ಉಡುಪಿ

ಕಾರ್ಕಳದಲ್ಲಿ ಮುನಿಯಾಲು ಬಂಡಾಯ ಅಭ್ಯರ್ಥಿಯಾದರೇ ಭಂಡಾರಿಗೆ ಸೋಲು ಕಟ್ಟಿಟ್ಟ ಬುತ್ತಿ..!

ಕಾರ್ಕಳ: ಹೌದು ಕಾರ್ಕಳದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕಾಂಗ್ರೇಸ್ ಟಿಕೆಟ್ ಕಡೆಗೂ ಮಾಜಿ ಶಾಸಕ ಗೋಪಾಲ ಭಂಢಾರಿ ಮುಡಿಗೇರಿದೆ. ಆದರೆ ಈ ಸಲದ ಮಟ್ಟಿಗೆ ಮಾತ್ರ ಈಡೀ ಯುವ ಸಮಾಜ ಗೋಪಾಲ ಭಂಡಾರಿ ಬದಲು ಉದಯ್ ಶೆಟ್ಟಿ ಬೆನ್ನ ಹಿಂದೆ ನಿಂತಿದೆ. ಕಾರ್ಕಳ ಕಾಂಗ್ರೇಸ್‍ನಲ್ಲಿ ತಲ್ಲಣಮೂಡಿಸಿದ್ದ ಉದಯ್ ಶೆಟ್ಟಿ ಗೆ ಟಿಕೆಟ್ ಸಿಗುವುದು ಖಚಿತವೆನ್ನುವಷ್ಟು ಕಾರ್ಯಕರ್ತರು ಹುಮ್ಮಸಿನಲ್ಲಿದರು ಅದರೆ ಶೆಟ್ರಿಗೆ ಟಿಕೆಟ್ ಮಿಸ್ ಆಗಿರುವುದು ಬೆಂಬಲಿಗರ ಅಸವiಧಾನಕ್ಕೆ ಕಾರಣವಾಗಿದೆ.
ಗೋಪಾಲ ಭಂಡಾರಿ ಕಳೆದೆರಡು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರೂ ಕೂಡ ಮತ್ತೆ ಈ ಸಲದ ಟಿಕೆಟ್ ಗೋಪಾಲರಿಗೆ ನೀಡಿರುವುದು ಕಾಂಗ್ರೇಸ್ ತನ್ನ ಸೋಲನ್ನ ತಾನೇ ಒಪ್ಪಿಕೊಂಡಂತೆ ಎಂಬ ಮಾತು ಕೇಳಿ ಬರುತ್ತಿದೆ.


ಮುನಿಯಾಲ್ ಹವಾ
ಹೌದು ಮೂರು ನಾಲ್ಕು ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಪ್ರತಿಯೊಂದು ಮನೆ ಮನೆಯಲ್ಲೂ ಉದಯ್ ಶೆಟ್ಟಿ ಹೆಸರನ್ನ ಅಚ್ಚು ಹಾಕಿ ಬಂದವರು, ಯುವ ಸಮುದಾಯವಂತೂ ಉದಯ್ ಶೆಟ್ಟಿಯ ಬೆನ್ನೆಲುಬಾಗಿ ಸಹಕರಿಸುತ್ತಿದ್ದು ಮಾತ್ರವಲ್ಲದೆ, ಮನೆಮನೆ ಕಾಂಗ್ರೇಸ್ ಅಭಿಯಾನದಲ್ಲಿ ಮುಂಚೂನಿಯಲ್ಲಿ ಕಾರ್ಯ ನಿರ್ವಹಿಸಿದ ಶೆಟ್ಟಿ ಅಶಕ್ತರ, ಧೀನ ದಲಿತರ,ಬಡವರ ಪರ ತೋರುತ್ತಿದ್ದ ಕಾಳಜಿ ಶಾಲಾ ಮಕ್ಕಳಿಗೆ ಸಹಾಯಧನ ವಿತರಣೆ, ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ಸಹಕರಿಸುತ್ತಿದ್ದುದು ಜನ ಮೆಚ್ಚುವಂತಿತ್ತು.

 

ಶೆಟ್ರು ಬಂಡಾಯ ಅಭ್ಯರ್ಥಿಯಾದರೇ, ಭಂಡಾರಿ ಸೋಲು
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ 24 ರ ಒಳಗಡೆ ಟಿಕೆಟ್ ಗೊಂದಲ ಸರಿ ಮಾಡದೆ ಹೋದಲ್ಲಿ, ಬಲಿಷ್ಟ ಯುವ ಪಡೆಯನ್ನ ಹೊಂದಿರುವ ಮತ್ತು ಆರ್ಥಿಕ-ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಉದಯ್ ಶೆಟ್ಟಿ ಬೆಂಬಲಿಗರ ಒತ್ತಾಯಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಕಾರ್ಕಳದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ಉದಯ್ ಮತ್ತು ಸುನಿಲ್ ಕುಮಾರ್ ಎದುರಿಗೆ ಡೆಪಾಸಿಟ್ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಕೂಡ ಕಾರ್ಕಳ ವಲಯದಿಂದ ಕೇಳಿಬರುತ್ತಿದೆ.

 

ಸುನೀಲ್ ಎದುರಿಸಲು ಉದಯ್ ಶೆಟ್ಟಿ ಫಿಟ್
ಹೌದು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುನೀಲ್ ಕುಮಾರ್ ಪ್ರಸ್ತುತ ಶಾಸಕರಾಗಿರುವುದರಿಂದ ಅವರ ಹವಾ ಜೋರಾಗಿಯೇ ಇದೆ , ಆದರೇ ಸುನಿಲ್ ಕುಮಾರನನ್ನು ಎದುರಿಸಲು ಸರಿಯಾದ ಅಭ್ಯರ್ಥಿ ಉದಯ್ ಶೆಟ್ಟಿ ಎಂಬ ಮಾತು ಹೊರವಲಯದಿಂದ ಕೇಳಿಬರುತ್ತಿದೆ.
ಬಿಜೆಪಿ ಅಭ್ಯರ್ಥಿ ಸುನಿಲ್‍ಗೆ ಇರುವಷ್ಟೇ ಬೆಂಬಲಿಗರು ಕಾರ್ಕಳದಲ್ಲಿ ಉದಯ್ ಶೆಟ್ಟಿ ಬೆನ್ನ ಹಿಂದೆ ಇರುವುದು ಇವರಿಗೆ ವರದಾನವಾಗಿದೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago