Featured

ಕುಂದಾಪುರ : ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ : ಮುದೂರಿಗೆ ಬಂತು ‘ಸಂಚಾರಿ ಸ್ಮಶಾನ – Vishwanews24

ಕುಂದಾಪುರ : ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ : ಮುದೂರಿಗೆ ಬಂತು ‘ಸಂಚಾರಿ ಸ್ಮಶಾನ

ಕುಂದಾಪುರ: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನದ ಕೊರತೆಗೊಂದು ಶಾಶ್ವತ ಪರಿಹಾರ ಈವರೆಗೆ ಲಭಿಸಿಲ್ಲ. ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೆ ಅನನುಕೂಲವಾಗಿರುವ ಈ ದಿಸೆಯಲ್ಲಿ ಆರಂಭಗೊಂಡಿರುವ ಸಂಚಾರಿ ಸ್ಮಶಾನ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅನುಕೂಲವಾಗಬಹುದೆಂಬ ನಿರೀಕ್ಷೆ ಜನಸಾಮಾನ್ಯರಲ್ಲಿ ಮೂಡಿದೆ.

ಅನೇಕ ಕಡೆ ಬಹುತೇಕ ಮಂದಿಗೆ ಎಕರೆಗಟ್ಟಲೆ ತೆಂಗು-ಕಂಗು, ಮಾವುಗಳ ಪ್ಲಾಂಟೇಶನ್‌ ಇದ್ದರೆ ಇನ್ನಿತರ ಕಡೆ ವಾಸವಾಗಿರುವವರಿಗೆ ಸೂರು ಕಟ್ಟಿಕೊಳ್ಳುವಷ್ಟು ಮಾತ್ರ ಜಾಗವಿದ್ದು ಮಿಕ್ಕುಳಿದ ಪ್ರದೇಶ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಸ್ವಾಮ್ಯದಲ್ಲಿದೆ, ಕೇವಲ 2-3 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರು ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವ್ಯವಸ್ಥೆಗೆ ಜಾಗವಿಲ್ಲದೆ ಮನೆಯಂಗಳವನ್ನೇ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗೊಂದು ಉದಾಹರಣೆ ಹಾಗೂ ಸಂದರ್ಭ ಮುದೂರು ಗ್ರಾಮದಲ್ಲಿ ನಡೆದ ಘಟನೆ ದೇಶವ್ಯಾಪ್ತಿ ಸುದ್ದಿಯಾಗಿತ್ತು.

ಸಂಚಾರಿ ಸ್ಮಶಾನ ಆರಂಭ
ಮರಣ ಹೊಂದಿದವರನ್ನು ದಹಿಸುವ ವಿನೂತನ ಮಾದರಿಯ ಯಂತ್ರ ಬಳಕೆಯ ಕ್ರಮ ಕೇರಳದಲ್ಲಿ ರೂಢಿಯಲ್ಲಿದ್ದು, ಇದೀಗ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿ ಕೂಡ ಅದನ್ನು ಪರಿಚಯಿಸಿದೆ. 7 ಅಡಿ ಉದ್ದ , 2 ಅಡಿ ಅಗಲ, 4 ಅಡಿ ಎತ್ತರದ ಈ ಶವ ದಹನ ಯಂತ್ರವು ಗ್ರಾಸ್‌ ವಿದ್ಯುತ್‌ ಮೂಲಕ ಬಳಸಲಾಗುತ್ತಿದೆ.

ಯಂತ್ರದ ಒಳಭಾಗದಲ್ಲಿರುವ ಚೇಂಬರ್‌ ಮೇಲೆ ಶವ ಇಟ್ಟು ಕರ್ಪೂರವನ್ನು ಹಚ್ಚಿ ಮೇಲ್ಭಾಗವನ್ನು ಮುಚ್ಚಿ ಗ್ಯಾಸ್‌ ಸಂಪರ್ಕ ನೀಡಿದರೆ ಕ್ಷಣಾರ್ಧದಲ್ಲಿ ದಹನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ವಾಯುಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ.

ಒಂದು ಶವಸಂಸ್ಕಾರಕ್ಕೆ 10 ಕಿಲೋ ಗ್ಯಾಸ್‌, 100 ಗ್ರಾಮ್‌ ಕರ್ಪೂರ ಬಳಕೆಯಾಗುತ್ತದೆ. ಸುಮಾರು 5 ಲಕ್ಷ 80 ಸಾವಿರ ರೂ. ವೆಚ್ಚದ ಸಂಚಾರಿ ಶವಪೆಟ್ಟಿಗೆಯನ್ನು ಕೇರಳದ ಖಾಸಗಿ ಕಂಪೆನಿಯೊಂದು ನಿರ್ಮಿಸಿದೆ. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಈ ಭಾಗದ ಜನರ ಶವಸಂಸ್ಕಾರದ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಎಂ.ವಿಜಯಶಾಸ್ತ್ರೀ, ಉಪಾಧ್ಯಕ್ಷ ನಕ್ಷತ್ರ ಭೋವಿ, ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದಾಗಿ ಸಂಚಾರಿ ಶವಸಂಸ್ಕಾರ ಯಂತ್ರವನ್ನು ಮುದೂರಿಗೆ ಒದಗಿಸಿದೆ.

ಸೂಕ್ತ ಜಾಗ ಗುರುತು ಮಾಡಿ
ಮುದೂರು ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಿಗೆ ಸಂಚಾರಿ ಸ್ಮಶಾನ ಉಪಯೋಗಿಯಾಗಲಿದೆ. ಈ ಕ್ರಮಕ್ಕೆ ಜನ ಹೊಂದಿಕೊಳ್ಳಬೇಕಾಗಿದೆ. ಕಂದಾಯ
ಹಾಗೂ ಅರಣ್ಯ ಇಲಾಖೆ ಗ್ರಾ.ಪಂ.ಗೆ ಸೂಕ್ತ ಜಾಗ ಗುರುತು ಮಾಡಿ ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಬದ್ಧರಾಗಿದ್ದೇವೆ.
-ವನಜಾಕ್ಷಿ ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

ರಾಜ್ಯದಲ್ಲೇ ಪ್ರಥಮ: ವ್ಯವಸಾಯ ಸೇವಾ ಸಹಕಾರಿ ಸಂಘವೊಂದು ತನ್ನೂರಿನ ಜನರ ಕಷ್ಟಕ್ಕೆ ಸ್ಪಂದಿಸಿ ಸಂಚಾರಿ ಸ್ಮಶಾನ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ. ಸಂಘದ ಅಧ್ಯಕ್ಷ ಎಂ. ವಿಜಯ ಶಾಸ್ತ್ರಿ, ಉಪಾಧ್ಯಕ್ಷ ನಕ್ಷತ್ರ ಬೋವಿ ಸಹಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿಯವರು ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹಿಂದಿನ ಸಮಸ್ಯೆ ತಮ್ಮೂರಿನಲ್ಲಿ ಮರುಕಳಿಸಬಾರದೆಂಬ ಕಾಳಜಿಯಲ್ಲಿ ಸಂಘದ ಮರಣ ನಿಧಿಯಲ್ಲಿ ಇದರ ವೆಚ್ಚ ಭರಿಸಲಾಗಿದ್ದು ಶವ ಸಂಸ್ಕಾರಕ್ಕಾಗಿ ಯಂತ್ರದ ಸಾಗಾಟ, ಗ್ಯಾಸ್ ಸಹಿತ ಇತರೆ ಖರ್ಚನ್ನು ಕೂಡ ಮುದೂರು ಸೊಸೈಟಿ ಭರಿಸಲಿದೆ.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

17 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

17 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago