ಕಾಪು: ದಿನಾಂಕ 08/04/2020 ರಂದು ರಾತ್ರಿ 9:00 ಗಂಟೆಗೆ ಇವರಿಗೆ ಸ್ಕೂಟರ್ ನಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಮೂಳೂರು ಗ್ರಾಮದ ಗೋಲ್ಡನ್ ಜನರಲ್ ಸ್ಟೋರ್ ಸಮೀಪ ಮಂಗಳೂರು ಉಡುಪಿ ರಾ.ಹೆ 66 ರಲ್ಲಿ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವಾಗ ರಾತ್ರಿ 09:15 ಗಂಟೆ ಸಮಯಕ್ಕೆ ಕಾಪು ಕಡೆಯಿಂದ ವಿರುದ್ದ ದಿಕ್ಕಿನಲ್ಲಿ ಆರೋಪಿಗಳ ಸ್ಕೂಟರ್ ನಂಬ್ರ KA-19-ET-4150 ಬಂದಿದ್ದು ಅವರುಗಳನ್ನು ನಿಲ್ಲಿಸಿ ವಿಚಾರಿಸಿದಲ್ಲಿ ಸ್ಕೂಟರ್ ಸವಾರ ತನ್ನ ಹೆಸರು ಮೊಹಮ್ಮದ್ ಸಫ್ವಾನ್ (23), ತಂದೆ: ರಫೀಕ್,ವಾಸ: 7 ನೇ ಬ್ಲಾಕ್ ಕೃಷ್ಣಪುರ ಸುರತ್ಕಲ್ ಮಂಗಳೂರು ಎಂದು ಸಹಸವಾರನನ್ನು ತನ್ನ ಹೆಸರು ಆಸ್ಗರ್ ಆಲಿ(39) ತಂದೆ: ಇದಿನಬ್ಬ, ವಾಸ: 7 ನೇ ಬ್ಲಾಕ್, ಕೃಷ್ಣಾಪುರ, ಸುರತ್ಕಲ್ ಮಂಗಳೂರು ಎಂದು ತಿಳಿಸಿದ್ದು ಸ್ಕೂಟರ್ ಪರಿಶೀಲಿಸಿದಲ್ಲಿ ಸ್ಕೂಟರ್ ನ ಸೀಟಿನ ಕೆಳಭಾಗದಲ್ಲಿ 7 ಪ್ಲಾಸ್ಟಿಕ್ ಕವರನಲ್ಲಿ ಮಾಂಸಗಳಿದ್ದು ಸದ್ರಿ ಮಾಂಸದ ಬಗ್ಗೆ ವಿಚಾರಿಸಿದಲ್ಲಿ ದನದ ಮಾಂಸವೆಂದು ತಿಳಿಸಿದ್ದು, ಮಾಂಸ ಸಾಗಾಟ ಬಗ್ಗೆ ಪರವಾನಿಗೆ ಇದೆಯೇ ಎಂದು ವಿಚಾರಿಸಿದಲ್ಲಿ ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿ, ದನದ ಮಾಂಸ ಸಾಗಾಟಕ್ಕೆ ಬಳಸಿದ ಸ್ಕೂಟರ್ ಒಂದೊಂದು ಕೆಜಿಯ 07 ಪ್ಲಾಸ್ಟಿಕ್ ಕವರ್ ಗಳಲ್ಲಿದ್ದ 07 ಕೆ.ಜಿ. ದನದ ಮಾಂಸವನ್ನು ಸ್ವಾಧೀನ ಪಡಿಸಿಕೊಂಡಿದ್ದು ಆರೋಪಿಗಳು ಕೋವಿದ್-19 (ಕರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಲಾಕ್ ಡೌನ್ ಆದೇಶ ಇದ್ದು ಯಾವುದೇ ಸಕಾರಣವಿಲ್ಲದೇ ಸಂಚರಿಸದಂತೆ ಸರಕಾರದ ಆದೇಶ ಇದ್ದರೂ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವಿಷಯ ತಿಳಿದು ಸ್ಕೂಟರ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2020 ಕಲಂ: 269 ಐಪಿಸಿ., ಕಲಂ 11 ಕರ್ನಾಟಕ ಗೋಹತ್ಯಾ ಪ್ರತಿಬಂಧಕ ಮತ್ತು ಜನುವಾರು ಸಂರಕ್ಷಣಾ ಕಾಯ್ದೆ 1964 ಮತ್ತು ಸೆಕ್ಷನ್ 66 ಜೊತೆಗೆ 192(ಎ) ಐ.ಎಮ್.ವಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…