ಕಾಪು: ಹೌದು ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಗದ್ದುಗೇರಿಸುವುದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ಗೆ ಪ್ರೆಸ್ಟೀಜ್ ಪ್ರಶ್ನೆಯಾಗಿದೆಂಬ ಮಾತು ಕೇಳಿಬರುತ್ತಿರುವಂತೆ ಶನಿವಾರ ನಡೆದ ಸಮಾವೇಶ ಸಾಕ್ಷಿಯಾಗಿದೆ.
ಕಳೆದ ಚುನಾವಣೆಯಲ್ಲಿ ಕಾಪು ಪುರಭೆಯ ಗದ್ದುಗೇರಲು ಒಂದು ಸೀಟಿನ ಕೊರತೆಯಾಗಿತ್ತು ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಗೆದ್ದ ಬಂದ ನಂತರ ಸುಲಭವಾಗಿ ಮತದಾನದ ಮುಖಾಂತರ ಬಿಜೆಪಿ ಪುರಸಭೆಯಲ್ಲಿ ಆಡಳಿತ ಮಾಡಿದೆ, ಆದರೇ ಈ ಬಾರಿ ಮಾತ್ರ ಬಿಜೆಪಿಗೆ ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ ಕೇಂದ್ರದಿAದ ಹಿಡಿದು ಪಂಚಾಯತ್ ಮಟ್ಟದವರೆಗೆ ಬಿಜೆಪಿ ಆಡಳಿತ ನಡೆಸುತ್ತಿದೆ ಮಾತ್ರವಲ್ಲದೆ ಉಡುಪಿ ಜಿಲ್ಲೆಗೆ ಎರಡೆರಡು ಸಚಿವ ಸ್ಥಾನ ದೊರೆತಿದೆ, ಅಷ್ಟೆ ಅಲ್ಲದೆ ಸಿಟ್ಟಿಂಗ್ ಎಂಎಲ್ಎ, ಸಿಟ್ಟಿಂಗ್ ಮಿನಿಸ್ಟರ್ ಕಂ ಉಸ್ತುವಾರಿ ಸಚಿವರ ಹಾಗೇ ಇರುವ ಸುನಿಲ್ ಕುಮಾರ್ ಸಚಿವನಾದ ನಂತರ ಎದುರಿಸುತ್ತಿರುವ ಜಿಲ್ಲೆಯ ಮೊದಲ ಚುನಾವಣೆ ಆದ್ದರಿಂದ ಇದೊಂದು ಬಿಜೆಪಿ ಪಾಲಿಗೆ ಮತ್ತು ಸುನಿಲ್ ಕುಮಾರ್ಗೆ ಮಹತ್ವದ್ದಾಗಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಸಚಿವ ಸುನಿಲ್ ಕುಮಾರ್ ೨೩ ವಾರ್ಡಿನ ಮಾಹಿತಿ ಪಡೆದುಕೊಂಡು ಜಿಲ್ಲೆಯಿಂದ ಕೂಡ ಚುನಾವಣೆಗಾಗಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ನೇತೃತ್ವದಲ್ಲಿ ತಂಡ ನಿಯೋಜನೆ ಮಾಡಿ ಬಹುಮತದ ಸೀಟ್ ಗೆಲ್ಲಿಸಲು ಸಾಹಸ ಪಡುತ್ತಿದ್ದಾರೆಮದು ತಿಳಿದು ಬಂದಿದೆ.ಪ್ರತಿದಿನ ವಾರ್ಡುವಾರುಗಳಲ್ಲಿ ಹೊಸ ಬೆಳವಣಿಗೆಯ ಮಾಹಿತಿ ಕಲೆ ಹಾಕಿ ತಂತ್ರಗಾರಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.
ಕಾಪುವಿನಲ್ಲಿ ಬೀಡುಬಿಟ್ಟ ಜಿಲ್ಲೆಯ ಪ್ರಮುಖರು
ಇಲ್ಲಿನ ಚುನಾವಣೆಯ ಬಹುಮತ ಪಡೆಯುವ ದೃಷ್ಟಿಯಿಂದ ಜಿಲ್ಲೆಯ ಬಿಜೆಪಿ ಪ್ರಮುಖರ ತಂಡ ಕಾಪು ಕ್ಷೇತ್ರದಲ್ಲಿ ಕಳೆದು ೧೦ ದಿನಗಳಿಂದ ಬೀಡು ಬಿಟ್ಟಿದೆ,ಪ್ರತಿಯೊಂದು ವಾರ್ಡಿಗೆ ಐದು ಬಾರಿ ಭೇಟಿ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ನಡೆಸಿ ಬಿಜೆಪಿ ಪಾಲಿಗೆ ಪುರಸಭೆಯನ್ನು ಒಲಿಸಿಕೊಳ್ಳಲು ಪ್ರಯತ್ನ ಇದಾಗಿದೆ.
ಪೊಲಿಟಿಕಲ್ ಬ್ಯುರೋ
ವಿಸ್ವನ್ಯೂಸ್24
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…