ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಮಾರಿಗುಡಿ ಸಂಜೆ ಎರಡು ದೇವಸ್ಥಾನದಲ್ಲಿ ಕಾಲಾವಧಿ ‘ಸುಗ್ಗಿ ಮಾರಿಪೂಜೆ, ಬುಧವಾರ ಸಮಾಪನಗೊಂಡಿದ್ದು, ದಿನಗಳಲ್ಲಿ ಸುಮಾರು 30 ಕೋ.ರೂ. ಗಳಿಗೂ ಮಿಕ್ಕ ಆರ್ಥಿಕ ವಹಿವಾಟು ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಾಪು ಸುಗ್ಗಿ ಮಾರಿಪೂಜೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಶಿವಮೊಗ್ಗ ಚಿಕ್ಕಮಗಳೂರು, ಉತ್ತರ ಕನ್ನಡ, ಕಾಸರಗೋಡು, ಮಹಾರಾಷ್ಟ್ರ ಮತ್ತು ಬೆಂಗಳೂರು ಸೇರಿದಂತೆ ಲಕ್ಷಾಂತರ ವಿವಿಧೆಡೆಗಳಿಂದ ಭಕ್ತರು ದೇವಿಯ ದರ್ಶನ ಪಡೆದು ವಿವಿಧ ಹರಕೆ – ಸೇವೆಗಳನ್ನು ಸಮರ್ಪಿಸಿದ್ದಾರೆ.
ನೂರಾರು ಸಂತೆ ಅಂಗಡಿಗಳು, ಮಳಿಗೆಗಳು ತೆರೆದಿದ್ದು ಭರ್ಜರಿ ವ್ಯಾಪಾರ ನಡೆದಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೆ ವಿವಿಧ ಹರಕೆ ಸೇವೆಗಳ ಮೂಲಕ 30 ಕೋ.ರೂ. ವರೆಗಿನ ಆರ್ಥಿಕ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ.
50 ಸಾವಿರಕ್ಕೂ ಗದ್ದಿಗೆ ಪೂಜೆ ಸೇವೆ
ಮೂರೂ ಮಾರಿಗುಡಿಗಳಲ್ಲಿ ಗದ್ದುಗೆ ಪೂಜೆ ವಿಶೇಷ ಸೇವೆಯಾಗಿದ್ದು, ಭಕ್ತರು ಸುಮಾರು 50 ಸಾವಿರಕ್ಕೂ ಅಧಿಕ ಗದ್ದುಗೆ ಪೂಜೆ ಸೇವೆಯನ್ನು ದೇವಿಗೆ ಸಮರ್ಪಿಸಿದ್ದಾರೆ.
ಸುಮಾರು 15 ಸಾವಿರಕ್ಕೂ ಅಧಿಕಸಾವಿರಕ್ಕೂ ಅಧಿಕ ಹೂವಿನ ಪೂಜೆ ಕುಂಕುಮಾರ್ಚನೆ ಸೇವೆ ಮತ್ತು 8 ಸೇವೆಗಳು ಸಮರ್ಪಣೆಗೊಂಡಿವೆ.
ಮೂರೂ ಮಾರಿಗುಡಿಗಳಲ್ಲಿ ಸ್ವಯಂ ಸೇವಕರ ಸೇವೆಯಿಂದ ಭಕ್ತರು ತೊಂದರೆಯಿಲ್ಲದೆ ದೇವರ ದರ್ಶನ ಪಡೆದರು. ವಿವಿಧೆಡೆ ಸಿಸಿ ಕೆಮರಾ ಕಣ್ಣಾವಲು, ಟ್ರಾಫಿಕ್ ಮತ್ತು ಜನಸಂದಣಿಯ ನಿಯಂತ್ರಣಕ್ಕಾಗಿ ಚೆಕ್ ಪೋಸ್ಟ್ಗಳನ್ನು ಅಳವಡಿಸಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪುರಸಭೆ ಅಧಿಕಾರಿಗಳು, ಸಿಬಂದಿ ಮತ್ತು ಪೌರಕಾರ್ಮಿಕರು ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸಿದ್ದು ಸಾರ್ವಜನಿಕರಿಂದ ಮತ್ತು ವ್ಯಾಪಾರಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ : 11 ಮಂದಿ ಸಾವು ಥಾಣೆ: ವ್ಯಾನ್ ಹಾಗೂ…
ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು ಮೀನುಗಳ ಕೊರತೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಮೀನುಗಾರರು ಮಂಗಳೂರು(ದಕ್ಷಿಣ ಕನ್ನಡ):…
ಹಿರಿಯ ಶಾಸಕರು ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ : ಪರಮೇಶ್ವರ್ ಬೆಂಗಳೂರು: ಅದೇನು ಗ್ಯಾಂಬ್ಲಿಂಗ್ ಅಲ್ಲ, ಹಿರಿಯ ಶಾಸಕರು ಸಚಿವ…
ಕಾರ್ಕಳ : ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ: ಡಾ.ಎಂ.ಎನ್.ರಾಜೇಂದ್ರಕುಮಾರ್ 82.37 ಕೋಟಿ ರೂ.ನೆರವಿಗೆ ಸರಕಾರಕ್ಕೆ ಮನವಿ: ಡಾ.ಎಂಎನ್ಆರ್ ಕಾರ್ಕಳ: ಕಾರ್ಕಳದ…
ಮೂಡುಬಿದಿರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ; ಎಂಟು ದನಗಳ ರಕ್ಷಣೆ, ಎರಡು ವಾಹನ ವಶ ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ…
ರಾಜ್ಯದ ಹಲವೆಡೆ ಇಂದು, ನಾಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ : ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ ಹಲವೆಡೆ ಇಂದು…