ಕುಂದಾಪುರ: ಸುಮಾರು 2 ದಶಕಗಳ ಹಿಂದೆ ಮನೆ ತೊರೆದು, ನಕ್ಸಲ್ ಗುಂಪು ಸೇರಿಕೊಂಡಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆಯ ಲಕ್ಷ್ಮೀ ತೊಂಬಟ್ಟು ಶರಣಾಗಿರುವುದು ಕುಟುಂಬದವರಲ್ಲಿ ಸಂತಸ ಮೂಡಿಸಿದೆ.
7ನೇ ತರಗತಿಯವರೆಗೆ ಓದಿದ್ದ ಲಕ್ಷ್ಮೀ ಸಂಡೂರು ನೀರಾವರಿ ಪ್ರಾಜೆಕ್ಟ್ ಕೆಲಸಕ್ಕೆ ಹೋಗುತ್ತಿದ್ದರು. 2006ರಲ್ಲಿ ಒಂದು ದಿನ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಬಂದಿರಲಿಲ್ಲ. ನಾವು 3-4 ಹುಡುಕಾಟ ನಡೆಸಿದರೂ ಸಿಗಲಿಲ್ಲ. ಆ ಬಳಿಕ ಆಕೆ ನಕ್ಸಲ್ ಗುಂಪಿಗೆ ಸೇರಿದ್ದಾಳೆಂದು ತಿಳಿಯಿತು. ಆಮೇಲೆ ಶಂಕರನಾರಾಯಣ ಠಾಣೆಗೆ ತಿಳಿಸಿದೆವು ಎಂದು ಅಣ್ಣ ವಿಠಲ ಪೂಜಾರಿ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.
ಮನೆ ಬಿಟ್ಟು ಹೋಗುವಾಗ ಈಕೆಗೆ 17-18 ವರ್ಷ ಆಗಿರಬಹುದು. ಈ ಹಿಂದೆ ಈಕೆ ಊರಿಗೆ ಬಂದಿರುವುದಾಗಿ ಕೆಲವರು ಹೇಳುತ್ತಾರೆ. ಆದರೆ ನಾವು 2006ರ ಬಳಿಕ ಆಕೆಯನ್ನು ನೋಡುತ್ತಿರುವುದು ಇವತ್ತೇ. ಆಕೆಯನ್ನು ನೋಡಿ ನಮಗೆಲ್ಲ ತುಂಬಾ ಖುಷಿಯಾಯಿತು. ಈಕೆಯ ಕಾರಣಕ್ಕೆ ಆರಂಭದ ದಿನಗಳಲ್ಲಿ ನಾವು ತುಂಬಾ ತೊಂದರೆ ಅನುಭವಿಸಿದ್ದೆವು. ಇನ್ನು ಆಕೆ ನಿಶ್ಚಿಂತೆಯಿಂದ ಮನೆಗೆ ಬರಬಹುದು. ಮನೆಯಲ್ಲಿ ಇರಬಹುದು ಎನ್ನುತ್ತಾರೆ ವಿಠಲ ಪೂಜಾರಿ.
ಮನೆಯಲ್ಲಿದ್ದ ಬಡತನ ಆಕೆ ನಕ್ಸಲ್ ಸೇರಲು ಕಾರಣ ಇರಬಹುದು. ಆಕೆ ನಕ್ಸಲ್ ಸೇರಿದ ಬಳಿಕ ನಾವು ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದೆವು. ನಮ್ಮ ಮದುವೆ, ಹೆತ್ತವರ ಸಾವಿನ ಸಂದರ್ಭದಲ್ಲೂ ಆಕೆ ಬರಬಹುದು ಎಂದು ಪೊಲೀಸರು ಕಾದಿದ್ದರು ಎಂದು ಅವರು ಹೇಳಿದರು.
ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…
ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…
ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…
ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ; ಡೆತ್ ನೋಟ್ ನಲ್ಲಿ…
ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…
ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…