Featured

ಕಾಪು:  ನನ್ನ ಜೀವನ ಪೆನ್ಷನ್ ಹಣದಲ್ಲಿ ನಡೆಯುತ್ತಿದೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಪುರಾವೆ ಸಮೇತ ಕಾಪು ಶಾಸಕರು ಚರ್ಚೆಗೆ ಬರಲಿ :  ವಿನಯ್ ಕುಮಾರ್ ಸೊರಕೆ – vishwanews24

ಕಾಪು:  ನನ್ನ ಜೀವನ ಪೆನ್ಷನ್ ಹಣದಲ್ಲಿ ನಡೆಯುತ್ತಿದೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಪುರಾವೆ ಸಮೇತ ಕಾಪು ಶಾಸಕರು ಚರ್ಚೆಗೆ ಬರಲಿ :  ವಿನಯ್ ಕುಮಾರ್ ಸೊರಕೆ

ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಮಾತಿನ ಜಟಾಪಟಿ ತಾರಕಕ್ಕೇರಿದ್ದು ಕೇಸರಿನ ಎರಚಾಟ ಜೋರಾಗಿ ನಡೆಯುತ್ತಿದೆ ಕಳೆದ ವಾರದ ಹಿಂದೆ ಕಾಪುವಿನ ಶಾಸಕ ಸುರೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ರಾಜಕಾರಣ ಎಂಬುದು ಒಂದು ವ್ಯವಹಾರವಾಗಿದೆ ಅದನ್ನು ಬಿಟ್ಟರೆ ಜೀವನಕ್ಕೆ ಬೇರೆನಿದೆ ಎಂದು ಪ್ರಶ್ನೆ ಮಾಡಿದ್ದರು, ಮಾತ್ರವಲ್ಲದೆ ಅವರಿಗೆ ಈಗ ಬಂದಿರುವ ಇಷ್ಟೊಂದು ಆಸ್ತಿಗಳು ಎಲ್ಲಿಂದ ಎಂದು ಪ್ರಶ್ನೆ ಮಾಡಿದ ಪರಿಣಾಮವಾಗಿ ಇಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

ಅವರು ಮಾತನಾಡಿ ನಮ್ಮದು ಭೂಮಾಲಕರ ಕುಟುಂಬ ಕೃಷಿ ನಮಗೆ ಮೂಲ ಆಧಾರ ಸ್ತಂಭವಾಗಿದೆ ಮತ್ತು ನಾನು ಮಾಜಿ ಶಾಸಕ ಹಾಗೂ ಮಾಜಿ ಸಂಸದ ಆದರಿಂದ ನನಗೆ ೮೦,೦೦೦ ಪೆನ್ಷನ್ ಹಣ ಬರುತ್ತದೆ ಅದರ ಜೊತೆಗೆ ಸ್ವಂತದ್ದು ಎಂಬುದು ಒಂದು ಉಡುಪಿಯಲ್ಲಿ ಮನೆ ಇದೆ ಇದನ್ನು ಹೊರತುಪಡಿಸಿ ಏನಾದರೂ ಆಸ್ತಿ ಮಾಡಿದ್ದರೆ ಶಾಸಕ ಸುರೇಶ್ ಶೆಟ್ಟಿ ಅವರು ದಾಖಲೆ ಸಮೇತವಾಗಿ ಚರ್ಚೆಗೆ ಬರಲಿ ನಾನು ಕೂಡ ಬಹಿರಂಗವಾಗಿ ಸಿದ್ಧನಾಗಿದ್ದೇನೆ ಎಂದರು.

ಕಾಪುವಿನ ಅಭಿವೃದ್ಧಿಯ ದೃಷ್ಟಿಯಲ್ಲಿ ನಾನು ಮಾತನಾಡುತ್ತಿದ್ದೇನೆ ಹೊರತು ವೈಯಕ್ತಿಕವಾಗಿ ಮಾತನಾಡುವ ಅಗತ್ಯವಿಲ್ಲ ಆದರೆ ಶಾಸಕರು ಮಾತ್ರ ತನ್ನ ಶಾಸಕತನದ ಪ್ರಭಾವವನ್ನು ಬಳಸಿಕೊಂಡು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸಿ ಆರ್ ಜೆಡ್ ಫೈಯರ್ ಸೇರಿದಂತೆ ಪ್ರಮುಖ ದಾಖಲೆ ಇಲ್ಲದೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆಂದು ಆರೋಪ ಮಾಡಿದರು.

ಕಾಪುವಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ವ್ಯಯಿಸಿದ್ದು ಕಾಪು ಪುರಸಭಾ ಕಟ್ಟಡ ಕಾಪುವಿನ ತಾಲೂಕು ಆಡಳಿತ ಕಟ್ಟಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಸೇರಿದಂತೆ ೧೦ ಹಲವಾರು ಯೋಜನೆಯನ್ನು ಕಾಪುವಿಗೆ ತಂದಿದ್ದೇನೆ ಮಾತ್ರವಲ್ಲದೆ ಕಾಪು ಶಾಸಕ ಪ್ರಶ್ನೆ ಮಾಡುವಂತೆ ೫೦೦ ಮನೆಯ ನಿರ್ಮಾಣಕ್ಕಾಗಿ ಈಗಾಗಲೇ ನನ್ನ ಅವಧಿಯಲ್ಲಿ ಕಾಪು ಬಿಕ್ರಿ ಗುತ್ತು ಸಮೀಪದ ಜಾಗವನ್ನು ನಿಗದಿಪಡಿಸಿದ್ದು ಟೆಂಡರ್ ಪ್ರಕ್ರಿಯೆ ಆಗುವ ಮುನ್ನವೇ ನನ್ನ ಅವಧಿ ಮುಗಿದಿತ್ತು ಮಾನ್ಯ ಶಾಸಕರಾದ ಸುರೇಶ್ ಶೆಟ್ಟಿ ಅವರು ಇದನ್ನು ಮುಂದುವರಿಸಿಕೊ0ಡು ಹೋಗಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಕ್ಷೇತ್ರದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ,ಕೇವಲ ೩೦೦ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಸಚಿವರ ಬಳಿ ಮತ್ತು ಟೇಬಲ್ ಟು ಟೇಬಲ್ ತಿರುಗಿದರೆ ಮಾತ್ರ ಹಣ ಸ್ಯಾಂಕ್ಷನ್ ಆಗುತ್ತದೆ ಎಂಬುದನ್ನ ಶಾಸಕರು ಅರಿತುಕೊಳ್ಳಬೇಕು ಎಂದರು.

ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾಗಿದೆ. ಇವತ್ತು ನಾನು ಸೋತಿರಬಹುದು ಅವರ ಗೆದ್ದಿರಬಹುದು ಮುಂದಿನ ದಿನ ಹೇಗೆ ಎಂಬುದು ಮತದಾರರಿಗೆ ಮಾತ್ರ ಗೊತ್ತಿದೆ ನನ್ನ ಜೀವಮಾನವಿಡಿ ರಾಜಕೀಯದಲ್ಲಿ ಜನಸೇವೆ ಮಾಡಿದ್ದೇನೆ ಹೊರತು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿಲ್ಲ ಎಂದರು ಕಾಪು ಶಾಸಕ ಇನ್ನಾದರೂ ಗೂಬೆ ಕೂರಿಸುವುದನ್ನು ಬಿಟ್ಟು ಜನ ಪರವಾದ ಕೆಲಸವನ್ನ ಮಾಡಲಿ ನನ್ನ ಬೆಂಬಲ ಸಂಪೂರ್ಣ ಅವರಿಗೆ ಇದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ಚಂದ್ರ ಸುವರ್ಣ ಅಡ್ವೆ,ಜಿತೇಂದ್ರ ಪುಟಾರ್ಡೋ,ಶಾಂತಲತ ಶೆಟ್ಟಿ ಸೇರಿದಂತೆ ಪ್ರಮುಖರು ಇದ್ದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago