ಕಾರ್ಕಳ: ಹೌದು ಕಾರ್ಕಳದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕಾಂಗ್ರೇಸ್ ಟಿಕೆಟ್ ಕಡೆಗೂ ಮಾಜಿ ಶಾಸಕ ಗೋಪಾಲ ಭಂಢಾರಿ ಮುಡಿಗೇರಿದೆ. ಆದರೆ ಈ ಸಲದ ಮಟ್ಟಿಗೆ ಮಾತ್ರ ಈಡೀ ಯುವ ಸಮಾಜ ಗೋಪಾಲ ಭಂಡಾರಿ ಬದಲು ಉದಯ್ ಶೆಟ್ಟಿ ಬೆನ್ನ ಹಿಂದೆ ನಿಂತಿದೆ. ಕಾರ್ಕಳ ಕಾಂಗ್ರೇಸ್ನಲ್ಲಿ ತಲ್ಲಣಮೂಡಿಸಿದ್ದ ಉದಯ್ ಶೆಟ್ಟಿ ಗೆ ಟಿಕೆಟ್ ಸಿಗುವುದು ಖಚಿತವೆನ್ನುವಷ್ಟು ಕಾರ್ಯಕರ್ತರು ಹುಮ್ಮಸಿನಲ್ಲಿದರು ಅದರೆ ಶೆಟ್ರಿಗೆ ಟಿಕೆಟ್ ಮಿಸ್ ಆಗಿರುವುದು ಬೆಂಬಲಿಗರ ಅಸವiಧಾನಕ್ಕೆ ಕಾರಣವಾಗಿದೆ.
ಗೋಪಾಲ ಭಂಡಾರಿ ಕಳೆದೆರಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರೂ ಕೂಡ ಮತ್ತೆ ಈ ಸಲದ ಟಿಕೆಟ್ ಗೋಪಾಲರಿಗೆ ನೀಡಿರುವುದು ಕಾಂಗ್ರೇಸ್ ತನ್ನ ಸೋಲನ್ನ ತಾನೇ ಒಪ್ಪಿಕೊಂಡಂತೆ ಎಂಬ ಮಾತು ಕೇಳಿ ಬರುತ್ತಿದೆ.
ಮುನಿಯಾಲ್ ಹವಾ
ಹೌದು ಮೂರು ನಾಲ್ಕು ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಪ್ರತಿಯೊಂದು ಮನೆ ಮನೆಯಲ್ಲೂ ಉದಯ್ ಶೆಟ್ಟಿ ಹೆಸರನ್ನ ಅಚ್ಚು ಹಾಕಿ ಬಂದವರು, ಯುವ ಸಮುದಾಯವಂತೂ ಉದಯ್ ಶೆಟ್ಟಿಯ ಬೆನ್ನೆಲುಬಾಗಿ ಸಹಕರಿಸುತ್ತಿದ್ದು ಮಾತ್ರವಲ್ಲದೆ, ಮನೆಮನೆ ಕಾಂಗ್ರೇಸ್ ಅಭಿಯಾನದಲ್ಲಿ ಮುಂಚೂನಿಯಲ್ಲಿ ಕಾರ್ಯ ನಿರ್ವಹಿಸಿದ ಶೆಟ್ಟಿ ಅಶಕ್ತರ, ಧೀನ ದಲಿತರ,ಬಡವರ ಪರ ತೋರುತ್ತಿದ್ದ ಕಾಳಜಿ ಶಾಲಾ ಮಕ್ಕಳಿಗೆ ಸಹಾಯಧನ ವಿತರಣೆ, ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದುದು ಜನ ಮೆಚ್ಚುವಂತಿತ್ತು.
ಶೆಟ್ರು ಬಂಡಾಯ ಅಭ್ಯರ್ಥಿಯಾದರೇ, ಭಂಡಾರಿ ಸೋಲು
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ 24 ರ ಒಳಗಡೆ ಟಿಕೆಟ್ ಗೊಂದಲ ಸರಿ ಮಾಡದೆ ಹೋದಲ್ಲಿ, ಬಲಿಷ್ಟ ಯುವ ಪಡೆಯನ್ನ ಹೊಂದಿರುವ ಮತ್ತು ಆರ್ಥಿಕ-ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಉದಯ್ ಶೆಟ್ಟಿ ಬೆಂಬಲಿಗರ ಒತ್ತಾಯಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾರ್ಕಳದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ಉದಯ್ ಮತ್ತು ಸುನಿಲ್ ಕುಮಾರ್ ಎದುರಿಗೆ ಡೆಪಾಸಿಟ್ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಕೂಡ ಕಾರ್ಕಳ ವಲಯದಿಂದ ಕೇಳಿಬರುತ್ತಿದೆ.
ಸುನೀಲ್ ಎದುರಿಸಲು ಉದಯ್ ಶೆಟ್ಟಿ ಫಿಟ್
ಹೌದು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಪ್ರಸ್ತುತ ಶಾಸಕರಾಗಿರುವುದರಿಂದ ಅವರ ಹವಾ ಜೋರಾಗಿಯೇ ಇದೆ , ಆದರೇ ಸುನಿಲ್ ಕುಮಾರನನ್ನು ಎದುರಿಸಲು ಸರಿಯಾದ ಅಭ್ಯರ್ಥಿ ಉದಯ್ ಶೆಟ್ಟಿ ಎಂಬ ಮಾತು ಹೊರವಲಯದಿಂದ ಕೇಳಿಬರುತ್ತಿದೆ.
ಬಿಜೆಪಿ ಅಭ್ಯರ್ಥಿ ಸುನಿಲ್ಗೆ ಇರುವಷ್ಟೇ ಬೆಂಬಲಿಗರು ಕಾರ್ಕಳದಲ್ಲಿ ಉದಯ್ ಶೆಟ್ಟಿ ಬೆನ್ನ ಹಿಂದೆ ಇರುವುದು ಇವರಿಗೆ ವರದಾನವಾಗಿದೆ.
ಬಂಟ್ವಾಳ : ಸೀಮಂತ ಕಾರ್ಯಕ್ರಮ ಮುಗಿಸಿ ಬರುವಾಗ ಮಿನಿ ಬಸ್ ಪಲ್ಟಿ ; ಪ್ರಯಾಣಿಕ ಸಾವು ಬಂಟ್ವಾಳ : ಸೀಮಂತ…
ಬಾಂಗ್ಲಾದ 4,800 ಅಕ್ರಮ ವಲಸಿಗರು ಗಡಿಪಾರು : ಸುವೇಂದು ಅಧಿಕಾರಿ ಕೋಲ್ಕತ್ತಾ,: ಬಾಂಗ್ಲಾದೇಶದ 4,800 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ…
ಕೇರಳಕ್ಕೆ ಇಂದು ಮುಂಗಾರು ಪ್ರವೇಶ : ಇನ್ನೆರೆಡು ದಿನದಲ್ಲಿ ಕರ್ನಾಟಕಕ್ಕೆ ಭಾರೀ ಮಳೆಯ ಮುನ್ಸೂಚನೆ ಬೆಂಗಳೂರು: ಕೇರಳಕ್ಕೆ ಇಂದು (ಜೂ.4)…
ಉಡುಪಿ : ಜೂ. 6 ರಂದು ನೇರ ಸಂದರ್ಶನ ಡುಪಿ: ಉಡುಪಿಯ ಉದ್ಯಾವರದ ಐ.ಒ.ಸಿ.ಎಲ್ ಪೆಟ್ರೋಲ್ ಬಂಕ್ ಬಳಿಯ ಅರವಿಂದ್…
ಕರ್ನಾಟಕವನ್ನ ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ : ಡಿಕೆಶಿಗೆ ಸೋನಿಯಾ ಗಾಂಧಿ ಶುಭ ಹಾರೈಕೆ ಹೊಸ ಜವಾಬ್ದಾರಿಯನ್ನ…
ಡಿ.ಕೆ.ಶಿವಕುಮಾರ್ ಸಿಎಂ : ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ : ಕೆ. ಕೃಷ್ಣಮೂರ್ತಿ ಆಚಾರ್ಯ ಉಡುಪಿ: ಕಾಂಗ್ರೆಸ್…