ತುಮಕೂರು: ಎತ್ತಿನಹೊಳೆ ಕಾಮಗಾರಿಯ ಬ್ಲಾಸ್ಟಿಂಗ್ ಶಬ್ಧದಿಂದ ಮೂರು ತಿಂಗಳ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣದ ಸಮೀಪದ ಜಂಪೇನಹಳ್ಳಿಯಲ್ಲಿ ನಡೆದಿದೆ. ಅಂತ್ಯಕ್ರಿಯೆ ಮಾಡಿದ ಮಗುವಿನ ಮೃತದೇಹವನ್ನು ಗುಂಡಿಯಿಂದ ತೆಗೆಸಿದ ಅಮಾನವೀಯ ಘಟನೆಯೂ ನಡೆದಿದೆ.
ಜಂಪೇನಹಳ್ಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಎತ್ತಿನಹೊಳೆ ಬ್ರಿಡ್ಜ್ ಕಾಮಗಾರಿ ಕಳೆದ ತಿಂಗಳಿಂದ ನಡೆಯುತ್ತಿದೆ. ಪೈಪ್ ಲೈನ್ ಅಳವಡಿಸಲು ಕಲ್ಲುಬಂಡೆ ಅಡ್ಡವಾದ ಹಿನ್ನಲೆ, ಸ್ಥಳೀಯರಿಗೆ ಮಾಹಿತಿ ನೀಡದೆ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಈ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿಯೇ ಕುಟುಂಬ ವಾಸವಾಗಿತ್ತು. ಸ್ಪೋಟದ ಸದ್ದಿಗೆ 3 ತಿಂಗಳ ಹಸುಗೂಸು ಬೆಳಕು ಇಲ್ಲದಿರುವ ಗುಡಿಸಲು ಮನೆಯಲ್ಲಿಯೇ ಮೃತಪಟ್ಟಿದೆ.
ಸುವರ್ಣ ಮುಖಿ ನದಿಗೆ ಹೊಂದಿಕೊಂಡ ಸ್ಮಶಾನದ ಜಾಗದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಸಲು ಕುಟುಂಬಕ್ಕೆ ಮುಂದಾಗಿದೆ. ಆದರೆ ಅಂತ್ಯಕ್ರಿಯೆ ಮಾಡದಂತೆ ಕುಟುಂಬಕ್ಕೆ ಬೆದರಿಕೆ ಹಾಕಿದ ಆ ಜಾಗದ ಸೆಕ್ಯೂರಿಟಿ ಗಾರ್ಡ್, ಮೂರು ತಿಂಗಳ ಹಸುಗೂಸಿನ ಮೃತ ಮಗುವಿನ ದೇಹವನ್ನು ಗುಂಡಿಯಿಂದ ಹೊರಗಡೆ ತೆಗೆಸಿದ್ದಾರೆ.
ಜಮೀನು-ಮನೆಯೇ ಇಲ್ಲದಿರುವ ದಲಿತ ಕುಟುಂಬ ಮಗುವಿನ ಅಂತ್ಯಕ್ರಿಯೆ ನಡೆಸುತ್ತಿರುವ ವೇಳೆ ಸೆಕ್ಯೂರಿಟಿ ತನ್ನ ಮನುಷ್ಯತ್ವದ ಗುಣವನ್ನೇ ಮರೆತು ತೋರಿಸಿರುವ ದುರ್ವರ್ತನೆಯ ವಿರುದ್ದ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುಷ್ಯತ್ವ ಮರೆತು ಮಾನವಹಕ್ಕು ಉಲ್ಲಂಘನೆ ಮಾಡಿರುವ ಸೆಕ್ಯೂರಿಟಿ ಯ ಜತೆ ಗಾರ್ಮೆಂಟ್ಸ್ ಮಾಲೀಕನ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಗೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು, ಶಾಹಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಗಾರ್ಡ್ ನಿಂದ ಅಮಾನವೀಯ ದುರ್ಘಟನೆ ನಡೆದಿದೆ. ಬ್ಲಾಸ್ಟಿಂಗ್ ನಿಂದ ಮಗು ಮೃತ ಪಟ್ಟಿದೆ ಎಂಬುದರ ಬಗ್ಗೆ ಪೋಷಕರಿಂದ ಮಾಹಿತಿ ಪಡೆಯಲಾಗಿದೆ. ಸುವರ್ಣಮುಖಿ ನದಿ ಮತ್ತು ರಾಜಕಾಲುವೆ ಒತ್ತುವರಿಯ ಬಗ್ಗೆ ತಕ್ಷಣ ಸರ್ವೆಗೆ ಸೂಚಿಸಿದ್ದೇನೆ. ಸ್ಮಶಾನ ಜಾಗ ಗುರುತಿಸಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಬಗ್ಗೆ ನೊಂದು ನುಡಿಯುವ ಮೃತ ಮಗುವಿನ ತಾಯಿ ನೇತ್ರಾವತಿ, ಜಂಪೇನಹಳ್ಳಿಯಲ್ಲಿ ನಮಗೆ ಸ್ವಂತ ಮನೆಯೇ ಇಲ್ಲ ಕತ್ತಲಿನ ಗುಡಿಸಲೇ ನಮ್ಮ ಮನೆ. ಬ್ಲಾಸ್ಟಿಂಗ್ ಶಬ್ದದಿಂದ ನನ್ನ ಮಗು ಬೆಚ್ಚಿ ಬಿದ್ದು ಮೃತಪಟ್ಟಿದೆ. ಅಂತ್ಯಕ್ರಿಯೆ ವೇಳೆ ಗುಂಡಿಯಿಂದ ಮಗುವನ್ನು ಬಲವಂತವಾಗಿ ಶಾಹಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಗಾರ್ಡ್ ಹೊರಗಡೆ ತೆಗೆಸಿದಿದ್ದಾರೆ. ನಮಗೆ ಓದು ಬರಹ ಗೊತ್ತಿಲ್ಲ ನಮ್ಮ ನೋವು ಕೇಳೋರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.
ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…
ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]