ಕುಂದಾಪುರ: ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ ಹಾಗೂ ಉಡುಪಿ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು ಮತದಾನ ಪೂರ್ವ ಬಿಜೆಪಿ ಮುಖಂಡ ರಾಜೇಶ್ ಉಡುಪ ಅವರ ಕೋಟೇಶ್ವರದ ನಿವಾಸಕ್ಕೆ ಶುಕ್ರವಾರ ಬೆಳಿಗ್ಗೆ ಆಗಮಿಸಿದ ಅವರು ಕೋಟೇಶ್ವರ ಗ್ರಾಮಪಂಚಾಯತ್’ನಲ್ಲಿ ಬಿಜೆಪಿ ಬೆಂಬಲಿಸುವ 22 ಮತದಾರರನ್ನು ಭೇಟಿ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಕಾರ್ಯಕರ್ತರು, ಪಕ್ಷವನ್ನು ಬೆಂಬಲಿಸುವ ಪಕ್ಷೇತರರು, ಇತರ ಪಕ್ಷದ ಸದಸ್ಯರ ಕೂಡ ಬೆಂಬಲಿಸುವ ನಿರೀಕ್ಷೆಯಿದ್ದು ಬಹುಮತದೊಂದಿಗೆ ಆಯ್ಕೆಯಾಗುವ ವಿಶ್ವಾಸವಿದೆ. ಬಿಜೆಪಿಗೆ 3500 ಕ್ಕೂ ಅಧಿಕ ಮತವಿದ್ದು ಎಲ್ಲಾ ಮತ ನಮಗೆ ಸಿಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಪಂಚಾಯತ್ ದಿನಾಚರಣೆಯನ್ನು ಆಚರಿಸುವ ಚಿಂತನೆಯಿದ್ದರೂ ಕೂಡ ಕೋವಿಡ್ ಕಾರಣಕ್ಕಾಗಿ ಎರಡು ವರ್ಷದಿಂದ ಆಗಿರಲಿಲ್ಲ. ಆದರೆ ಪಂಚಾಯತ್ ಸಬಲೀಕರಣಕ್ಕಾಗಿ ಗ್ರಾ.ಪಂ ಸದಸ್ಯರ ಗೌರವ, ಗೌರವ ಧನವನ್ನು ಹೆಚ್ಚಿಸಲು, ಗ್ರಾಮಪಂಚಾಯತ್ ಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಬೇಕಾದ ಕ್ರಮಕೈಗೊಳ್ಳಲಾಗುತ್ತದೆ. ಜನನ ಮರಣ ದೃಢೀಕರಣ ಪತ್ರ, ಸಂಧ್ಯಾಸುರಕ್ಷಾ, ಮನಸ್ವಿನಿ, ಅಂಗವಿಕಲ, ವೃದ್ಧಾಫ್ಯ ವೇತನ ಮೊದಲಾದವುಗಳನ್ನು ಗ್ರಾಮಪಂಚಾಯತಿಯಲ್ಲೇ ಮಾಡಲು ವ್ಯವಸ್ಥೆ ಅನುಷ್ಟಾನಗೊಳಸಲು ಸಾಧಕ ಬಾಧಕ ಪರಾಮರ್ಷಿಸಿ ಸರಕಾರದ ಗಮನಕ್ಕೆ ತರುವ ಅನಿವಾರ್ಯತೆಯಿದೆ. ಸಿಬ್ಬಂದಿಗಳ ದರ್ಜೆಗಳ ಬಗ್ಗೆಯೂ ಜಿಜ್ಞಾಸೆಯಿದ್ದು ಮುಂದಿನ ದಿನಗಳಲ್ಲಿ ಗ್ರಾ.ಪಂ ಸರಕಾರದಂತೆ ಕಾರ್ಯ ನಿರ್ವಹಿಸುವಂತೆ ಮಾಡುವ ಇರಾದೆಯಿದೆ ಎಂದರು.
ಈ ಸಂದರ್ಭ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಸತೀಶ್ ಪೂಜಾರಿ ವಕ್ವಾಡಿ, ಕೋಟೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ, ಮಾಜಿ ಅಧ್ಯಕ್ಷ ಉದಯ ನಾಯಕ್, ಮುಖಂಡ ನಾಗರಾಜ ಆಚಾರ್ ಕೋಣಿ ಮೊದಲಾದವರಿದ್ದರು.
ಉಡುಪಿ : ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಡೇವಿಡ್ ಡಿಸೋಜ ಹತ್ಯೆಗೆ ಕಾರಣ; ತನಿಖೆಯಿಂದ ಬಯಲು ಉಡುಪಿ: ಮುದರಂಗಡಿ ಗ್ರಾ.ಪಂ ಮಾಜಿ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್…
ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು ಶಿಮ್ಲಾ :…
ಗೃಹಲಕ್ಷ್ಮಿ 32ನೇ ಕಂತಿನ ಹಣ 2443 ಕೋಟಿ ರೂ. ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ 32ನೇ ಕಂತಿನ ಹಣ ಬಿಡುಗಡೆಯಾಗಿದೆ.…
ನನ್ನ ಅವಶ್ಯಕತೆ ಇರಲಿಲ್ಲವೇನೋ ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟರು: ಮಂಕಾಳ ವೈದ್ಯ ಅಸಮಾಧಾನ ಮೈಸೂರು: ನನ್ನ ಅವಶ್ಯಕತೆ ಇರಲಿಲ್ಲವೇನೋ ?…
ಶಿರ್ವ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು ಶಿರ್ವ : ರಸ್ತೆ ದಾಟಲು ನಿಂತಿದ್ದ…