ಉಡುಪಿ

ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24

ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24

ಕಾಪು: ಕಾಪು ಪಂಚಾಯತ್ ವ್ಯವಸ್ಥೆಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಕಾಪು ಪುರಸಭೆ ಬಂದ ಒಟ್ಟು ಅನುದಾನ ಲೆಕ್ಕಚಾರದ ಹಿಂದೆ ವಿಶ್ವನ್ಯೂಸ್೨೪ ತನಿಖಾ ವರದಿ ರಚಿಸಿದೆ. ಇದರನ್ವಯ ಸರಿ ಸುಮಾರು ಐದು ವರ್ಷದಲ್ಲಿ ಪುರಸಭೆಯ ೨೩ ವಾರ್ಡಿನ ಅಭಿವೃದ್ದಿಗಾಗಿ ಕಾಂಗ್ರೇಸ್ ಸರ್ಕಾರ- ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಹೆಚ್ಚು ಅನುದಾನ ಬಂದಿರುವುದು ಮೇಲ್ನೊಟಕ್ಕೆ ತೋರುತ್ತದೆ.

ಕಳೆದ ಐದು ವರ್ಷದ ಅವಧಿಯಲ್ಲಿ ಪುರಸಭೆಗೆ ಒಟ್ಟು ಬಂದಿರುವ ಅನುದಾನ 3035.76  ಲಕ್ಷ ರೂಪಾಯಿ ( ಮೂವತ್ತು ಕೋಟಿ ಮೂವತೈದು ಲಕ್ಷ ರೂಪಾಯಿ) ಇದರಲ್ಲಿ 20 ಕೋಟಿಗೂ ಅಧಿಕ ಅಂದರೆ ಮೂರು ವರ್ಷದಲ್ಲಿ ವಿನಯ್ ಕುಮಾರ್ ಸೊರಕೆಯ ಅವಧಿಯಲ್ಲಿ ಬಂದಿರುವ ಅನುದಾನ ಎಂಬುದು ದಾಖಲೆಗಳಲ್ಲಿ ಕಂಡು ಬರುವ ಸತ್ಯ ವಿಚಾರ.

ಇನ್ನೂ ಬಿಜೆಪಿ ಅವಧಿಯಲ್ಲಿ ಅಂದರೆ ಲಾಲಾಜಿ ಆರ್ ಮೆಂಡನ್ ಶಾಸಕ ಆದ ನಂತರ ಪುರಸಭೆಗೆ ಮೂರುವರೇ ವರ್ಷದ ಅವಧಿಯಲ್ಲಿ ಬಂದಿರುವ ಅನುದಾನ ದಾಖಲೆಗಳ ಪ್ರಕಾರ 10 ಕೋಟಿ ಚಿಲ್ಲರೆಯಾಗಿದೆ ಇದು ಕೇವಲ ಕಾಪು ಪುರಸಭೆಗೆ ಸಂಬಧಿಸಿದ ಅನುದಾನಗಳ ಲೆಕ್ಕಚ್ಚಾರ.

ಇನ್ನೂ ವಾರ್ಡ್ ಪೈಕಿ ಲೆಕ್ಕಚಾರ ಹಾಕುವುದಾರೆ ವಾರ್ಡ್ ನಂಬರ್ 23 ಅಹಮ್ಮದಿ ಮೊಹಲ್ಲದಲ್ಲಿ ಶ್ರೀಮತಿ ಲೀಲಾ ಕೋಟ್ಯಾನ್ ಸದಸ್ಯೆಯಾಗಿದ್ದ ಸಂಧರ್ಭದಲ್ಲಿ 256.45  ಲಕ್ಷ ರೂಪಾಯಿ ಅತಿ ಹೆಚ್ಚು ಅನುದಾನ ಬಂದಿರುವ ವಾರ್ಡ್, ಅತೀ ಕಡಿಮೆ ಅನುದಾನ ವಿನಿಯೋಗ ಆಗಿರುವ ಪೈಕಿ ವಾರ್ಡ್ ಸಂಖ್ಯೆ ೪-ಪೊಲಿಪು ಗುಡ್ಡೆ ಕೇವಲ ಹದಿನೈದು ಲಕ್ಷದ ಇಪ್ಪತೊಂಭತ್ತು ಸಾವಿರ ರೂಪಾಯಿ ಆಗಿದೆ.
ಪೊಲಿಟಿಕಲ್ ಬ್ಯೂರೋ ವಿಶ್ವನ್ಯೂಸ್೨೪

 

Vishwa News 24

Recent Posts

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…

5 hours ago

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…

5 hours ago

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…

5 hours ago

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

6 hours ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

6 hours ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

6 hours ago