Featured

ಕುಂದಾಪುರ : ಯಾವುದೇ ಪಕ್ಷದವರು ಯಾವುದೇ ಜಾತಿಯವರು ಆಗಿದ್ದರು ಕೂಡ ಮನೆಯಲ್ಲೊಂದು ಭಗವಧ್ವಜ ಇರಲಿ, ಹೆಗಲ ಮೇಲೆ ಕೇಸರಿ ಶಾಲಿರಲಿ.. : ವಾಗ್ಮಿ ಚೈತ್ರಾ ಕುಂದಾಪುರ – Vishwanews24

ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ..

ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ..

ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಆಗಲ್ಲ..

ಕುಂದಾಪುರ : ಧರ್ಮರಕ್ಷಣೆಗಾಗಿ ಪ್ರಾಣ ಕೊಟ್ಟ ಪ್ರತಿ ಹಿಂದೂ ಕಾರ್ಯಕರ್ತರ ಬದಲಿಗೆ ಸಾವಿರಾರು ಕಾರ್ಯಕರ್ತರು ಹುಟ್ಟಿಕೊಂಡಿದ್ದಾರೆ. ಕೈಯಲ್ಲಿರುವ ಪಂಜು ಆರಿದರೂ ಹೃದಯದಲ್ಲಿನ ಕಿಚ್ಚು ಆರುವುದಿಲ್ಲ. ಹಿಂದುತ್ವಕ್ಕಾಗಿ ನಡೆದ ಬಲಿದಾನ ವ್ಯರ್ಥವಾಗಲ್ಲ. ನಮ್ಮನ್ನು ಜೈ ಭೀಮ್ ಹೆಸರಿನಲ್ಲಿ ಒಡೆಯಲು ಸಾಧ್ಯವಿಲ್ಲ. ನಾವು ಜೈ ಶ್ರೀರಾಮ್ ಹೇಳುವ ಬಾಯಲ್ಲಿಯೇ ಜೈ ಭೀಮ್ ಎಂದು ಗರ್ವದಿಂದ ಹೇಳುತ್ತೇವೆ. ನಮಗೆ ರಾಮ, ಭೀಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ರಾಮನು ನಮ್ಮವನೆ ಭೀಮನು ನಮ್ಮವನೆ ಎಂಬ ಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ್ದೇವೆ. ಜಾತಿ ಹೆಸರಲ್ಲಿ ಹಿಂದೂ ಸಮಾಜವನ್ನು ವಿಭಜಿಸಲು ಆಗಲ್ಲ ಎಂದು ವಾಗ್ಮಿ ಚೈತ್ರಾ ಕುಂದಾಪುರ ಹೇಳಿದರು.

ಭಜರಂಗದಳ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಖಂಡಿಸಿ, ಮತ್ತು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಹಿಂದೂ ಬಳಗ ನಾವುಂದ, ಮರವಂತೆ, ಕಿರಿಮಂಜೇಶ್ವರ, ನಾಡ ವಲಯದ ವತಿಯಿಂದ ಬೈಂದೂರು ತಾಲೂಕಿನ ಮರವಂತೆ ಶ್ರೀ ರಾಮಮಂದಿರ ಮರವಂತೆಯಿಂದ ಅರೆಹೊಳೆ ಕ್ರಾಸ್ ನಂದಿಕೇಶ್ವರ ದೇವಸ್ಥಾನದವರೆಗೆ ಬೃಹತ್ ಪಂಜಿನ ಮೆರವಣಿಗೆ ಜರುಗಿದ್ದು ಬಳಿಕ ನಡೆದ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು.

ನಾವು ಆರಾಧಿಸುವ ದೇವದೇವತೆಗಳ ಕೈಯಲ್ಲಿ ಶಸ್ತ್ರವಿದೆ. ಧರ್ಮದ ರಕ್ಷಣೆಗೆ ಶಾಸ್ತ್ರ ಓದುವ ಜೊತೆಗೆ ಶಸ್ತ್ರ ಹಿಡಿಯುವ ಅನಿವಾರ್ಯತೆಯಿದೆ. ಕೆಲವರ ಸಾವುಗಳು ಇನ್ನು ಸಾವಿರ ಮಂದಿ ಹುಟ್ಟಲು ಕಾರಣವಾಗುತ್ತದೆ. ಹಿಂದೂ ಸಮಾಜ ನಾಶ ಮಾಡಲು ಜಿಹಾದಿಗಳು ಮುಂದಾಗಿದ್ದಾರೆ. ಹೆದರಿಸುವ ಮಂದಿಗೆ ತಕ್ಕ ಉತ್ತರ ಕೊಡಲು ಸಿದ್ಧರಾಗಬೇಕು. ಯಾವುದೇ ಪಕ್ಷದವರು ಯಾವುದೇ ಜಾತಿಯವರು ಆಗಿದ್ದರು ಕೂಡ ಮನೆಯಲ್ಲೊಂದು ಭಗವಧ್ವಜ ಇರಲಿ. ಹೆಗಲ ಮೇಲೆ ಕೇಸರಿ ಶಾಲಿರಲಿ. ಇದರಿಂದ ಧರ್ಮ ರಕ್ಷಣೆ ಸಾಧ್ಯ ಎಂದು ಅವರು ಕರೆಕೊಟ್ಟರು.

ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮರವಂತೆ ರಾಮಮಂದಿರದಲ್ಲಿ ವಾಸು ಖಾರ್ವಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ನಿತ್ಯಾನಂದ ಉಪ್ಪುಂದ, ಅಕ್ಷಯ್ ತೆಗ್ಗರ್ಸೆ ಪ್ರಾರ್ಥಿಸಿದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago