Featured

ಕಾಪು:  ನನ್ನ ಜೀವನ ಪೆನ್ಷನ್ ಹಣದಲ್ಲಿ ನಡೆಯುತ್ತಿದೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಪುರಾವೆ ಸಮೇತ ಕಾಪು ಶಾಸಕರು ಚರ್ಚೆಗೆ ಬರಲಿ :  ವಿನಯ್ ಕುಮಾರ್ ಸೊರಕೆ – vishwanews24

ಕಾಪು:  ನನ್ನ ಜೀವನ ಪೆನ್ಷನ್ ಹಣದಲ್ಲಿ ನಡೆಯುತ್ತಿದೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಪುರಾವೆ ಸಮೇತ ಕಾಪು ಶಾಸಕರು ಚರ್ಚೆಗೆ ಬರಲಿ :  ವಿನಯ್ ಕುಮಾರ್ ಸೊರಕೆ

ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಿನ ಮಾತಿನ ಜಟಾಪಟಿ ತಾರಕಕ್ಕೇರಿದ್ದು ಕೇಸರಿನ ಎರಚಾಟ ಜೋರಾಗಿ ನಡೆಯುತ್ತಿದೆ ಕಳೆದ ವಾರದ ಹಿಂದೆ ಕಾಪುವಿನ ಶಾಸಕ ಸುರೇಶ್ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ರಾಜಕಾರಣ ಎಂಬುದು ಒಂದು ವ್ಯವಹಾರವಾಗಿದೆ ಅದನ್ನು ಬಿಟ್ಟರೆ ಜೀವನಕ್ಕೆ ಬೇರೆನಿದೆ ಎಂದು ಪ್ರಶ್ನೆ ಮಾಡಿದ್ದರು, ಮಾತ್ರವಲ್ಲದೆ ಅವರಿಗೆ ಈಗ ಬಂದಿರುವ ಇಷ್ಟೊಂದು ಆಸ್ತಿಗಳು ಎಲ್ಲಿಂದ ಎಂದು ಪ್ರಶ್ನೆ ಮಾಡಿದ ಪರಿಣಾಮವಾಗಿ ಇಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

ಅವರು ಮಾತನಾಡಿ ನಮ್ಮದು ಭೂಮಾಲಕರ ಕುಟುಂಬ ಕೃಷಿ ನಮಗೆ ಮೂಲ ಆಧಾರ ಸ್ತಂಭವಾಗಿದೆ ಮತ್ತು ನಾನು ಮಾಜಿ ಶಾಸಕ ಹಾಗೂ ಮಾಜಿ ಸಂಸದ ಆದರಿಂದ ನನಗೆ ೮೦,೦೦೦ ಪೆನ್ಷನ್ ಹಣ ಬರುತ್ತದೆ ಅದರ ಜೊತೆಗೆ ಸ್ವಂತದ್ದು ಎಂಬುದು ಒಂದು ಉಡುಪಿಯಲ್ಲಿ ಮನೆ ಇದೆ ಇದನ್ನು ಹೊರತುಪಡಿಸಿ ಏನಾದರೂ ಆಸ್ತಿ ಮಾಡಿದ್ದರೆ ಶಾಸಕ ಸುರೇಶ್ ಶೆಟ್ಟಿ ಅವರು ದಾಖಲೆ ಸಮೇತವಾಗಿ ಚರ್ಚೆಗೆ ಬರಲಿ ನಾನು ಕೂಡ ಬಹಿರಂಗವಾಗಿ ಸಿದ್ಧನಾಗಿದ್ದೇನೆ ಎಂದರು.

ಕಾಪುವಿನ ಅಭಿವೃದ್ಧಿಯ ದೃಷ್ಟಿಯಲ್ಲಿ ನಾನು ಮಾತನಾಡುತ್ತಿದ್ದೇನೆ ಹೊರತು ವೈಯಕ್ತಿಕವಾಗಿ ಮಾತನಾಡುವ ಅಗತ್ಯವಿಲ್ಲ ಆದರೆ ಶಾಸಕರು ಮಾತ್ರ ತನ್ನ ಶಾಸಕತನದ ಪ್ರಭಾವವನ್ನು ಬಳಸಿಕೊಂಡು ಕಾಪು ಪುರಸಭಾ ವ್ಯಾಪ್ತಿಯಲ್ಲಿ ಸಿ ಆರ್ ಜೆಡ್ ಫೈಯರ್ ಸೇರಿದಂತೆ ಪ್ರಮುಖ ದಾಖಲೆ ಇಲ್ಲದೆ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆಂದು ಆರೋಪ ಮಾಡಿದರು.

ಕಾಪುವಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ವ್ಯಯಿಸಿದ್ದು ಕಾಪು ಪುರಸಭಾ ಕಟ್ಟಡ ಕಾಪುವಿನ ತಾಲೂಕು ಆಡಳಿತ ಕಟ್ಟಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಸೇರಿದಂತೆ ೧೦ ಹಲವಾರು ಯೋಜನೆಯನ್ನು ಕಾಪುವಿಗೆ ತಂದಿದ್ದೇನೆ ಮಾತ್ರವಲ್ಲದೆ ಕಾಪು ಶಾಸಕ ಪ್ರಶ್ನೆ ಮಾಡುವಂತೆ ೫೦೦ ಮನೆಯ ನಿರ್ಮಾಣಕ್ಕಾಗಿ ಈಗಾಗಲೇ ನನ್ನ ಅವಧಿಯಲ್ಲಿ ಕಾಪು ಬಿಕ್ರಿ ಗುತ್ತು ಸಮೀಪದ ಜಾಗವನ್ನು ನಿಗದಿಪಡಿಸಿದ್ದು ಟೆಂಡರ್ ಪ್ರಕ್ರಿಯೆ ಆಗುವ ಮುನ್ನವೇ ನನ್ನ ಅವಧಿ ಮುಗಿದಿತ್ತು ಮಾನ್ಯ ಶಾಸಕರಾದ ಸುರೇಶ್ ಶೆಟ್ಟಿ ಅವರು ಇದನ್ನು ಮುಂದುವರಿಸಿಕೊ0ಡು ಹೋಗಲಿ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಕ್ಷೇತ್ರದ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಶಾಸಕರು ಹಿಂದೇಟು ಹಾಕುತ್ತಿದ್ದಾರೆ,ಕೇವಲ ೩೦೦ ಕೋಟಿ ರೂಪಾಯಿಯ ಪ್ರಸ್ತಾವನೆ ಸಲ್ಲಿಸಿದರೆ ಸಾಲದು ಸಚಿವರ ಬಳಿ ಮತ್ತು ಟೇಬಲ್ ಟು ಟೇಬಲ್ ತಿರುಗಿದರೆ ಮಾತ್ರ ಹಣ ಸ್ಯಾಂಕ್ಷನ್ ಆಗುತ್ತದೆ ಎಂಬುದನ್ನ ಶಾಸಕರು ಅರಿತುಕೊಳ್ಳಬೇಕು ಎಂದರು.

ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯವಾಗಿದೆ. ಇವತ್ತು ನಾನು ಸೋತಿರಬಹುದು ಅವರ ಗೆದ್ದಿರಬಹುದು ಮುಂದಿನ ದಿನ ಹೇಗೆ ಎಂಬುದು ಮತದಾರರಿಗೆ ಮಾತ್ರ ಗೊತ್ತಿದೆ ನನ್ನ ಜೀವಮಾನವಿಡಿ ರಾಜಕೀಯದಲ್ಲಿ ಜನಸೇವೆ ಮಾಡಿದ್ದೇನೆ ಹೊರತು ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿಲ್ಲ ಎಂದರು ಕಾಪು ಶಾಸಕ ಇನ್ನಾದರೂ ಗೂಬೆ ಕೂರಿಸುವುದನ್ನು ಬಿಟ್ಟು ಜನ ಪರವಾದ ಕೆಲಸವನ್ನ ಮಾಡಲಿ ನನ್ನ ಬೆಂಬಲ ಸಂಪೂರ್ಣ ಅವರಿಗೆ ಇದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ಚಂದ್ರ ಸುವರ್ಣ ಅಡ್ವೆ,ಜಿತೇಂದ್ರ ಪುಟಾರ್ಡೋ,ಶಾಂತಲತ ಶೆಟ್ಟಿ ಸೇರಿದಂತೆ ಪ್ರಮುಖರು ಇದ್ದರು.

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

23 hours ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago