ಕಾಪುವಿನ ಸಮಾವೇಶದ ಜನಸ್ತೋಮ ಕಂಡು ಅಸಮಾಧಾನಗೊಂಡರೆ ಬಿಎಸ್ ವೈ ಮತ್ತು ಸಿಎಂ..?
ಅಧಿಕೃತ ಮಾಹಿತಿಯ ಪ್ರಕಾರ ಸಮಾವೇಶಕ್ಕೆ ಸೇರಿದ್ದು ಎರಡರಿಂದ-ಎರಡೂವರೆ ಸಾವಿರ ಮಂದಿ..!!
ಶಾಸಕ ಲಾಲಾಜಿ ಮೆಂಡನ್ ನಾಯಕತ್ವ ಸಮಾವೇಶ ಪ್ಲಾಪ್ ಶೋ ಕಂಡಿತೆ….??
Vishwanews24 ಪೊಲಿಟಿಕಲ್ ಗ್ರೌಂಡ್ ರಿಪೋರ್ಟ್
ಕಾಪು: ನವೆಂಬರ್ 7ರಂದು ಸೋಮವಾರ ಕಾಪುವಿನ ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಜನ ಸಂಕಲ್ಪ ಸಮಾವೇಶದಲ್ಲಿ ಸೇರಿರುವ ಜನಸ್ತೋಮವನ್ನು ಕಂಡು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಸಮಾಧಾನ ಗೊಂಡ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಜನಸಂಕಲ್ಪ ಸಮಾವೇಶದ ಕರಾವಳಿಯಲ್ಲಿ ಉದ್ಘಾಟನೆ ಎಂಬಂತೆ ಕಾಪುವಿನಲ್ಲಿ ಪ್ರಪ್ರಥಮವಾಗಿ ಈ ಯಾತ್ರೆಯನ್ನ ಆರಂಭಿಸಲಾಗಿದೆ ಆದರೆ ಸಮಾವೇಶದಲ್ಲಿ ಅಧಿಕೃತ ಇಲಾಖೆಯ ಮಾಹಿತಿಯ ಪ್ರಕಾರ ಕೇವಲ 2 ರಿಂದ ಎರಡೂವರೆ ಸಾವಿರ ಜನ ಸೇರಿದ್ದು ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿಯ ಅಸಮಾಧಾನ ಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ನಾಯಕತ್ವದಲ್ಲಿ ನಡೆದ ಸಮಾವೇಶ ಪ್ಲಾಪ್ ಶೋ ಕಂಡಿದೆ ಎನ್ನಲಾಗುತ್ತಿದೆ.
ಕಾಪುವಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಯಾವುದೇ ಕಾಪುವಿಗೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡದಿರುವುದು ಕೂಡ ಒಂದು ರೀತಿಯಲ್ಲಿ ಇದೇ ಕಾರಣ ಎನ್ನಲಾಗುತ್ತಿದೆ.
ಈಗಾಗಲೇ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜನಬೆಂಬಲ ಕಳೆದುಕೊಂಡಿರುವ ಲಾಲಾಜಿ ಆರ್ ಮೆಂಡನ್ ಅವರು ಈ ಸಮಾವೇಶ ನಡೆಸುವ ಮುಖಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬ ಕನಸನ್ನ ಕಂಡಿದ್ದರು ಆದರೆ ಹೇಳಿಕೆ ಕೊಟ್ಟಷ್ಟು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿಲ್ಲ.
ಈ ಹಿಂದಿನ ದಿನಗಳಲ್ಲಿ ಕಾಪುವಿನಲ್ಲಿ ಬಿಎಸ್ ವೈ ಉಪಸ್ಥಿತಿಯ ಯಾವುದೇ ಭಾಜಪದ ಸಮಾವೇಶ ನಡೆದರೂ ಕೂಡ 15000 (ಹದಿನೈದು ಸಾವಿರ) ಕ್ಕೂ ಮಿಗಿಲಾದ ಕಾರ್ಯಕರ್ತರು ಭಾಗಿಯಾದ ಐತಿಹ್ಯ ಇದೆ ಆದರೆ ಈ ಸಲದ ಚುನಾವಣೆಯ ಪ್ರಚಾರದ ಮೊದಲ ಸಮಾವೇಶವೇ ಕಾಪುವಿನಲ್ಲಿ ಫ್ಲಾಪ್ ಶೋ ಕಂಡಿದೆ.
ಪಕ್ಷದ ಹಿರಿಯರಾದ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಆಗಮಿಸುವ ಈ ಸಮಾವೇಶದಲ್ಲಿ ಕಡಿಮೆ ಎಂದರು 10,000 ಮಂದಿ ಸೇರುವ ಸಮಾವೇಶ ಆಗಬೇಕಾಗಿತ್ತು ಆದರೆ ಇಂದು ನಡೆದ ಈ ಯಾತ್ರೆಯ ಸಮಾವೇಶದಲ್ಲಿ ಕೇವಲ 2 ರಿಂದ 2500 ಸಾವಿರ ಮಂದಿ ಮಾತ್ರ ಭಾಗವಹಿಸಿದ್ದು ವಿಪರ್ಯಾಸವಾಗಿದೆ.
ಲಾಲಾಜಿ ಆರ್ ಮೆಂಡನ್ ರವರ ನಾಯಕತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಜನಬೆಂಬಲ ಕಳೆದುಕೊಂಡಿರುವ ಬಗ್ಗೆ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.
ಜೈಕಾರ ಚಪ್ಪಾಳೆ ಹಾಕುವ ಉತ್ಸಾಹ ಕೂಡ ಕಳೆದುಕೊಂಡಂತೆ ಇತ್ತು ಇಂದಿನ ಜನ ಸಂಪರ್ಕ ಕಾಪುವಿನ ಜನಸಂಕಲ್ಪ ಸಮಾವೇಶ.
ಪೊಲಿಟಿಕಲ್ ಬ್ಯರೋ ಗ್ರೌಂಡ್ ರಿಪೋರ್ಟ್ ವಿಶ್ವನ್ಯೂಸ್24
ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…
ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…