Featured

ಕಾರ್ಕಳ:  ಬಹುಮಹಡಿ ಕಟ್ಟಡವೇರಿ ಸಾಹಸ ಪ್ರದರ್ಶಿಸಿದ ಜ್ಯೋತಿರಾಜ್‌ – Vishwanews24

ಕಾರ್ಕಳ:  ಬಹುಮಹಡಿ ಕಟ್ಟಡವೇರಿ ಸಾಹಸ ಪ್ರದರ್ಶಿಸಿದ ಜ್ಯೋತಿರಾಜ್‌

ಕಾರ್ಕಳ:  ಭಾರತದ ಮಂಕಿಮ್ಯಾನ್‌ ಎಂಬ ಖ್ಯಾತಿ ಪಡೆದಿರುವ ಜ್ಯೋತಿರಾಜ್‌ ಕಾರ್ಕಳದ ಸಾಲ್ಮರ ಬಳಿಯಿರುವ ಬಹುಮಹಡಿ ಕಟ್ಟಡವೇರುವ ಸಾಹಸವನ್ನು ಬುಧವಾರ ಬೆಳಗ್ಗೆ ಪ್ರದರ್ಶಿಸಿದ್ದರು.

125 ಅಡಿ ಎತ್ತರದ ಕಟ್ಟಡವನ್ನು ಕೇವಲ 10 ನಿಮಿಷಗಳಲ್ಲಿ ಸರಸರನೇ ಹತ್ತಿಳಿದಾಗ ಅಲ್ಲಿದ್ದವರು ನಿಟ್ಟುಸಿರು ಬಿಟ್ಟರು. ಇದನ್ನು ನೋಡಲು 500ಕ್ಕೂ ಅಧಿಕ ಕುತೂಹಲಿಗಳು ನೆರೆದಿದ್ದರು. ಪೊಲೀಸರು ಭದ್ರತೆ ವ್ಯವಸ್ಥೆ ಮಾಡಿ, ವಾಹನಗಳನ್ನು ಏಕಮುಖ ರಸ್ತೆಯಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಟ್ಟಡದ ತುತ್ತತುದಿಯಲ್ಲಿ ಕನ್ನಡ ನಾಡಿನ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಅವರು ಮೆರೆದರು.

ರಾಜ್ಯದೆಲ್ಲೆಡೆ ಸುತ್ತಾಟ ಆರಂಭಿಸಿದ್ದೇನೆ. ಜೋಗ ಜಲಪಾತ ಏರುವಾಗ ಬಿದ್ದು ಗಾಯಗೊಂಡಿದ್ದೆ. ಎರಡು ವರ್ಷಗಳ ಬಳಿಕ ಮತ್ತೆ ಸಾಹಸ ವೃತ್ತಿಗೆ ಮರಳಿದ್ದೇನೆ. ಮೊದಲ ಪ್ರಯತ್ನವಾಗಿ ಬೆಳ್ತಂಗಡಿಯ ಗಡಾಯಿಕಲ್ಲು ಹತ್ತಿಳಿದ ಬಳಿಕ ಕಾರ್ಕಳದ ಸಮೃದ್ಧಿ ಕಟ್ಟಡ ಏರಿದ್ದೇನೆ.

ಅನುಮತಿಗಾಗಿ ಸಚಿವ ವಿ. ಸುನಿಲ್‌ ಕುಮಾರ್‌ ಹಾಗೂ ಉದ್ಯಮಿ ಶ್ರೀನಿವಾಸ್‌ ಕಾಮತ್‌ ಮತ್ತಿತರರು ನೆರವು ನೀಡಿದ್ದಾರೆ. ಬಾಲಾಜಿ ಹೊಟೇಲ್‌ನವರು ಉತ್ತಮ ಆತಿಥ್ಯ ನೀಡಿದರು. ಸಾಹಸ ಪ್ರದರ್ಶಿಸಿ ದೊರಕುವ ಹಣವನ್ನು ಫೌಂಡೇಶನ್‌ ಸ್ಥಾಪಿಸಿ ಬಡ ಮಕ್ಕಳ ನೆರವಿಗೆ ವಿನಿಯೋಗಿಸುವುದಾಗಿ ತಿಳಿಸಿದರು.

ಉದ್ಯಮಿ ನಿತ್ಯಾನಂದ ಪೈ ಜ್ಯೋತಿರಾಜ್‌ ಅವರನ್ನು ಅಭಿನಂದಿಸಿದರು. ಉದ್ಯಮಿ ಬೋಳ ಶ್ರೀನಿವಾಸ್‌ ಕಾಮತ್‌, ಸತೀಶ್‌ ಹೆಗ್ಡೆ ಬೈಲೂರು, ಅವಿನಾಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

4 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

4 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

5 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

5 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

5 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

5 hours ago