Featured

ಕಾರ್ಕಳ: ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ : ಮುನಿಯಾಲು ಉದಯ ಶೆಟ್ಟಿ – Vishwanews24

ಕಾರ್ಕಳ: ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ : ಮುನಿಯಾಲು ಉದಯ ಶೆಟ್ಟಿ

ಕಾರ್ಕಳ: ಪರಶುರಾಮನ ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಪ್ರತಿಮೆಯ ಬಗ್ಗೆ ಸತ್ಯಾಸತ್ಯತೆ ಅಗ್ರಹಿಸಿ ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ನಮ್ಮಿ ತುಳು ನಾಡು ಪರಶುರಾಮರ ಸೃಷ್ಟಿ ಎಂದೇ ಧಾರ್ಮಿಕ ಆಚರಣೆಗಳಲ್ಲಿ ಉಲ್ಲೇಖ ಇವೆ. ಈ ವಿಚಾರಗಳನ್ನು ನಾವೆಲ್ಲರೂ ಭಕ್ತಿ ಭಾವದಿಂದ ನಂಬುತ್ತೇವೆ.

ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಆದಾಗ ಎಲ್ಲರೂ ಸಂತಸ ಪಟ್ಟಿದ್ದರು. ಆದರೆ ಧಾರ್ಮಿಕ ವಿಧಿಗಳನ್ನೆಲ್ಲ ಮಾಡಿದ ಬಳಿಕ ಆ ವಿಗ್ರಹ ಕಂಚಿನದ್ದು ಅಲ್ಲ ಎಂದಾದರೆ ಇದು ಸಮಗ್ರ ತುಳುನಾಡಿಗೆ ಮಾಡುವ ಪರಮ ಅನ್ಯಾಯ. ಇಂತಹ ಧರ್ಮ ವಿರೋಧಿ, ಹಾಗೂ ಧರ್ಮಕ್ಕೆ ಅಪಚಾರ ಆಗುವ ವಿಚಾರಗಳನ್ನು ನಾವು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಈ ವಿಚಾರದಲ್ಲಿ ನಾವೆಲ್ಲರೂ ಸತ್ಯಂಶ ತಿಳಿಯಲಿಕ್ಕಾಗಿ ಸೆಪ್ಟೆಂಬರ್ 3ನೇ ವಾರ ಅತೀ ಶೀಘ್ರದಲ್ಲಿ ಪರಶುರಾಮನ ಎಡೆಗೆ ಕಾಲ್ನಡಿಗೆ ಜಾಥ ಹಮ್ಮಿ ಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

ನಮ್ಮದೇನಿದ್ದರೂ ಧರ್ಮ ಉಳಿಸುವ ಹೋರಾಟ. ಧರ್ಮದ ಹೆಸರಲ್ಲಿ ಜನ ಸಮೂಹವನ್ನು ಬೇರ್ಪಡಿಸುವ ಅಥವಾ ಧರ್ಮವನ್ನು ಅಪಚಾರ ಗೊಳಿಸುವ ಮನ ಸ್ಥಿತಿಯ ವಿರುದ್ಧ ಹೋರಾಟ

“ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಎಂಬ ಜಾಥವನ್ನು ಹಮ್ಮಿಕೊಳ್ಳುತ್ತಿದ್ದು, ಧರ್ಮ ಉಳಿಸಲು ಎಲ್ಲರೂ ಸಹಕಾರ ನೀಡುವಂತೆ ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

Vishwa News 24

Recent Posts

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ -vishwanews24

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…

16 minutes ago

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ -vishwanews24

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…

30 minutes ago

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು -vishwanews24

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…

42 minutes ago

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ:ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ ಬಹಿರಂಗ! -vishwanews24

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ…

1 hour ago

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

23 hours ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

24 hours ago