ಇತ್ತೀಚೆಗೆ ನವೀಕೃತಗೊಂಡು ದೇಶ-ವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಹೊಸ ಮಾರಿಗುಡಿಯ ವ್ಯವಸ್ಥಾಪನ ಸಮಿತಿಯು ಮಾಜಿ ಸಚಿವರ ಶಿಫಾರಸ್ಸಿನ ಮೇರೆಗೆ ಆಯ್ಕೆಗೊಂಡಿರುತ್ತದೆ. ಸದ್ರಿ ಸಮಿತಿಯಲ್ಲಿ ಆಯ್ಕೆಗೊಂಡ ಮೊಗವೀರ ಸಮುದಾಯದ ಶ್ರೀಧರ್ ಕಾಂಚನ್ರವರ ಅಕಾಲಿಕ ನಿಧನದಿಂದ ಈ ಸ್ಥಾನ ತೆರವುಗೊಂಡಿರುತ್ತದೆ. ಸದ್ರಿ ಸ್ಥಾನಕ್ಕೆ ಮೊಗವೀರ ಸಮಾಜ ಬಾಂಧವರನ್ನೇ ಆಯ್ಕೆ ಮಾಡದೆ ಆಡಳಿತ ಪಕ್ಷದ ಮಾಜಿ ಸಚಿವರಿಂದ ಅನ್ಯಾಯವಾಗಿರುತ್ತದೆ.
ಈ ಸಂಬಂಧ ಪಕ್ಷಾಂತರಿಯಾದಂತಹ ಕಿರಣ್ ಕುಮಾರ್ರವರು ಸ್ಥಳೀಯ ಜನಪ್ರತಿನಿಧಿಯಿಂದ ಮೊಗವೀರರ ಅವಗಣನೆ ಎಂದು ಬಾಲಿಷ ಹೇಳಿಕೆ ನೀಡಿರುತ್ತಾರೆ. ಮಾಜಿ ಸಚಿವರು ಕ್ಷೇತ್ರದ ಎ, ಬಿ, ಸಿ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ತನ್ನ ಹಿಂಬಾಲಕರನ್ನೇ ಆಯ್ಕೆ ಮಾಡಿ ಹಿಂದೂ ದೇವಸ್ಥಾನಗಳಲ್ಲಿ ರಾಜಕೀಯಗೊಳಿಸುತ್ತಿರುವುದು ಈತನಿಗೆ ತಿಳಿದಿಲ್ಲವೇ, ಸದಾ ಪಕ್ಷಾಂತರ ಮಾಡಿಕೊಂಡು ನಾಯಕರ ಓಲೈಕೆ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವ ಈತನಿಗೆ ಸಂಘಟಿತ ಮೊಗವೀರ ಸಮಾಜಕ್ಕೆ ತಪ್ಪು ಅಭಿಪ್ರಾಯ ನೀಡುವುದೇ ಈತನ ಚಾಳಿಯಾಗಿರುತ್ತದೆ.
ರಾಜ್ಯದ ಆಡಳಿತ ಪಕ್ಷದ ಪ್ರತಿನಿಧಿಗಳಿಂದ ಶಿಫಾರಸ್ಸು ಪತ್ರ ನೀಡಿದಲ್ಲಿ ಮಾತ್ರ ಈ ಆಯ್ಕೆ ನಡೆಯುತ್ತದೆ. ಈ ಆಯ್ಕೆ ಮಾಜಿ ಸಚಿವರ ನೇತೃತ್ವದಲ್ಲಿ ನಡೆದಿದ್ದು ಜಗಜಾಹಿರ, ಮೊಗವೀರ ಸಮಾಜ ತನ್ನ ಪ್ರಾತಿನಿಧ್ಯವನ್ನು ಕೇಳಿಕೊಂಡಾಗ ಈ ರೀತಿ ಪಕ್ಷಾಂತರಿಗಳಿಂದ ಹೇಳಿಕೆ ನೀಡಿಸುತ್ತಿರುವುದು ಹಾಸ್ಯಾಸ್ಪದ. ಕಾಪು ವಿಧಾನಸಭಾ ಕ್ಷೇತ್ರದ ಎಲ್ಲಾ ದೇವಸ್ಥಾನಗಳಲ್ಲಿ ತನ್ನ ಹಿಂಬಾಲಕರನ್ನೇ ಆಯ್ಕೆ ಮಾಡಬೇಕೆಂದು ತಾಕೀತು ಮಾಡುವ ಮಾಜಿ ಸಚಿವರಿಗೆ ಈ ಆಯ್ಕೆ ತನ್ನ ಗಮನಕ್ಕೆ ಬಾರದೆ ತನ್ನದೇ ಪಕ್ಷದ ವಿಧಾನಪರಿಷತ್ ಸದಸ್ಯರೇ ಆಯ್ಕೆ ಮಾಡಿದ್ದಾರೆ ಎಂದು ಹೇಳಿಕೆ ನೀಡುವುದು ತಮ್ಮದೇ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ನಿದರ್ಶನ.
ಸತತ ಎರಡು ಚುನಾವಣೆಯಲ್ಲಿ ಸೋತು ಹತಾಶೆಯಿಂದ ಇನ್ನೂ ಹೊರಬರದ ಮಾಜಿ ಸಚಿವರು ಏನು ಕಿಮ್ಮತ್ತು ಇಲ್ಲದ ಪಕ್ಷಾಂತರಿಗಳಿಂದ ಹೇಳಿಕೆ ನೀಡಿಸುತ್ತಿರುವುದು ಖಂಡನೀಯ. ಎಂದು ನವೀನ್ ಎಸ್.ಕೆ ಬಿಜೆಪಿ ಮಂಡಲ ಕಾಪು ಇವರು ಪತ್ರಿಕಾ ಪ್ರಕಟನೆ ಹೊರಡಿಸಿದ್ದಾರೆ.
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…
ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…
ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…
ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…
13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…