ಕಾಪು: ಪುರಸಭಾ ಚುನಾವಣೆಯ ಕಾವು ದಿನಕಳೆದಂತೆ ಜಾಸ್ತಿಯಾಗತೊಡಕಿದೆ ಈ ಪೈಕಿ ಕರಾವಳಿ ವಾರ್ಡಿನಲ್ಲಿ ಆಯ್ಕೆಯಾದ ಬಿಜೆಪಿ ಪುರಸಭಾ ಸದಸ್ಯ ಕಿರಣ್ ಆಳ್ವಾರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿ ಚುನಾವಣಾ ಇಳಿಸಿದೆ ಆದ್ದರಿಂದ ಇಂದು ಬಿಜೆಪಿ ನಾಯಕರ ದಂಡು ಕರಾವಳಿ ವಾರ್ಡಿಗೆ ಇಳಿದುಬಿಟ್ಟಿದೆ.
ಸುಮಾರು 200 ಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ನಾಯಕರಾದ ಗುರ್ಮೆ ಸುರೇಶ್ ಶೆಟ್ಟಿ, ಚುನಾವಣಾ ಉಸ್ತುವಾರಿ ಮಟ್ಟಾರ್ ರತ್ನಾಕರ ಹೆಗ್ಡೆ-ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ – ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮೊದಲಾದವರು ಫೀಲ್ಡ್ಗೆ ಇಳಿದು ಕಿರಣ್ ಆಳ್ವಾ ಪರ ಮತಯಾಚನೆ ನಡೆಸಿದರು.
ಜನರಿಂದ ಆಯ್ಕೆಗೊಂಡು ಕಳೆದ ಬಾರಿ ಪುರಸಭೆಗೆ ಆಯ್ಕೆಯಾದ ನಾಯಕನಿಗೆ ಮತ್ತೆ ಅದೇ ವಾರ್ಡಿನಲ್ಲಿ ಬಿಜೆಪಿ ಟಿಕೆಟ್ ನೀಡಿ ಅದೃಷ್ಟ ಪರಿಕ್ಷೇಗೆ ಇಳಿಸಿದೆ.
ಕಳೆದ ಅವಧಿಯಲ್ಲಿ ಕರಾವಳಿ ವಾರ್ಡಿಗೆ ಸಿ.ಆರ್.ಝೆಡ್ ಸಮಸ್ಯೆಯ ಕಾನೂನಿನ ತೊಡಕಿನ ನಡುವೆ ಸರಿಪಡಿಸಿಕೊಂಡು 23ಲಕ್ಷಕ್ಕೂ ಅಧಿಕ ಅನುದಾನ ತಂದು ಮಾಡಿದ ಕಾಮಗಾರಿ ಪುರಸಭೆಯ ದಾಖಲೆಗಳಲ್ಲಿ ಭದ್ರವಾಗಿದೆ.
ಈ ಪೈಕಿ ಯಾರ್ಡ್ ಫ್ರೆಂಡ್ಸ್ ರಂಗಮಂದಿರಕ್ಕೆ ಶೌಚಾಲಯ ಮತ್ತು ಮುಂದುವರಿದ ಕಾಮಗಾರಿ ಮತ್ತು ರಂಗವೇದಿಕೆ ನಿರ್ಮಾಣಕ್ಕೆ ಒಟ್ಟು 9 ಲಕ್ಷ ರೂಪಾಯಿ ಹಾಗೂ ಎಸ್ ಸಿ ಕಾಲನಿಯ ಬಾವಿ ದುರಸ್ತಿ,ಸೋಲಾರ್ ದೀಪ,ಚರಂಡಿ ನಿರ್ಮಾಣ 7 ಲಕ್ಷ ಹಾಗೂ ಇತರ ಕಾಮಗಾರಿಗಳ ಒಟ್ಟು 23 ಲಕ್ಷದ ಅನುದಾನ ತರುವಲ್ಲಿ ಯಶಸ್ವಿಯಾದ ಸದಸ್ಯ.
ಧಾರ್ಮಿಕ- ಶೈಕ್ಷಣಿಕ-ಸಾಂಸ್ಕøತಿಕ ಕ್ಷೇತ್ರದಲ್ಲಿ ತನ್ನದೆ ಆದ ಛಾಪುವಿನಲ್ಲಿ ಮಾಡಿದ ಸ್ವಾರ್ಥ ರಹಿತ ಕೆಲಸ ಕಾರ್ಯಗಳು ಜನಮೆಚ್ಚುವಂತೆ ಮಾಡಿತ್ತು
ಪುರಸಭೆಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರಲ್ಲಿ ಕಿರಣ್ ಆಳ್ವಾ ಕೂಡ ಒಬ್ಬರು
2015 ಸುಮಾರಿಗೆ ಗ್ರಾಮರಕ್ಷಣಾ ಸಮಿತಿಯಲ್ಲಿ ಸಕ್ರಿಯರಾಗಿದ್ದುಕೊಂಡು ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಪುರಭೆಯ ಅನಾಹುತದ ಬಗ್ಗೆ ಗ್ರಾಮಸ್ಥರಿಗೆ ಬಡಿದೆಬ್ಬಿಸಿದ ಕೀರ್ತಿಗೆ ಆಳ್ವಾ ಒಳಗಾಗಿದ್ದರು.
ಕೋವಿಡ್ ವ್ಯಾಕ್ಸಿನೇಷನ್ ವಿಚಾರವಾಗಿ ಕರಾವಳಿ ವಾರ್ಡಿಗೆ ಅತೀ ಹೆಚ್ಚು ಮಾಡಿಸುವಲ್ಲಿ ಯಶಸ್ವಿಯಾದ ಸದಸ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ ಯಾವುದೇ ಸಮಯದಲ್ಲೂ ಕಾಪು-ಉಡುಪಿಗೆ ವ್ಯಾಕ್ಸಿನ್ ಬಂದ್ರೆ ಮೊದಲಿಗೆ ಒತ್ತಡಹೇರಿ ಕರಾವಳಿ ವಾರ್ಡಿಗೆ ಅತೀ ಹೆಚ್ಚು ವ್ಯಾಕ್ಸಿನ್ ತರುವಲ್ಲಿ ನಂಬರ್ ವನ್ ಅನಿಸಿಕೊಂಡಿರುವ ಪುರಸಭಾ ಸದಸ್ಯ ಮತ್ತು ಅಂಕಿ ಅಂಶದ ಪ್ರಕಾರ 23 ವಾರ್ಡಿನ ಪೈಕಿ 99.99 ಶೇಕಾಡ ವ್ಯಾಕ್ಸಿನೇಷನ್ ಆಗಿರುವ ಕರಾವಳಿ ವಾರ್ಡ್ ಎಂಬ ಮಾಹಿತಿ ಲಭ್ಯವಾಗಿದೆ.
ಕರಾವಳಿ ವಾರ್ಡಿಗೆ ಅತೀ ಹೆಚ್ಚು ವ್ಯಾಕ್ಸಿನ್ಗಾಗಿ ಒತ್ತಡ ಹೇರಿದÀ ಪರಿಣಾಮವಾಗಿ ಕೆಲವು ಸಮಯಗಳ ಕಾಲ ಕಾಪು ಶಾಸಕರೊಂದಿಗೆ ಮುನಿಸು ಮಾಡಿಕೊಂಡಿದ್ದರು ಎಂಬ ವಿಚಾರ ಕೂಡ ಭಾರಿ ಸುದ್ದಿ ಮಾಡಿತ್ತು.
ಕರಾವಳಿ ವಾರ್ಡಿನಲ್ಲಿ ದಾಂಡಿಗ-ಎಸೆತೆಗಾರ-ನಿರ್ಣಾಯಕ ಮತದಾರ
23 ವಾರ್ಡಿನ ಪೈಕಿಯಲ್ಲಿ ಕರಾವಳಿ ವಾರ್ಡ್ ಅತ್ಯಂತ ಮಹತ್ವದ್ದಾಗಿದೆ ಕಾರಣ ಇಷ್ಟೆ ಕಳೆದ ಹಲವಾರು ದಿನಗಳಿಂದ ತುಂಬಾ ಸುದ್ದಿಯಲ್ಲಿದ ವಾರ್ಡ್ ಇದಾಗಿದೆ ಮಾತ್ರವಲ್ಲದೆ ಈ ವಾರ್ಡಿನಲ್ಲಿ ಕ್ಷೇತ್ರ ರಕ್ಷಕನನ್ನು ಆಯ್ಕೆ ಮಾಡಿ ಪುರಸಭೆ ಕಳುಹಿಸುವ ಪ್ರಜ್ಞಾವಂತ ಮತದಾರರು ಇಲ್ಲಿ ನಿರ್ಣಾಯಕರು ಮತ್ತು ದಾಂಡಿಗರು ಯಾರನ್ನು ಬೇಕಾದರೂ ಬೇಡ ಎಸೆದು ಬಿಸಾಡುವ ಎಸೆತಗಾರರು ಆಗಿದ್ದಾರೆ.
ಕಿರಣ್ ಆಳ್ವಾ ಪರ ಮತದಾರ ಯಾವ ನಿರ್ಧಾರ ಮಾಡುತ್ತಾನೆಂದು ಕಾದು ನೋಡಬೇಕಾಗಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್24
ಮೈಸೂರು: ಕಾಲೇಜು ಕ್ಯಾಂಪಸ್ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…