ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಮಾತಿನ ಜಟಾಪಟಿ ತಾರಕಕ್ಕೇರಿದ್ದು ಕೇಸರಿನ ಎರಚಾಟ ಜೋರಾಗಿ ನಡೆಯುತ್ತಿದೆ ಕಳೆದ ವಾರದ ಹಿಂದೆ ಕಾಪುವಿನ ಶಾಸಕ ಸುರೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ರಾಜಕಾರಣ ಎಂಬುದು ಒಂದು ವ್ಯವಹಾರವಾಗಿದೆ ಅದನ್ನು ಬಿಟ್ಟರೆ ಜೀವನಕ್ಕೆ ಬೇರೆನಿದೆ ಎಂದು ಪ್ರಶ್ನೆ ಮಾಡಿದ್ದರು, ಮಾತ್ರವಲ್ಲದೆ ಅವರಿಗೆ ಈಗ ಬಂದಿರುವ ಇಷ್ಟೊಂದು ಆಸ್ತಿಗಳು ಎಲ್ಲಿಂದ ಎಂದು ಪ್ರಶ್ನೆ ಮಾಡಿದ ಪರಿಣಾಮವಾಗಿ ಇಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.
ಅವರು ಮಾತನಾಡಿ ನಮ್ಮದು ಭೂಮಾಲಕರ ಕುಟುಂಬ ಕೃಷಿ ನಮಗೆ ಮೂಲ ಆಧಾರ ಸ್ತಂಭವಾಗಿದೆ ಮತ್ತು ನಾನು ಮಾಜಿ ಶಾಸಕ ಹಾಗೂ ಮಾಜಿ ಸಂಸದ ಆದರಿಂದ ನನಗೆ ೮೦,೦೦೦ ಪೆನ್ಷನ್ ಹಣ ಬರುತ್ತದೆ ಅದರ ಜೊತೆಗೆ ಸ್ವಂತದ್ದು ಎಂಬುದು ಒಂದು ಉಡುಪಿಯಲ್ಲಿ ಮನೆ ಇದೆ ಇದನ್ನು ಹೊರತುಪಡಿಸಿ ಏನಾದರೂ ಆಸ್ತಿ ಮಾಡಿದ್ದರೆ ಶಾಸಕ ಸುರೇಶ್ ಶೆಟ್ಟಿ ಅವರು ದಾಖಲೆ ಸಮೇತವಾಗಿ ಚರ್ಚೆಗೆ ಬರಲಿ ನಾನು ಕೂಡ ಬಹಿರಂಗವಾಗಿ ಸಿದ್ಧನಾಗಿದ್ದೇನೆ ಎಂದರು.
ಕಾಪುವಿನ ಅಭಿವೃದ್ಧಿಯ ದೃಷ್ಟಿಯಲ್ಲಿ ನಾನು ಮಾತನಾಡುತ್ತಿದ್ದೇನೆ ಹೊರತು ವೈಯಕ್ತಿಕವಾಗಿ ಮಾತನಾಡುವ ಅಗತ್ಯವಿಲ್ಲ ಆದರೆ ಶಾಸಕರು ಮಾತ್ರ ತನ್ನ ಶಾಸಕತನದ ಪ್ರಭಾವವನ್ನು ಬಳಸಿಕೊಂಡು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸಿ ಆರ್ ಜೆಡ್ ಫೈಯರ್ ಸೇರಿದಂತೆ ಪ್ರಮುಖ ದಾಖಲೆ ಇಲ್ಲದೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆಂದು ಆರೋಪ ಮಾಡಿದರು.
ಕಾಪುವಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ವ್ಯಯಿಸಿದ್ದು ಕಾಪು ಪುರಸಭಾ ಕಟ್ಟಡ ಕಾಪುವಿನ ತಾಲೂಕು ಆಡಳಿತ ಕಟ್ಟಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಸೇರಿದಂತೆ ೧೦ ಹಲವಾರು ಯೋಜನೆಯನ್ನು ಕಾಪುವಿಗೆ ತಂದಿದ್ದೇನೆ ಮಾತ್ರವಲ್ಲದೆ ಕಾಪು ಶಾಸಕ ಪ್ರಶ್ನೆ ಮಾಡುವಂತೆ ೫೦೦ ಮನೆಯ ನಿರ್ಮಾಣಕ್ಕಾಗಿ ಈಗಾಗಲೇ ನನ್ನ ಅವಧಿಯಲ್ಲಿ ಕಾಪು ಬಿಕ್ರಿ ಗುತ್ತು ಸಮೀಪದ ಜಾಗವನ್ನು ನಿಗದಿಪಡಿಸಿದ್ದು ಟೆಂಡರ್ ಪ್ರಕ್ರಿಯೆ ಆಗುವ ಮುನ್ನವೇ ನನ್ನ ಅವಧಿ ಮುಗಿದಿತ್ತು ಮಾನ್ಯ ಶಾಸಕರಾದ ಸುರೇಶ್ ಶೆಟ್ಟಿ ಅವರು ಇದನ್ನು ಮುಂದುವರಿಸಿಕೊ0ಡು ಹೋಗಲಿ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಕ್ಷೇತ್ರದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ,ಕೇವಲ ೩೦೦ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಸಚಿವರ ಬಳಿ ಮತ್ತು ಟೇಬಲ್ ಟು ಟೇಬಲ್ ತಿರುಗಿದರೆ ಮಾತ್ರ ಹಣ ಸ್ಯಾಂಕ್ಷನ್ ಆಗುತ್ತದೆ ಎಂಬುದನ್ನ ಶಾಸಕರು ಅರಿತುಕೊಳ್ಳಬೇಕು ಎಂದರು.
ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾಗಿದೆ. ಇವತ್ತು ನಾನು ಸೋತಿರಬಹುದು ಅವರ ಗೆದ್ದಿರಬಹುದು ಮುಂದಿನ ದಿನ ಹೇಗೆ ಎಂಬುದು ಮತದಾರರಿಗೆ ಮಾತ್ರ ಗೊತ್ತಿದೆ ನನ್ನ ಜೀವಮಾನವಿಡಿ ರಾಜಕೀಯದಲ್ಲಿ ಜನಸೇವೆ ಮಾಡಿದ್ದೇನೆ ಹೊರತು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿಲ್ಲ ಎಂದರು ಕಾಪು ಶಾಸಕ ಇನ್ನಾದರೂ ಗೂಬೆ ಕೂರಿಸುವುದನ್ನು ಬಿಟ್ಟು ಜನ ಪರವಾದ ಕೆಲಸವನ್ನ ಮಾಡಲಿ ನನ್ನ ಬೆಂಬಲ ಸಂಪೂರ್ಣ ಅವರಿಗೆ ಇದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ಚಂದ್ರ ಸುವರ್ಣ ಅಡ್ವೆ,ಜಿತೇಂದ್ರ ಪುಟಾರ್ಡೋ,ಶಾಂತಲತ ಶೆಟ್ಟಿ ಸೇರಿದಂತೆ ಪ್ರಮುಖರು ಇದ್ದರು.
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…
2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುತ್ತೇವೆ : ಪ್ರಧಾನಿ ಮೋದಿ ನವದೆಹಲಿ: 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು…