ಕಾಪು: ಇಲ್ಲಿನ ಪುರಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಪಾರ್ಟಿಯ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ, ರಾಜ್ಯ, ಜಿಲ್ಲಾ, ಕ್ಷೇತ್ರ ಮಟ್ಟದ ಬಿಜೆಪಿ ಧುರಿಣರು ಫೀಲ್ಡ್ಗೆ ಇಳಿದು ಅಭ್ಯರ್ಥಿ ಪರ ಮತಯಾಚನೆ ನಡೆಸುತ್ತಿದ್ದಾರೆ.
ಆದಿತ್ಯವಾರ ಬಿಜೆಪಿಯ ಮಹಾ ಅಭಿಯಾನ ಪ್ಲಾಪ್ ಶೋ ಕಂಡರು ಕೂಡ ಗುರ್ಮೆ ಸುರೇಶ್ ಶೆಟ್ಟಿ ಹೋದ ವಾರ್ಡಿನಲ್ಲಿ ಹಿರಿಯರೆಲ್ಲರೂ ಮುಂದೆ ಬಂದು ಸ್ವಾಗತಿಸಿದ ಘಟನೆ ನಡೆದಿದೆ.
ಯುವಕರ ಪಡೆಯಂತು ಗುರ್ಮೆ ಸುರೇಶ್ ಶೆಟ್ಟಿಯ ಜತೆಗೆನೆ ನಿಂತು ಮತಯಾಚನೆ ನಡೆಸಿದ್ದು ವಿಶೇಷವಾಗಿತ್ತು, ಮನೆಯಲ್ಲಿದ್ದ ಹಿರಿಯರು ಗುರ್ಮೆ ಸುರೇಶ್ ಶೆಟ್ಟಿಯನ್ನು ಕಂಡು ಕೋವಿಡ್ ಸಮಯಲ್ಲಿ ಮಾಡಿದ ಉಪಕಾರವನ್ನು ಸ್ಮರಣೆ ಮಾಡಿಕೊಂಡು ಬಾಯ್ತುಂಬ ಹಾರೈಸಿ ಹರಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆನಂದಭಾಷ್ಪ ಹರಿಸಿದ ಹಿರಿಯರು
ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ ಸಂಧರ್ಭದಲ್ಲಿ ಮತದಾರ ಗುರ್ಮೆ ಸುರೇಶ್ ಶೆಟ್ಟಿಯನ್ನು ಕಂಡು ಆನಂದಭಾಷ್ಪ ಹರಿಸಿದ ಘಟನೆಯೂ ನಡೆದಿದೆ, ಕಾರಲ್ಲಿ ಇಳಿಯುತ್ತಿರುವ ಸಮಯದಲ್ಲಿ ಹಿರಿಯ ಜೀವಗಳು ಹತ್ತಿರ ಬಂದು ಬಿಗಿದಪ್ಪಿ ಅತ್ಯಂತ ಪ್ರೀತಿಯಿಂದ ಮಾತಾಡಿಸಿ ಶುಭ ಹಾರೈಸಿದರು ಎಂದು ತಿಳಿದು ಬಂದಿದೆ.
ಗುರ್ಮೆ ಸುರೇಶ್ ಶೆಟ್ಟಿ ಕಾಪು ಭಾಗದಲ್ಲಿ ಅತ್ಯಂತ ಚಿರಪರಿಚಿತರು ಮತ್ತು ಎಲ್ಲಾ ವರ್ಗದ ಜನರನ್ನು ಕೂಡ ಅತ್ಯಂತ ಪ್ರೀತಿಯಿಂದ ಗೌರವಿಸಿ ಮಾತಾಡಿಸುವುದು ಮಾತ್ರವಲ್ಲದೆ ಸಾವಿರಾರು ಕುಟುಂಬಗಳ ಕಷ್ಟಗಳಿಗೆ ಸ್ಪಂದಿಸಿ ನೆರವಾದ ಕೀರ್ತಿ ಶೆಟ್ಟಿಯವರಿಗೆ ಇದೆ. ಕೋವಿಡ್ ಸಮಯದಲ್ಲಿ ಎರೆಡೆರಡು ಬಾರಿ ಬಡ ಕುಟುಂಬಗಳಿಗೆ ಪಡಿತರ ಕಿಟ್ ಮುಟ್ಟಿಸಿದ್ದು ಮತ್ತು ಅಂಬ್ಯುಲೆನ್ಸ್ ನೀಡಿಯೂ ಸಹಕರಿಸಿದ್ದನ್ನು ಜನ ಇಂದಿಗೂ ಮರೆತಿಲ್ಲ .
ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…