Featured

ಕಾರ್ಕಳ: ಫೆ. 11ರಂದು ಅತ್ತೂರು ಪರ್ಪಲೆ ಗಿರಿ ಧರ್ಮ ದೈವಗಳ ಶಿಲಾಮಯ ಗುಡಿಗಳ ಶಿಲಾನ್ಯಾಸ – Vishwanews24

ಕಾರ್ಕಳ: ಫೆ. 11ರಂದು ಅತ್ತೂರು ಪರ್ಪಲೆ ಗಿರಿ ಧರ್ಮ ದೈವಗಳ ಶಿಲಾಮಯ ಗುಡಿಗಳ ಶಿಲಾನ್ಯಾಸ

ಕಾರ್ಕಳ: ಕಾರ್ಕಳ ತಾಲೂಕಿನ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ಕಲ್ಕುಡ , ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಶಿಲಾಮಯ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಫೆ.11 ರವಿವಾರ ಪೂರ್ವಾಹ್ನ 9.58ಕ್ಕೆ ಅತ್ತೂರು ಶ್ರೀ ಕ್ಷೇತ್ರ ಪರ್ಪಲೆಗಿರಿಯಲ್ಲಿ ನಡೆಯಲಿದೆ ಎಂದು ಅತ್ತೂರು ಪರ್ಪಲೆಗಿರಿ ಪುನರುತ್ಥಾನದ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು ಅವರು ಕಾರ್ಕಳ ಪ್ರಕಾಶ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತಿ ಪೀಠದ ಉಡುಪಿಯ ಪೀಠಾಧಿಪತಿಗಳದ ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು. ತುಳುನಾಡಿನ ಪಾರ್ದನಗಳಲ್ಲಿ ಹಾಗೂ ಅಷ್ಟಮಂಗಲ ಪ್ರಶ್ನಾ ಚಿಂತನೆಗಳ ಮೂಲಕ ಈ ಪುಣ್ಯ ಭೂಮಿಯಲ್ಲಿ ದೇವಾಲಯ ಹಾಗೂ ಗುಡಿ ಗೋಪುರಗಳ ನಿರ್ಮಾಣ ಬಗೆಗಿನ ಮಾಹಿತಿ ಹಾಗೂ ಅವಶ್ಯಕತೆ ತಿಳಿದು ಬಂದಿದೆ.

ಇದರ ಬೆನ್ನಲ್ಲೇ ಟ್ರಸ್ಟ್ ನಿರ್ಮಾಣ ಗೊಂಡಿದ್ದು, ಊರವರ ,ದಾನಿಗಳ ಸಹಕಾರದಿಂದ ಮೊದಲ ಹಂತದಲ್ಲಿ‌ ಶಿಲಾಮಯ ಕಲ್ಕುಡ ಕಲ್ಲುರ್ಟಿ, ತೂಕತ್ತೇರಿ ಧರ್ಮದೈವಗಳ ಗುಡಿಯ ಶಿಲಾನ್ಯಾಸ ನೆರವೇರಲಿದೆ. ಎರಡನೇ ಹಂತದಲ್ಲಿ ಗೌರಿ ಶಂಕರ ದೇವಾಲಯವು ನಿರ್ಮಾಣ ಗೊಳ್ಳಲಿದ್ದು ರೂಪುರೇಷೆ ಗಳು ಸಿದ್ಧವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅತ್ತೂರು ಕೃಷ್ಣ ಗಿರಿ ಕಲ್ಕುಡ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ನಿತ್ಯಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ರೋಹಿಣಿ ಸಿಂಧೂರಿ ನೇಮಕ – vishwanews24

ಉಡುಪಿ, ದ. ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ಡಾ. ವಿ. ರಾಮ್ ಪ್ರಸಾತ್ ಮನೋಹರ್, ರೋಹಿಣಿ ಸಿಂಧೂರಿ ನೇಮಕ ಬೆಂಗಳೂರು:…

2 hours ago

ಆ.15ರೊಳಗೆ ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಮಹಾತ್ಮಾ ಗಾಂಧಿ ಹೆಸರು : ಸಚಿವ ಈಶ್ವರ್‌ ಖಂಡ್ರೆ – vishwanews24

ಆ.15ರೊಳಗೆ ರಾಜ್ಯದ ಎಲ್ಲ ಗ್ರಾ.ಪಂ.ಗಳಿಗೆ ಮಹಾತ್ಮಾ ಗಾಂಧಿ ಹೆಸರು : ಸಚಿವ ಈಶ್ವರ್‌ ಖಂಡ್ರೆ ಬೆಂಗಳೂರು : ಆಗಸ್ಟ್ 15ರ…

2 hours ago

ಸಾವಿನಲ್ಲೂ ಸಾರ್ಥಕತೆ: ವೈದ್ಯಕೀಯ ಶಿಕ್ಷಣಕ್ಕಾಗಿ ಮೃತದೇಹ ದಾನ ಮಾಡಿದ ಕುಟುಂಬ – vishwanews24

ಸಾವಿನಲ್ಲೂ ಸಾರ್ಥಕತೆ: ವೈದ್ಯಕೀಯ ಶಿಕ್ಷಣಕ್ಕಾಗಿ ಮೃತದೇಹ ದಾನ ಮಾಡಿದ ಕುಟುಂಬ ಮಂಗಳೂರು: ʼಸಾವಿನ ನಂತರವೂ ಬದುಕಬಹುದು, ಸಮಾಜಕ್ಕೆ ಉಪಕಾರವಾಗುವ ಮೂಲಕʼ…

3 hours ago

ಮಂಗಳೂರು ನಗರ/ ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ – vishwanews24

ಮಂಗಳೂರು ನಗರ/ ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ…

3 hours ago

ಬೆಳ್ತಂಗಡಿ: ಹಾವು ಕಚ್ಚಿ ಬಾಲಕಿ ಗಂಭೀರ – vishwanews24

ಬೆಳ್ತಂಗಡಿ: ಅಂಗನವಾಡಿಯಲ್ಲಿ ಆಟಿಕೆಯ ನಡುವೆ ಅಡಗಿದ್ದ ಹಾವು ಕಚ್ಚಿ ಬಾಲಕಿ ಗಂಭೀರ ಬೆಳ್ತಂಗಡಿ: ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು…

3 hours ago

ವಂಚನೆ ಪ್ರಕರಣ :  ಝೀನತ್ ಜಾಮೀನು ಅರ್ಜಿ ತಿರಸ್ಕೃತ – vishwanews24

ವಂಚನೆ ಪ್ರಕರಣ :  ಝೀನತ್ ಜಾಮೀನು ಅರ್ಜಿ ತಿರಸ್ಕೃತ ಉಡುಪಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿಯ ಝೀನತ್ ಇಬ್ರಾಹಿಂ ಜಾಮೀನಿಗಾಗಿ…

3 hours ago