Featured

ಕಾಪು : 21ರ ಹರೆಯದ ಯುವಕನ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ ಗೆ  ಸೈಕಲ್ ಯಾತ್ರೆ – 200 ದಿನದಲ್ಲಿ ಮದೀನಾ ತಲುಪುವ ಗುರಿ – Vishwanews24

21ರ ಹರೆಯದ ಯುವಕನ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ ಗೆ  ಸೈಕಲ್ ಯಾತ್ರೆ ..

200 ದಿನದಲ್ಲಿ ಮದೀನಾ ತಲುಪುವ ಗುರಿ..

ಕಾಪು ತಲುಪಿದ ಹಾಫಿಲ್ ಅಹ್ಮದ್ ಸಾಬಿತ್ ಸೈಕಲ್ ಯಾತ್ರೆ..

ಕಾಪು : ಕರಾವಳಿಯಲ್ಲಿ ಹುಟ್ಟಿ, ಕೇರಳದಲ್ಲಿ ಶಿಕ್ಷಣ ಪಡೆದು, ಆಫ್ರಿಕನ್ ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಕಸನು ಹೊತ್ತಿರುವ 21ರ ಹರೆಯದ ಹಾಫಿಲ್ ಅಹ್ಮದ್ ಸಾಬಿತ್ ಕೇರಳದಿಂದ ಮದೀನಾ ಮತ್ತು ಈಜಿಪ್ಟ್ವರೆಗೆ ಕೈಗೊಂಡಿರುವ ಸೈಕಲ್ ಯಾತ್ರೆ ಕಾಪು ತಾಲೂಕನ್ನು ತಲುಪಿದೆ.

ತನ್ನ ಉನ್ನತ ಶಿಕ್ಷಣಕ್ಕಾಗಿ ಈಜಿಪ್ಟ್ ಅಲ್ ಅಝರ್ ಯುನಿವರ್ಸಿಟಿಗೆ ತೆರಳುವ ಉದ್ದೇಶ ಹೊಂದಿರುವ ಹಾಫಿಲ್ ಅಹ್ಮದ್ ಸಾಬಿತ್ ಸೈಕಲ್ ಯಾತ್ರೆಯ ಮೂಲಕ ಮದೀನಾ ಪಟ್ಟಣಕ್ಕೆ ತಲುಪಿ ಪುವಾದಿಯವರ ಪುಣ್ಯ ಸಮಾದಿಯನ್ನು ಸಂದರ್ಶಿಸುವ ಉದ್ದೇಶವನ್ನೂ ಹೊಂದಿದ್ದಾರೆ. ತನ್ನ ಬಹುದಿನದ ಕನಸನ್ನು ನನಸಾಗಿಸಿಕೊಳ್ಳಲು ಅ.19 ರಂದು ಕೇರಳದ ತಿರುವನಂತಪುರಂನಿಂದ ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿ ಯಾತ್ರೆಯುದ್ಧಕ್ಕೂ ಪ್ರವಾದಿಯವರು ಪುಪಂಚಕ್ಕೆ ಸಾರಿದ ಮಾನವೀಯ ಗುಣಗಳ ಭೋದನೆ, ಆರೋಗ್ಯ ಕಾಪಾಡುವಲ್ಲಿ ಜನರ ಪಾತ್ರ ಇತ್ಯಾದಿ ವಿಚಾರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪಯತ್ನಿಸುತ್ತಿದ್ದಾರೆ.

ಮಂಗಳೂರು ಬಾಂಬ್‌ ಸ್ಫೋಟ : ಹೊಣೆ ಹೊತ್ತುಕೊಂಡ ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ʼ ಹೆಸರಿನ ಸಂಘಟನೆ..

ಕೇರಳದ ತಿರುವನಂತಪುರದಿಂದ ಆರಂಭಗೊಂಡಿರುವ ಸುಮಾರು 200 ದಿನಗಳ ಸೈಕಲ್ ಯಾತ್ರೆಯು ಜಗತ್ತಿನ 2 ಖಂಡಗಳು, 10 ದೇಶಗಳ ಮೂಲಕ ಸುಮಾರು 15,000 ಕಿ.ಮೀ ಧಾಟಿ ಪವಿತ್ರ ಮದೀನಾಕ್ಕೆ ತಲುಪಿ ಅಲ್ಲಿಂದ ಈಜಿಪ್ಟ್ ನತ್ತ ಸಾಗಲಿದೆ. ಸುಮಾರು 200 ದಿನಗಳ ಸೈಕಲ್ ಯಾತ್ರೆಯ ದಾರಿ ಮಧ್ಯದಲ್ಲಿ ಪವಿತ್ರ ಹಜ್ ಹಾಗೂ ಉಮ್ರಾ ಯಾತ್ರೆಯನ್ನೂ ನಡೆಸುವ ಇರಾದೆ ಅವರದ್ದಾಗಿದೆ.

ಭಾರತದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ್, ಹರ್ಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಮಾರ್ಗವಾಗಿ ಪಾಕಿಸ್ತಾನ ತಲುಪಲಿದ್ದು, ಅಲ್ಲಿಂದ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ, ಯುಎಇ, ಒಮಾನ್, ಜೋರ್ಡನ್, ಇಸ್ರೇಲ್ ಮೂಲಕವಾಗಿ ಈಜಿಪ್ಟ್ ತಲುಪಲಿದೆ. ಈ ಹಿಂದೆ ಕೇರಳದಾದ್ಯಂತ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದ ಅದರಿಂದ ಸ್ಫೂರ್ತಿ ಪಡೆದು ಮದೀನಾ ಮತ್ತು ಈಜಿಪ್ಟ್ಗೆ ತೆರಳಲು ನಿರ್ಧರಿದ್ದೇನೆ. ಇದೊಂದು ಆಧ್ಯಾತ್ಮಿಕ ಯಾತ್ರೆಗೆ ಸೀಮಿತಗೊಳ್ಳದೆ ಶೈಕ್ಷಣಿಕ ಹಾಗೂ ಅಧ್ಯಯನ ಯಾತ್ರೆಯೂ ಆಗಿರಲಿದೆ. ಎನ್ನುತ್ತಾರೆ ಹಾಫಿಲ್ ಅಹ್ಮದ್ ಸಾಬಿತ್.

ಕಾಂತಾರ’ ವಿವಾದಾತ್ಮಕ ಹೇಳಿಕೆ .. ಚೇತನ್ ವಿರುದ್ಧದ ಎಫ್.ಐ.ಆರ್ ರದ್ದತಿಗೆ ನಿರಾಕರಿಸಿದ ಹೈಕೋರ್ಟ್ – Vishwanews24

 

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago