ಕಾಪು: ಇಲ್ಲಿನ ಕಡಲಕಿನಾರೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹೋದರರು ಹಾಗೂ ಆರ್ಟ್ ಆಫ್ ಲೀವಿಂಗ್ ಬಳಗದ ವತಿಯಿಂದ ಆಯೋಜಿಸಲಾದ ಆನಂದ ಲಹರಿ ಕಾರ್ಯಕ್ರಮ ಅದ್ಧೂರಿಯಾಗಿ ಭಕ್ತಿಭಾವದಿಂದ ನಡೆಯಿತು.
ಮೈಸೂರು ಪೇಟ ತೊಡಿಸಿ-ಮಲ್ಲಿಗೆ ಹಾರದಿಂದ ಸ್ವಾಗತಿಸಿ ಸನ್ಮಾನಿಸಿ ಸ್ವಾಗತ ಮಾತುಗಳನ್ನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ “ನನ್ನ ಕ್ಷೇತ್ರದಲ್ಲಿ ಗುರೂಜಿಯ ಸತ್ಸಂಗ ನಡೆಸಿದ್ದು ಜೀವನದ ಸಿರಿಭಾಗ್ಯ,ಸುಮಾರು25-30 ವರ್ಷಗಳ ನಿರಂತರ ನಿಕಟ ನಂಟು ನಮ್ಮ ಸಹೋದರರಿಗೆ ಇದೆ ಗುರೂಜಿಯ ಜತೆಗೆ ಮಾತೃ ಪಿತೃ ಭಾವದ ಬಾಂಧವ್ಯ ಸಿಗುತ್ತಿದೆ ಹಾಗೂ ಈ ದಿನ ಕಾಪುವಿನ ಚರಿತ್ರೆಯಲ್ಲಿ ಇತಿಹಾಸವಾಗುತ್ತೆಂದರು.
ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿ ಮೊದಲ ಸುತ್ತಿನಲ್ಲಿ ದೇಶದ ಪ್ರವಾಸೋದ್ಯಮ-ಆಯುರ್ವೇದ- ವೈವಿಧ್ಯಮಯ ಆಹಾರ ಖಾಧ್ಯ- ಒಡವೆ ಆಭರಣ- ವಸ್ತ್ರಾಲಂಕಾರ-ಜ್ಞಾನದ ಕುರಿತಾಗಿ ಸವಿಸ್ತಾರವಾದ ಸತ್ಸಂಗ ನಡೆಸಿದರು.
ಮಾನವನ ಶರೀರಕ್ಕೆ ಸಾವಿದ್ದರೂ ಚೈತನ್ಯಕ್ಕೆ ಸಾವಿಲ್ಲ ಅದೂ ನಿರಂತರವಾಗಿ ಹರಿಯುವ ನೀರು ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಬೇಕು ಆ ಸಮಯದಲ್ಲಿ ನಿಜವಾದ ಜೀವನ ಸಿಗುತ್ತದೆಂದರು.
ಈ ಸತ್ಸಂಗವೂ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ ಬಂದಿರುವ ಎಲ್ಲಾ ಭಕ್ತರ ಕಷ್ಟವನ್ನು ಇಲ್ಲಿಯೇ ಬಿಟ್ಟುಹೋಗಿ ಸಮುದ್ರದೊಡಲು ಸೇರಿಸಿಕೊಂಡು ಹೊಸ ಅಲೆಯ ಮುಖೇನ ನವಚೇತನ ಜೀವನ ಸಿಗುತ್ತದೆಂದರು.
ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ,ಬಂಜರ ಪ್ರಕಾಶ್ ಶೆಟ್ಟಿ,ವಾಸುದೇವ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ,ಜಯಕರ ಹೆಗ್ಡೆ,ಡಾ ಚಂದ್ರಶೇಖರ್,ಅಜಯ್ ಪಿ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…