Featured

ಕಾರ್ಕಳ: ಗೋಕಳ್ಳರನ್ನುಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿ ಮುಂದೆ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ : ಯೋಗೀಶ್ ಆಚಾರ್ಯ ಇನ್ನಾ – Vishwanews24

ಕಾರ್ಕಳ: ಗೋಕಳ್ಳರನ್ನುಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿ ಮುಂದೆ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ : ಯೋಗೀಶ್ ಆಚಾರ್ಯ ಇನ್ನಾ – Vishwanews24

ಕಾರ್ಕಳ: ಗೋಕಳ್ಳತನದ ಕಳ್ಳರನ್ನು ಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿಯ ಮುಂಬಾಗದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ ಎಚ್ಚರಿಕೆ ನೀಡಿದ್ದಾರೆ

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾರ್ಕಳ ನಗರದಿಂದ ಕೆಲವೇ ಕಿಲೋಮೀಟರ್ ದೂರದ ಕರಿಯಕಲ್ಲು ಎಂಬಲ್ಲಿನ ಯಶೋದಾ ಆಚಾರ್ಯ ಎನ್ನುವವರ ಹಟ್ಟಿಗೆ ನುಗ್ಗಿ 16 ಹಸುಗಳನ್ನು ಕಳ್ಳತನ ಮಾಡಲಾಗಿದ್ದು ಹೈನುಹಾರಿಕೆಯನ್ನೇ ಜೀವನಾಧಾರವಾಗಿ ನಂಬಿಕೊಂಡಿದ್ದ ಬಡ ಕುಟುಂಬವು ಇಂದು ದನಕಳ್ಳರ ಹಾವಳಿಯಿಂದಾಗಿ ದಿಕ್ಕು ತೋಚದಂತಾಗಿದೆ. ಯಶೋದಾ ಆಚಾರ್ಯರ ಮನೆಯ ಗೋಕಳ್ಳತನ ಪ್ರಕರಣವು ಬೆಳಕಿಗೆ ಬಂದ ಮರುದಿನವೇ ನಿಟ್ಟೆ ಸಮೀಪದ ಲೆಮಿನಾ ಕ್ರಾಸಿನ ರಾಜೇಶ್ ಆಚಾರ್ಯ ಎನ್ನುವವರ ಮನೆಯ ಹಟ್ಟಿಯಿಂದಲೂ 14 ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಕಾರ್ಕಳ ಕ್ಷೇತ್ರವೊಂದರಲ್ಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಸುಮಾರು 2000 ಸಾವಿರಕ್ಕೂ ಮಿಕ್ಕಿ ಹೈನುಗಾರರ ಗೋವುಗಳನ್ನು ಹಟ್ಟಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರವಿರುವಾಗ ದೇಶದ ಯಾವುದೇ ಮೂಲೆಯಲ್ಲಿ ಗೋಕಳ್ಳತನ ನಡೆದರೂ ವಿರಾವೇಷದ ಭಾಷಣ ಬಿಗಿಯುವ ಸುನೀಲ್ ಕುಮಾರ್ ಅವರು ತನ್ನದೇ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದರೂ ಮೌವಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ, ಗೋಕಳ್ಳರಿಗೆ ಪರೋಕ್ಷವಾಗಿ ಸಚಿವ ಸುನೀಲ್ ಕುಮಾರ್ ಅವರೇ ಬೆಂಬಲಿಸುತ್ತಿದ್ದಾರೆಯೇ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಸುನೀಲ್ ಕುಮಾರ್ ಅವರ ಮೌನವೂ ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಕಾರ್ಕಳದ ನಿಟ್ಟೆ, ಪಳ್ಳಿ, ಬೈಲೂರು, ಬೆಳ್ಮಣ್, ರೆಂಜಾಳ, ಇರ್ವತ್ತೂರು, ಬಜಗೋಳಿ, ಮಿಯ್ಯಾರು, ಹೆಬ್ರಿ, ಅಜೆಕಾರು ಮುಂತಾದೆಡೆ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದ ಸಚಿವರಾದ ಸುನೀಲ್ ಕುಮಾರ್ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ. ಗೋವಿನ ಹೆಸರಿನಲ್ಲಿ ಅಧಿಕಾರವನ್ನು ಪಡೆದು ಇಂದು ಗೋವಿನ ರೋಧನವನ್ನು ಕೇಳಿಸದೇ ಆ ಬಗ್ಗೆ ತುಟಿಬಿಚ್ಚದ ಸುನೀಲ್ ಕುಮಾರ್ ಅವರ ನಡೆ ಅಚ್ಚರಿ ಮೂಡಿಸಿದೆ. ಯಶೋದಾ ಅಚಾರ್ಯ ಹಾಗೂ ರಾಜೇಶ್ ಅಚಾರ್ಯರ ಮನೆಗಳಿಂದ ಕಳವಾದ 30 ಗೋವುಗಳು ಹಾಗೂ ಕಾರ್ಕಳದ ಇನ್ನಿತರ ಭಾಗಗಳಲ್ಲಿ ನಡೆದ ಗೋಕಳ್ಳತನದ ಕಳ್ಳರನ್ನು ಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿಯ ಮುಂಬಾಗದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

20 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago