದ ಆಯೋಜಿಸಲಾದ ಆನಂದ ಲಹರಿ ಕಾರ್ಯಕ್ರಮ ಅದ್ಧೂರಿಯಾಗಿ ಭಕ್ತಿಭಾವದಿಂದ ನಡೆಯಿತು.

ಮೈಸೂರು ಪೇಟ ತೊಡಿಸಿ-ಮಲ್ಲಿಗೆ ಹಾರದಿಂದ ಸ್ವಾಗತಿಸಿ ಸನ್ಮಾನಿಸಿ ಸ್ವಾಗತ ಮಾತುಗಳನ್ನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ “ನನ್ನ ಕ್ಷೇತ್ರದಲ್ಲಿ ಗುರೂಜಿಯ ಸತ್ಸಂಗ ನಡೆಸಿದ್ದು ಜೀವನದ ಸಿರಿಭಾಗ್ಯ,ಸುಮಾರು25-30 ವರ್ಷಗಳ ನಿರಂತರ ನಿಕಟ ನಂಟು ನಮ್ಮ ಸಹೋದರರಿಗೆ ಇದೆ ಗುರೂಜಿಯ ಜತೆಗೆ ಮಾತೃ ಪಿತೃ ಭಾವದ ಬಾಂಧವ್ಯ ಸಿಗುತ್ತಿದೆ ಹಾಗೂ ಈ ದಿನ ಕಾಪುವಿನ ಚರಿತ್ರೆಯಲ್ಲಿ ಇತಿಹಾಸವಾಗುತ್ತೆಂದರು.

ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿ ಮೊದಲ ಸುತ್ತಿನಲ್ಲಿ ದೇಶದ ಪ್ರವಾಸೋದ್ಯಮ-ಆಯುರ್ವೇದ- ವೈವಿಧ್ಯಮಯ ಆಹಾರ ಖಾಧ್ಯ- ಒಡವೆ ಆಭರಣ- ವಸ್ತ್ರಾಲಂಕಾರ-ಜ್ಞಾನದ ಕುರಿತಾಗಿ ಸವಿಸ್ತಾರವಾದ ಸತ್ಸಂಗ ನಡೆಸಿದರು.

ಮಾನವನ ಶರೀರಕ್ಕೆ ಸಾವಿದ್ದರೂ ಚೈತನ್ಯಕ್ಕೆ ಸಾವಿಲ್ಲ ಅದೂ ನಿರಂತರವಾಗಿ ಹರಿಯುವ ನೀರು ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಬೇಕು ಆ ಸಮಯದಲ್ಲಿ ನಿಜವಾದ ಜೀವನ ಸಿಗುತ್ತದೆಂದರು.

ಈ ಸತ್ಸಂಗವೂ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ ಬಂದಿರುವ ಎಲ್ಲಾ ಭಕ್ತರ ಕಷ್ಟವನ್ನು ಇಲ್ಲಿಯೇ ಬಿಟ್ಟುಹೋಗಿ ಸಮುದ್ರದೊಡಲು ಸೇರಿಸಿಕೊಂಡು ಹೊಸ ಅಲೆಯ ಮುಖೇನ ನವಚೇತನ ಜೀವನ ಸಿಗುತ್ತದೆಂದರು.

ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ,ಬಂಜರ ಪ್ರಕಾಶ್ ಶೆಟ್ಟಿ,ವಾಸುದೇವ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ,ಜಯಕರ ಹೆಗ್ಡೆ,ಡಾ ಚಂದ್ರಶೇಖರ್,ಅಜಯ್ ಪಿ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

7 minutes ago

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

2 hours ago

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

2 hours ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

2 hours ago

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ – vishwanews24

ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…

2 hours ago

ಉಡುಪಿ:  ಆ.14 ರಂದು ನೇರ ಸಂದರ್ಶನ – vishwanews24

ಉಡುಪಿ:  ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…

3 hours ago