ಕಾಪು: ಇಲ್ಲಿಗೆ ಸಮೀಪದ ಮಲ್ಲಾರು ಗ್ರಾಮದ ಕೋಟೆ ರಸ್ತೆಯ ಕುಡ್ತಿಮಾರ್ ಎಂಬಲ್ಲಿಯ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಕಾಪು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿ, ಎರಡು ಕಾರು, ಒಂದು ದ್ವಿಚಕ್ರ ವಾಹನ,4 ಮೊಬೈಲ್ ಹಾಗೂ ದನ ಕರುಗಳು, ಸುಮಾರು 70 ಕೆ.ಜಿ. ಮಾಂಸ ಸೇರಿದಂತೆ ಒಟ್ಟು 12,73,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಎಸ್ಡಿಎಮ್ ಕಾಲೇಜು ಬಳಿಯ ತಾವಾ(35), ಮೂಳೂರು ನಿವಾಸಿ ಮೊಯಿದಿನಬ್ಬ (26) ಬಂಧಿತರಾಗಿದ್ದು, ನೌಷಾದ್, ಶಮೀರ್ ಎಂಬವರು ಪರಾರಿಯಾಗಿದ್ದಾರೆ.
ಮಲ್ಲಾರು ಗ್ರಾಮದ ಕುಡ್ತಿಮಾರ್ ಕೈರುನ್ನಿಸಾ ಕಾಟೇಜ್ ಹೆಸರಿನ ಮನೆಯ ಕಂಪೌಂಡಿನ ಸಮೀಪ ಅಕ್ರಮವಾಗಿ ದನ ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಅವರ ನಿರ್ದೇಶನದಲ್ಲಿ ಕಾರ್ಕಳ ಉಪ ವಿಭಾಗ ಪೊಲೀಸ್ ಉಪಾಧೀಕ್ಷರಾದ ಭರತ್ ರೆಡ್ಡಿ,ಕಾಪು ಉಪ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ , ಕಾಪು ಠಾಣಾ ಪಿ.ಎಸ್.ಐ. ರಾಜಶೇಖರ್ ಬಿ. ಸಾಗನೂರ್ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ್ ಬಿಎಸ್,(ಕಾ-ಸೂ) ಅಪರಾಧ ವಿಭಾಗದ ಪಿಎಸೈ ಐ ಆರ್ .ಗಡ್ಡೆಕರ್ ಮತ್ತು ಸಿಬ್ಬಂದಿ ರವೀಂದ್ರ ,ಆನಂದ್,ಅರುಣ್,ಮಂಜುನಾಥ್,ಸಂದೇಶ್,ಪರಶುರಾಮ್,ಚಂದ್ರಶೇಖರ್,ಜಗದೀಶ್, ಮಹಾಬಲ ಮತ್ತು ಗೀತಾ ಭಾಗವಹಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾನಕೋಗಿಲೆ ಎಸ್.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…
ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…
ನಾನು ಕಂಬಳ ವಿರೋಧಿಸುತ್ತಿಲ್ಲ, ಮೈಸೂರು ದಸರಾದಲ್ಲಿ ಇದನ್ನು ಬಲವಂತವಾಗಿ ಸೇರಿಸಬಾರದು : ಯದುವೀರ್ ಒಡೆಯರ್ ಸ್ಪಷ್ಟನೆ ಮೈಸೂರು: "ನಾನು ಕಂಬಳವನ್ನು…
ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್ಎಎಫ್ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ ಉಡುಪಿ:…
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ ಬೆಂಗಳೂರು :ರಾಜ್ಯದಲ್ಲಿ ಬಹುನಿರೀಕ್ಷಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು…
ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ನವದೆಹಲಿ: ಪ್ರತಿ ತಿಂಗಳು ಔಷಧಿಗಳಿಗೆ…