ಕಾರ್ಕಳ: ಪರಶುರಾಮನ ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಪ್ರತಿಮೆಯ ಬಗ್ಗೆ ಸತ್ಯಾಸತ್ಯತೆ ಅಗ್ರಹಿಸಿ ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.
ನಮ್ಮಿ ತುಳು ನಾಡು ಪರಶುರಾಮರ ಸೃಷ್ಟಿ ಎಂದೇ ಧಾರ್ಮಿಕ ಆಚರಣೆಗಳಲ್ಲಿ ಉಲ್ಲೇಖ ಇವೆ. ಈ ವಿಚಾರಗಳನ್ನು ನಾವೆಲ್ಲರೂ ಭಕ್ತಿ ಭಾವದಿಂದ ನಂಬುತ್ತೇವೆ.
ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಆದಾಗ ಎಲ್ಲರೂ ಸಂತಸ ಪಟ್ಟಿದ್ದರು. ಆದರೆ ಧಾರ್ಮಿಕ ವಿಧಿಗಳನ್ನೆಲ್ಲ ಮಾಡಿದ ಬಳಿಕ ಆ ವಿಗ್ರಹ ಕಂಚಿನದ್ದು ಅಲ್ಲ ಎಂದಾದರೆ ಇದು ಸಮಗ್ರ ತುಳುನಾಡಿಗೆ ಮಾಡುವ ಪರಮ ಅನ್ಯಾಯ. ಇಂತಹ ಧರ್ಮ ವಿರೋಧಿ, ಹಾಗೂ ಧರ್ಮಕ್ಕೆ ಅಪಚಾರ ಆಗುವ ವಿಚಾರಗಳನ್ನು ನಾವು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಈ ವಿಚಾರದಲ್ಲಿ ನಾವೆಲ್ಲರೂ ಸತ್ಯಂಶ ತಿಳಿಯಲಿಕ್ಕಾಗಿ ಸೆಪ್ಟೆಂಬರ್ 3ನೇ ವಾರ ಅತೀ ಶೀಘ್ರದಲ್ಲಿ ಪರಶುರಾಮನ ಎಡೆಗೆ ಕಾಲ್ನಡಿಗೆ ಜಾಥ ಹಮ್ಮಿ ಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮದೇನಿದ್ದರೂ ಧರ್ಮ ಉಳಿಸುವ ಹೋರಾಟ. ಧರ್ಮದ ಹೆಸರಲ್ಲಿ ಜನ ಸಮೂಹವನ್ನು ಬೇರ್ಪಡಿಸುವ ಅಥವಾ ಧರ್ಮವನ್ನು ಅಪಚಾರ ಗೊಳಿಸುವ ಮನ ಸ್ಥಿತಿಯ ವಿರುದ್ಧ ಹೋರಾಟ
“ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಎಂಬ ಜಾಥವನ್ನು ಹಮ್ಮಿಕೊಳ್ಳುತ್ತಿದ್ದು, ಧರ್ಮ ಉಳಿಸಲು ಎಲ್ಲರೂ ಸಹಕಾರ ನೀಡುವಂತೆ ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…