ಮೇಷ:- ಮನೆತನದ ರೀತಿ ರಿವಾಜುಗಳನ್ನು ಮುಂದುವರಿಸಿಕೊಂಡು ಹೋಗುವಿರಿ. ಇದಕ್ಕೆ ಸ್ವಜನರ ಮತ್ತು ಬಂಧುಬಾಂಧವರ ಸಹಕಾರ, ಸಲಹೆಗಳು ಸಿಗುವುವು. ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಿಥುನ:- ನಡೆನುಡಿಯಲ್ಲಿ ನೇರ ಮತ್ತು ನಿಷ್ಠುರವಾದಿಗಳಾದ ನೀವು ಸ್ಪಷ್ಟವಾದುದನ್ನೇ ಮಾತನಾಡಿದರೂ ಕೇಳಿಸಿಕೊಳ್ಳದಂತಹ ಮಂದಿಯನ್ನು ದೂರ ಇಡುವುದು ಒಳ್ಳೆಯದು. ಇದರಿಂದ ಒಳಿತೇ ಆಗುವುದು.
ಕಟಕ:- ಬೆಲೆಬಾಳುವಂತಹ ವಸ್ತುಗಳ ಬಗ್ಗೆ ಜಾಗೃತೆಯಿಂದ ಇರಿ. ಇಲ್ಲದಿದ್ದರೆ ಕಣ್ಣುಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಕಳ್ಳರು ಬೆಲೆಬಾಳುವ ವಸ್ತುವನ್ನು ಕಳುವು ಮಾಡುವ ಸಾಧ್ಯತೆ ಇದೆ. ಹಾಗಾಗಿ ಬೆಲೆಬಾಳುವ ವಸ್ತುಗಳನ್ನು ಮೈಮೇಲೆ ಧರಿಸದಿರಿ.
ಸಿಂಹ:- ಸಣ್ಣಪ್ರಮಾಣದ ಬಂಡವಾಳ ಹಾಕಿ ನಡೆಸುವ ವ್ಯಾಪಾರದ ಕುರಿತು ಮಾತುಕತೆಗೆ ಕೂಡುವಿರಿ. ಇದರಿಂದ ಒಳಿತಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ ಮತ್ತು ಮನಃಶಾಂತಿಯನ್ನು ಹೊಂದಿ.
ಕನ್ಯಾ:- ನೆರೆಹೊರೆಯ ಜನ ಅನವಶ್ಯಕ ತೊಂದರೆಯನ್ನು ಕೊಡುವ ಸಾಧ್ಯತೆ ಇದೆ. ಇದರಿಂದ ಪಾರಾಗಲು ಕಾನೂನಾತ್ಮಕ ಸಲಹೆ, ಸಹಕಾರಗಳನ್ನು ಪಡೆಯಿರಿ. ಒಳಿತಾಗುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ತುಲಾ:- ‘ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು’ ಎಂಬಂತೆ ವ್ಯಾಪಾರ, ವ್ಯವಹಾರದಲ್ಲಿ ಬಾಯಿ ತಪ್ಪಿ ಆಡಿದ ಮಾತಿನಿಂದ ತೊಂದರೆಯನ್ನು ಅನುಭವಿಸುವಿರಿ. ಕುಲದೇವರ ಸ್ಮರಣೆ ಮಾಡಿ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ವೃಶ್ಚಿಕ:- ಖಾಸಗಿ ಉದ್ಯೋಗ ಕ್ಷೇತ್ರದಲ್ಲಿರುವವರಿಗೆ ಸ್ವಲ್ಪ ತೊಂದರೆ ಎದುರಾಗುವುದು. ಆಂಜನೇಯ ಸ್ವಾಮಿ ಮಂತ್ರವನ್ನು ತಪ್ಪದೇ ಪಠಿಸಿ. ಪ್ರಯಾಣ ಕಾಲದಲ್ಲಿಎಚ್ಚರಿಕೆ ಇರಲಿ. ಸಾಧ್ಯವಾದಲ್ಲಿಉದ್ದಿನಕಾಳನ್ನು ಇಟ್ಟುಕೊಳ್ಳಿ.
ಧನುಸ್ಸು:- ವಾಹನದ ಕಿರಿಕಿರಿಯಿಂದ ಮನಸ್ಸಿಗೆ ಬೇಸರ ಉಂಟಾಗುವುದು. ಪ್ರಯಾಣ ಸಮಯದಲ್ಲಿ ವಾಹನಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇಲ್ಲದೆ ಇದ್ದಲ್ಲಿ ಅನಗತ್ಯ ದಂಡ ಕಟ್ಟಬೇಕಾಗುವುದು.
ಮಕರ:- ನೀವು ನಿಮ್ಮ ಪಾಡಿಗೆ ಇದ್ದರೂ ನಿಮ್ಮನ್ನು ಮುಖ್ಯ ವಿಚಾರ ಒಂದರಲ್ಲಿ ಮಧ್ಯವರ್ತಿಯಾಗಿ ತೀರ್ಮಾನ ನೀಡಬೇಕೆಂಬ ಒತ್ತಾಯ ಬರುವುದು. ಇದು ನಿಮಗೆ ಸಂದಿಗ್ಧ ಪರಿಸ್ಥಿತಿಯನ್ನು ತಂದುಕೊಡುವುದು.
ಕುಂಭ:- ಈ ದಿನ ಒಳಿತಾಗುವುದು. ಮನೆಯಲ್ಲಿ ಒಂದು ಮಹತ್ತರ ಕಾರ್ಯಕ್ಕೆ ಚಾಲನೆ ದೊರೆಯುವುದು. ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ಶ್ಲಾಘಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮೀನ:- ನಿಮ್ಮ ಬಹುದಿನದ ಕನಸು ನನಸಾಗುವಂತೆ ಆಗಲು, ಹಿರಿಯರೊಡನೆ ಆಪ್ತ ಸಮಾಲೋಚನೆ ನಡೆಸಿ. ಇದರಿಂದ ಒಳ್ಳೆಯದಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ದೇಶದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪಠ್ಯ ಪರಿಷ್ಕರಣೆ.. ಮೊದಲ ಬಾರಿಗೆ NCERT 9ನೇ ಕ್ಲಾಸ್ನಲ್ಲಿ ತುರ್ತು ಪರಿಸ್ಥಿತಿ ಪಠ್ಯ…
ಮಂಗಳೂರು: ಜೂ.29ರಿಂದ ಜು.6ರವರೆಗೆ ದೇಶದಾದ್ಯಂತ ವಿಶೇಷ ಸಹಕಾರ ಸಪ್ತಾಹ ಆಚರಣೆ ಮಂಗಳೂರು: ಸುಮಾರು 122 ವರ್ಷಗಳ ಇತಿಹಾಸವಿರುವ ರಾಷ್ಟ್ರದ ಸಹಕಾರ…
ಉಡುಪಿ: ಬಡಗುಬೆಟ್ಟು ಸೊಸೈಟಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ; 15 ಲಕ್ಷ ಮೌಲ್ಯದ ಪರಿಕರ ವಿತರಣೆ ಉಡುಪಿ: ಸಹಕಾರ…
ಇಂದು ಮಂಗಳೂರಿಗೆ ಶಾರುಕ್ ಖಾನ್ ಆಗಮನ : ಸಾರ್ವಜನಿಕರಿಗೆ ಪೋಲಿಸರ ಮಾರ್ಗಸೂಚಿ ಪ್ರಕಟ ಮಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಲಾಗಿರುವ ಬಹುನಿರೀಕ್ಷಿತ…
ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್ಆರ್ ನಗರದ …
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ; ಸಿನಿಮಾಗಳಿಂದ ತಾತ್ಕಾಲಿಕ ಬ್ರೇಕ್ ನಟಿ ಸಮಂತಾ ರುತ್ ಪ್ರಭು ತಾವು ಮೊದಲ…