Featured

ಕಾಪುವಿನ ಕಡಲ ಕಿನಾರೆ-ಶ್ರೀ ರವಿಶಂಕರ ಗುರೂಜಿಯ ಆನಂದ ಲಹರಿಯಲ್ಲಿ ತೇಲಿದ ಭಕ್ತಜನಸಾಗರ : vishwanews24

ಕಾಪುವಿನ ಕಡಲ ಕಿನಾರೆ-ಶ್ರೀ ರವಿಶಂಕರ ಗುರೂಜಿಯ ಆನಂದ ಲಹರಿಯಲ್ಲಿ ತೇಲಿದ ಭಕ್ತಜನಸಾಗರ …

ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಿ …

ಕಾಪು: ಇಲ್ಲಿನ ಕಡಲ‌ಕಿನಾರೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹೋದರರು ಹಾಗೂ ಆರ್ಟ್ ಆಫ್ ಲೀವಿಂಗ್ ಬಳಗದ ವತಿಯಿಂದ ಆಯೋಜಿಸಲಾದ ಆನಂದ ಲಹರಿ ಕಾರ್ಯಕ್ರಮ ಅದ್ಧೂರಿಯಾಗಿ ಭಕ್ತಿಭಾವದಿಂದ ನಡೆಯಿತು.

ಮೈಸೂರು ಪೇಟ ತೊಡಿಸಿ-ಮಲ್ಲಿಗೆ ಹಾರದಿಂದ ಸ್ವಾಗತಿಸಿ ಸನ್ಮಾನಿಸಿ ಸ್ವಾಗತ ಮಾತುಗಳನ್ನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ “ನನ್ನ ಕ್ಷೇತ್ರದಲ್ಲಿ ಗುರೂಜಿಯ ಸತ್ಸಂಗ ನಡೆಸಿದ್ದು ಜೀವನದ ಸಿರಿಭಾಗ್ಯ,ಸುಮಾರು25-30 ವರ್ಷಗಳ ನಿರಂತರ ನಿಕಟ ನಂಟು ನಮ್ಮ ಸಹೋದರರಿಗೆ ಇದೆ ಗುರೂಜಿಯ ಜತೆಗೆ ಮಾತೃ ಪಿತೃ ಭಾವದ ಬಾಂಧವ್ಯ ಸಿಗುತ್ತಿದೆ ಹಾಗೂ ಈ ದಿನ ಕಾಪುವಿನ ಚರಿತ್ರೆಯಲ್ಲಿ ಇತಿಹಾಸವಾಗುತ್ತೆಂದರು.

ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿ ಮೊದಲ ಸುತ್ತಿನಲ್ಲಿ ದೇಶದ ಪ್ರವಾಸೋದ್ಯಮ-ಆಯುರ್ವೇದ- ವೈವಿಧ್ಯಮಯ ಆಹಾರ ಖಾಧ್ಯ- ಒಡವೆ ಆಭರಣ- ವಸ್ತ್ರಾಲಂಕಾರ-ಜ್ಞಾನದ ಕುರಿತಾಗಿ ಸವಿಸ್ತಾರವಾದ ಸತ್ಸಂಗ ನಡೆಸಿದರು.

ಮಾನವನ ಶರೀರಕ್ಕೆ ಸಾವಿದ್ದರೂ ಚೈತನ್ಯಕ್ಕೆ ಸಾವಿಲ್ಲ ಅದೂ ನಿರಂತರವಾಗಿ ಹರಿಯುವ ನೀರು ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಬೇಕು ಆ ಸಮಯದಲ್ಲಿ ನಿಜವಾದ ಜೀವನ ಸಿಗುತ್ತದೆಂದರು.

ಈ ಸತ್ಸಂಗವೂ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ ಬಂದಿರುವ ಎಲ್ಲಾ ಭಕ್ತರ ಕಷ್ಟವನ್ನು ಇಲ್ಲಿಯೇ ಬಿಟ್ಟುಹೋಗಿ ಸಮುದ್ರದೊಡಲು ಸೇರಿಸಿಕೊಂಡು ಹೊಸ ಅಲೆಯ ಮುಖೇನ ನವಚೇತನ ಜೀವನ ಸಿಗುತ್ತದೆಂದರು.

ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ,ಬಂಜರ ಪ್ರಕಾಶ್ ಶೆಟ್ಟಿ,ವಾಸುದೇವ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ,ಜಯಕರ ಹೆಗ್ಡೆ,ಡಾ ಚಂದ್ರಶೇಖರ್,ಅಜಯ್ ಪಿ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

18 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

21 hours ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

21 hours ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

21 hours ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

21 hours ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

22 hours ago