Featured

ಕಾಪು ಪುರಸಭಾ ಚುನಾವಣೆ : ಕಟ್ಟರ್ ಹಿಂದುತ್ವದ ಮತಬ್ಯಾಂಕ್ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ಸಮಾಜಕ್ಕೆ ಟಿಕೆಟ್ ಕೊಡುವಲ್ಲಿ ಕಡೆಗಣಿಸಿತೆ ಬಿಜೆಪಿ…?: vishwanews24

ಕಾಪು ಪುರಸಭಾ ಚುನಾವಣೆ : ಕಟ್ಟರ್ ಹಿಂದುತ್ವದ ಮತಬ್ಯಾಂಕ್ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ಸಮಾಜಕ್ಕೆ ಟಿಕೆಟ್ ಕೊಡುವಲ್ಲಿ ಕಡೆಗಣಿಸಿತೆ ಬಿಜೆಪಿ…?

ಕಾಪು:ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಜಾತಿವಾರು ಪೈಕಿ ಟಿಕೆಟ್ ನೀಡುವಲ್ಲಿ ಯಶಸ್ವಿಯಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.


23  ವಾರ್ಡಿನ ಪೈಕಿ ಬಿಲ್ಲವ , ದೇವಾಡಿಗ, ಬಂಟ, ಹಾಗೂ ಇತರೆ ಜಾತಿಯ ಮುಖಂಡರಿಗೆ ಬಿಜೆಪಿ ಟಿಕೆಟ್ ನೀಡುವಲ್ಲಿ ಯಶಸ್ವಿಯಾದರೆ ಭಾಜಪದ ಮತ್ತು ಹಿಂದುತ್ವದ ಕಟ್ಟರ್ ಮತಬ್ಯಾಂಕ್ ಅನಿಸಿಕೊಂಡಿರುವ ಜಿ.ಎಸ್.ಬಿ ಹಾಗೂ ಬ್ರಾಹ್ಮಣ ೨ ಸಮುದಾಯವನ್ನು ಕಡೆಗಣಿಸಿದರು ಅನ್ನುವ ಮಾತು ಕೇಳಿ ಬರುತ್ತಿದೆ. ಕಾಪು ಪೇಟೆ, ಭಾರತ್ ನಗರ, ಜನಾರ್ಧನ ದೇವಸ್ಥಾನ , ಕೊಪ್ಪಲಂಗಡಿ ವಾರ್ಡಿನಲ್ಲಿ ಈ ಎರಡು ಸಮುದಾಯದ ನಿರ್ಣಾಯಕ ಮತಗಳಿದ್ದರೂ ಯಾವ ಕಾರಣಕ್ಕಾಗಿ ದೂರ ಇಟ್ಟರು ಅನ್ನುವ ಚರ್ಚೆ ಆರಂಭವಾಗಿದೆ.

ಸರಿ ಸುಮಾರು 400-450  ಜಿ.ಎಸ್.ಬಿ ಸಮುದಾಯ ಮತ್ತು 400-425 ಬ್ರಾಹ್ಮಣ ಸಮಾಜದ ಮತಗಳನ್ನು ಹೊಂದಿರುವ ಈ ಸಮುದಾಯಗಳಿಗೆ ಬಿಜೆಪಿ ಪಾರ್ಟಿ ಟಿಕೆಟ್ ನೀಡುವಲ್ಲಿ ಹಿಂದೆ ಸರಿದಿರುವುದು ಅಚ್ಚರಿ ಉಂಟು ಮಾಡಿದೆ.ಯಾವುದೇ ಲೆಕ್ಕಚಾರ ಹಾಕಿ ತಾಳೆ ಮಾಡಿನೋಡಿದರು ಎರಡು ಸಮುದಾಯದಿಂದ ಶೇಕಾಡ ೯೯% ಹಿಂದುತ್ವದ ಕಟ್ಟರ್ ಮತಗಳಿರುವ ಸಮುದಾಯಗಳು , ಕಳೆದ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಈ ಎರಡು ಜಾತಿಯ ಮುಖಂಡರಿಗೆ ಟಿಕೆಟ್ ನೀಡುವಲ್ಲಿ ವಿಫಲವಾಗಿತ್ತು ಆದರೇ ಈ ಬಾರಿಯಾದರೂ ಅವಕಾಶ ಸಿಗಬಹುದೆಂದು ನಂಬಿದ್ದ ಎರಡು ಸಮುದಾಯಕ್ಕೆ ನಿರಾಶೆ ಉಂಟುಮಾಡಿದೆ ಅನ್ನುವುದು ಸದ್ಯದ ಸುದ್ದಿ.

ನಾಮನಿರ್ದೇಶನ ಸದಸ್ಯ ಮಾಡಿತ್ತು ಕಾಂಗ್ರೇಸ್
ಮತದಾರರನ್ನು ಮತ್ತು ಜಾತಿವಾರು ಪರಿಗಣನೆಯಲ್ಲಿ ಕಾಂಗ್ರೇಸ್ ಪಕ್ಷ ಕಳೆದ ಚುನಾವಣೆಯಲ್ಲಿ ಸಫಲತೆಯನ್ನು ಕಂಡುಕೊAಡ್ಡಿದ್ದು ಮಾತ್ರವಲ್ಲದೆ ಅಧಿಕಾರ ಚುಕ್ಕಾಣಿ ಹಿಡಿಯುವ ಸಂಧರ್ಭದಲ್ಲಿ ಜಿ.ಎಸ್.ಬಿ ಸಮುದಾಯದ ಹರೀಶ್ ಕೆ ನಾಯಕ್‌ರನ್ನು ನಾಮನಿರ್ದೇಶನ ಸದಸ್ಯನನ್ನಾಗಿ ಆಯ್ಕೆ ಮಾಡಿ ಕಾಂಗ್ರೇಸ್ ಪಕ್ಷ ಜೆ.ಎಸ್.ಬಿ ಸಮಾಜದ ಡ್ಯಾಮೇಜ್ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿತ್ತು . ಮಾತ್ರವಲ್ಲದೆ ಅವರಿಗೂ ಸ್ಥಾನಮಾನ ಕೊಡುವಲ್ಲಿ ಯಶಸ್ವಿಯಾಗಿತ್ತು. ಆದರೇ ಬಿಜೆಪಿ ಆಡಳಿತ ಸಮಯದಲ್ಲಿ ಅಧಿಕಾರ ಪಡೆದುಕೊಂಡರೂ ಈ ಎರಡು ಸಮುದಾಯದಿಂದ ಕಡೇ ಪಕ್ಷ ನಾಮನಿರ್ದೇಶನ ಸದಸ್ಯ ಮಾಡುವಲ್ಲಿ ಕೂಡ ವಿಫಲತೆಯನ್ನು ಕಂಡಿದೆ ಅನ್ನುವುದು ಸತ್ಯವಾದ ವಿಚಾರ.

ಈ ಎಲ್ಲಾ ಅಂಶಗಳ ನಡುವೆ ಈ ಬಾರಿಯು ಕೂಡ ಕಾಂಗ್ರೇಸ್ ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆರಂಭವಾಗಿದ್ದು ಮಾತ್ರವಲ್ಲಿ ಕಡೇ ಕ್ಷಣದಲ್ಲಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಅನ್ನುವ ಮಾತು ಕಾಂಗ್ರೇಸ್ ವಲಯದಲ್ಲಿ ಕೇಳಿ ಬರುತ್ತಿದೆ.ಕಾಪು ಪೇಟೆ ಮತ್ತು ಭಾರತ್ ನಗರ ಹಾಗೂ ಜನಾರ್ಧನ ದೇವಸ್ಥಾನ ವಾರ್ಡಿನಲ್ಲಿ ಈ ಎರಡು ಸಮುದಾಯದ ಮತಗಳು ಅತ್ಯಂತ ನಿರ್ಣಾಯಕ ಎಂಬುದು ಸರ್ವೆ ಸಾಮಾನ್ಯವಾಗಿ ತಿಳಿದಿರುವ ವಿಚಾರ ಆದರೂ ಬಿಜೆಪಿ ಯಾಕೇ ಕಡೆಗಣಿಸಿತು ಎಂಬುದು ಯಕ್ಷಪ್ರಶ್ನೆಯಾಗಿದೆ.
ಬ್ಯುರೋ ರಿಪೋರ್ಟ್
ವಿಶ್ವನ್ಯೂಸ್೨೪

Vishwa News 24

Recent Posts

ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು -vishwanews24

ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು ಉಡುಪಿ: ಮುದರಂಗಡಿ ಗ್ರಾ.ಪಂ ಮಾಜಿ…

10 hours ago

ಮುದರಂಗಡಿ ಡೇವಿಡ್‌ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ -vishwanews24

ಮುದರಂಗಡಿ ಡೇವಿಡ್‌ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್‌…

12 hours ago

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು -vishwanews24

ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು ಶಿಮ್ಲಾ :…

12 hours ago

ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ -vishwanews24

ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 32ನೇ ಕಂತಿನ ಹಣ ಬಿಡುಗಡೆಯಾಗಿದೆ.…

13 hours ago

ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ -vishwanews24

ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ?…

13 hours ago

ಶಿರ್ವ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು -vishwanews24

ಶಿರ್ವ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು ಶಿರ್ವ : ರಸ್ತೆ ದಾಟಲು ನಿಂತಿದ್ದ…

13 hours ago