ಕಾರ್ಕಳ: ಪರಶುರಾಮನ ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಪ್ರತಿಮೆಯ ಬಗ್ಗೆ ಸತ್ಯಾಸತ್ಯತೆ ಅಗ್ರಹಿಸಿ ಪಾದಯಾತ್ರೆ ಮಾಡುವುದಾಗಿ ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.
ನಮ್ಮಿ ತುಳು ನಾಡು ಪರಶುರಾಮರ ಸೃಷ್ಟಿ ಎಂದೇ ಧಾರ್ಮಿಕ ಆಚರಣೆಗಳಲ್ಲಿ ಉಲ್ಲೇಖ ಇವೆ. ಈ ವಿಚಾರಗಳನ್ನು ನಾವೆಲ್ಲರೂ ಭಕ್ತಿ ಭಾವದಿಂದ ನಂಬುತ್ತೇವೆ.
ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಆದಾಗ ಎಲ್ಲರೂ ಸಂತಸ ಪಟ್ಟಿದ್ದರು. ಆದರೆ ಧಾರ್ಮಿಕ ವಿಧಿಗಳನ್ನೆಲ್ಲ ಮಾಡಿದ ಬಳಿಕ ಆ ವಿಗ್ರಹ ಕಂಚಿನದ್ದು ಅಲ್ಲ ಎಂದಾದರೆ ಇದು ಸಮಗ್ರ ತುಳುನಾಡಿಗೆ ಮಾಡುವ ಪರಮ ಅನ್ಯಾಯ. ಇಂತಹ ಧರ್ಮ ವಿರೋಧಿ, ಹಾಗೂ ಧರ್ಮಕ್ಕೆ ಅಪಚಾರ ಆಗುವ ವಿಚಾರಗಳನ್ನು ನಾವು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಈ ವಿಚಾರದಲ್ಲಿ ನಾವೆಲ್ಲರೂ ಸತ್ಯಂಶ ತಿಳಿಯಲಿಕ್ಕಾಗಿ ಸೆಪ್ಟೆಂಬರ್ 3ನೇ ವಾರ ಅತೀ ಶೀಘ್ರದಲ್ಲಿ ಪರಶುರಾಮನ ಎಡೆಗೆ ಕಾಲ್ನಡಿಗೆ ಜಾಥ ಹಮ್ಮಿ ಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮದೇನಿದ್ದರೂ ಧರ್ಮ ಉಳಿಸುವ ಹೋರಾಟ. ಧರ್ಮದ ಹೆಸರಲ್ಲಿ ಜನ ಸಮೂಹವನ್ನು ಬೇರ್ಪಡಿಸುವ ಅಥವಾ ಧರ್ಮವನ್ನು ಅಪಚಾರ ಗೊಳಿಸುವ ಮನ ಸ್ಥಿತಿಯ ವಿರುದ್ಧ ಹೋರಾಟ
“ಸತ್ಯ ತಿಳಿಸಿ ಕ್ಷೇತ್ರ ಉಳಿಸಿ ನಮ್ಮ ನಡೆ ಪರಶುರಾಮನ ಕಡೆ” ಎಂಬ ಜಾಥವನ್ನು ಹಮ್ಮಿಕೊಳ್ಳುತ್ತಿದ್ದು, ಧರ್ಮ ಉಳಿಸಲು ಎಲ್ಲರೂ ಸಹಕಾರ ನೀಡುವಂತೆ ಕಾಂಗ್ರೆಸ್ ಮುಖಂಡ ಮುನಿಯಾಲ್ ಉದಯ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…