ಕಾರ್ಕಳ : ಐತಿಹಾಸಿಕ ಅನಂತಶಯನ ದೇವಸ್ಥಾನದ ಎದುರುಗಡೆಯ ರಸ್ತೆಯಲ್ಲಿ ಕುಡುಕನೊಬ್ಬ ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಅವಾಂತರ ಸೃಷ್ಠಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆಸಿದೆ.
ಬಿಳಿ ಶರ್ಟ್ ಹಾಗೂ ಕಾವಿ ಲುಂಗಿ ಧರಿಸಿಕೊಂಡಿದ ವ್ಯಕ್ತಿ ಅನಂತಶಯನ ದೇವಸ್ಥಾನ ಎದುರುಗಡೆಯಲ್ಲಿ ಇರುವ ಸ್ವಾತಂತ್ರ್ಯ ಚಳುವಳಿ ಕಟ್ಟೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಉತ್ತರ ದಿಕ್ಕಿ ತಲೆ ಇಟ್ಟು ಮಲಗಿದ್ದನು.ಕುಡುಕನ ಅವಾಂತರಕ್ಕೆ ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ವಾಹನ ಚಾಲಕರು ನಿಯಂತ್ರಣ ಕಳೆದು ಕೊಂಡಿದ್ದರೆ ಆ ಪ್ರದೇಶದಲ್ಲಿ ಅನಾಹುತವೇ ನಡೆಯುತ್ತಿತ್ತು.
ಇದನೆಲ್ಲ ಗಮನಿಸಿದ ಸ್ಥಳೀಯರು ಕುಡುಕನನ್ನು ಸಮೀಪದ ಪುಟ್ ಪಾತ್ ಗೆ ಹೊತ್ತು ಮಲಗಿಸಿದರು. ತುಂತುರು ಮಳೆಯ ಸಿಂಚನದಲ್ಲಿ ಪುಟ್ ಪಾತ್ ನಲ್ಲಿ ಮಲಗಿದ್ದ ಕುಡುಕ ಮದ್ಯದ ನಶೆ ಇಳಿಯುತ್ತಿದ್ದಂತೆ ಒದ್ದೆ ಬಟ್ಟೆಯಲ್ಲಿ ಅಲ್ಲಿಂದ ಹೆಜ್ಜೆ ಹಾಕಿ ಬೇರೆಡೆಗೆ ಹೊರಟು ಹೋಗಿದ್ದಾನೆ.
ರಸ್ತೆಯಲ್ಲಿ ಮಲಗಿದ್ದ ಕುಡುಕನ ಅವಾಂತರದ ದೃಶ್ಯಾವಳಿಯನ್ನು ವಕೀಲ ಅನಿಲ್ ಕುಮಾರ್ ನಿಟ್ಟೆ ಅವರು ತನ್ನ ಮೊಬೈಲ್ ನಲ್ಲಿ ಫೋಟೋ ಸೆರೆ ಹಿಡಿದಿದ್ದರು.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…