ಉಡುಪಿ,: ಇದೇ ಮೊದಲ ಬಾರಿಗೆ ಕಾರ್ಕಳದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ (49) ಅವರು ಒಟ್ಟು 38.43 ಕೋಟಿ ರೂ. ಘೋಷಿತ ಆದಾಯ ಹೊಂದಿದ್ದಾರೆ.
ಉದಯ ಕುಮಾರ್ ಶೆಟ್ಟಿ ಅವರು 31.83 ಕೋಟಿ ರೂ. ಚರಾಸ್ಥಿಯನ್ನು ಹೊಂದಿದ್ದರೆ, 6.60 ಕೋಟಿ ರೂ. ಸ್ಥಿರಾಸ್ಥಿಯನ್ನು ಸಹ ಹೊಂದಿದ್ದಾರೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದಾವತ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಅವರು 7.45 ಕೋಟಿ ರೂ. ಸಾಲವನ್ನು ಸಹ ಹೊಂದಿದ್ದಾರೆ.
ಉದಯ ಅವರ ಪತ್ನಿ ಅವರ ಒಟ್ಟು ಆದಾಯ 24.16 ಕೋಟಿ ರೂ. ಆಗಿದ್ದು, ಇದರಲ್ಲಿ ಚರಾಸ್ಥಿ ಮೌಲ್ಯ 12.28 ಕೋಟಿ ರೂ. ಆದರೆ, ಸ್ಥಿರಾಸ್ಥಿ ಮೌಲ್ಯ 11.88 ಕೋಟಿ ರೂ.ಗಳಾಗಿವೆ. ಇದರೊಂದಿಗೆ ಪತ್ನಿ ಹೆಸರಿನಲ್ಲಿ 2.94 ಕೋಟಿ ರೂ. ಸಾಲವೂ ಇದೆ. ಉದಯ ಶೆಟ್ಟಿ ಅವರ ಇಬ್ಬರು ಅವಲಂಬಿತ ಮಕ್ಕಳ ಹೆಸರಿನಲ್ಲಿ 45.29 ಲಕ್ಷ ಹಾಗೂ 31.96 ಲಕ್ಷ ರೂ. ಆದಾಯವನ್ನು ತೋರಿಸಲಾಗಿದೆ.
ಸರಕಾರದಿಂದ ಬಾಕಿ 26 ಕೋಟಿ ರೂ. ಪಿಡಬ್ಲ್ಯುಡಿಯಲ್ಲಿ ಕ್ಲಾಸ್ 1 ಗುತ್ತಿಗೆದಾರರಾಗಿರುವ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾದ ಸಾಲದ ಮೊತ್ತ 26.15 ಕೋಟಿ ರೂ. ಎಂದು ತೋರಿಸಲಾಗಿದೆ.
ಈ ಸಾಲ 2013-14ನೇ ಸಾಲಿನಿಂದ 2019-20ರವೆರೆಗೆ ಉದಯ ಶೆಟ್ಟಿ ಅವರು ಮಾಡಿದ ಸರಕಾರದ ಕಾಮಗಾರಿಗೆ ನೀಡಬೇಕಾದ ಗುತ್ತಿಗೆ ಮೊತ್ತವಾಗಿದೆ. 2013-14ರಲ್ಲಿ 22.95ಲಕ್ಷರೂ., 2014-15ರಲ್ಲಿ 1.40 ಕೋಟಿ ರೂ., 2015-16ರಲ್ಲಿ 53.98ಲಕ್ಷ ರೂ., 2016-17ರಲ್ಲಿ 49.49 ಲಕ್ಷ ರೂ., 2017-18ರಲ್ಲಿ 14.54 ಕೋಟಿ ರೂ., 2018- 19ರಲ್ಲಿ 8.72 ಕೋಟಿ ರೂ. ಹಾಗೂ 2019-20ರಲ್ಲಿ 21.96 ಲಕ್ಷ ರೂ. ಗುತ್ತಿಗೆ ಬಾಕಿ ಉದಯ ಶೆಟ್ಟಿ ಅವರಿಗೆ ಸರಕಾರದಿಂದ ಬರಬೇಕಾಗಿದೆ. ಈ ಸಾಲವನ್ನು ವಿವಾದಿತ ಸಾಲ ಎಂದು ಕರೆಯಲಾಗಿದೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ : ಶಾಕ್ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…